ಆ್ಯಪ್ನಗರ

43 ಜನರಿಂದ ರಕ್ತದಾನ

ರಟ್ಟೀಹಳ್ಳಿ: ಪಟ್ಟಣದ ಲಯನ್ಸ್‌ ಶಾಲಾ ಆವರಣದಲ್ಲಿಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ 61ನೇ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ43 ಜನ ರಕ್ತದಾನ ಮಾಡಿದರು.

Vijaya Karnataka 8 May 2020, 5:10 pm
ರಟ್ಟೀಹಳ್ಳಿ: ಪಟ್ಟಣದ ಲಯನ್ಸ್‌ ಶಾಲಾ ಆವರಣದಲ್ಲಿಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ 61ನೇ ಜನ್ಮದಿನ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ43 ಜನ ರಕ್ತದಾನ ಮಾಡಿದರು.
Vijaya Karnataka Web blood donation from 43 people
43 ಜನರಿಂದ ರಕ್ತದಾನ


ಈ ಸಂದರ್ಭದಲ್ಲಿಯು.ಬಿ.ಬಣಕಾರ ಮಾತನಾಡಿ, ಲಾಕ್‌ಡೌನ್‌ ಹಿನ್ನೆಲೆಯಲ್ಲಿರಕ್ತ ಸಂಗ್ರಹ ಕುಸಿತವಾಗಿದೆ. ಇದರಿಂದ ರಕ್ತ ಸಿಗುತ್ತಿಲ್ಲ. ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತ ದಾನ ಮಾಡಿರುವುದು ಶ್ಲಾಘನೀಯ ಎಂದರು.

ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ದೇವರಾಜ ನಾಗಣ್ಣನವರ ಮಾತನಾಡಿದರು. ಇದೇ ವೇಳೆ ಅಲೆಮಾರಿ ಕುಟುಂಬಗಳಿಗೆ ಆಹಾರ ಧಾನ್ಯದ ಕಿಟ್‌ ವಿತರಿಸಲಾಯಿತು. ಮಾಜಿ ತಾ.ಪಂ.ಸದಸ್ಯ ಆರ್‌.ಎನ್‌.ಗಂಗೋಳ, ಬಿಜೆಪಿ ತಾಲೂಕಾ ಪ್ರಧಾನ ಕಾರ್ಯದರ್ಶಿ ದೇವರಾಜ ನಾಗಣ್ಣನವರ, ತಾ.ಪಂ.ಅಧ್ಯಕ್ಷ ರಾಜು ಬಣಕಾರ, ಮಹೇಶಣ್ಣ ಗುಬ್ಬಿ, ಯು.ಯು.ಬಣಕಾರ, ಎಸ್‌.ಬಿ.ಪಾಟೀಲ, ಶರತ್‌ ಬಣಕಾರ, ಅನೇಕ ಮುಖಂಡರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ