ಆ್ಯಪ್ನಗರ

‘ಪಂಚಮಸಾಲಿ ಮತ’ ಗ್ರಂಥ ಲೋಕಾರ್ಪಣೆ 28ಕ್ಕೆ

ಹಾವೇರಿ: ಇತಿಹಾಸದಲ್ಲಿ ಪ್ರಥಮ ಬಾರಿಗೆ ಪಂಚಮಸಾಲಿ ಸಮಾಜದ ಗ್ರಂಥವಾಗಿರುವ 'ಪಂಚಮಸಾಲಿ ಮತ' ಎಂಬ ಗ್ರಂಥ ಉತ್ಸವ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಜುಲೈ 28ರಂದು ಗದಗ ನಗರದಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಸೇವಾ ಸಮಿತಿಯ ಕಾರ್ಯದರ್ಶಿ ಎಂ.ಎಸ್‌.ಚಿನ್ನೂರ ತಿಳಿಸಿದರು.

Vijaya Karnataka 26 Jul 2019, 5:00 am
ಹಾವೇರಿ: ಇತಿಹಾಸದಲ್ಲಿ ಪ್ರಥಮ ಬಾರಿಗೆ ಪಂಚಮಸಾಲಿ ಸಮಾಜದ ಗ್ರಂಥವಾಗಿರುವ 'ಪಂಚಮಸಾಲಿ ಮತ' ಎಂಬ ಗ್ರಂಥ ಉತ್ಸವ ಮತ್ತು ಲೋಕಾರ್ಪಣೆ ಕಾರ್ಯಕ್ರಮ ಜುಲೈ 28ರಂದು ಗದಗ ನಗರದಲ್ಲಿ ನಡೆಯಲಿದೆ ಎಂದು ಪಂಚಮಸಾಲಿ ಸೇವಾ ಸಮಿತಿಯ ಕಾರ್ಯದರ್ಶಿ ಎಂ.ಎಸ್‌.ಚಿನ್ನೂರ ತಿಳಿಸಿದರು.
Vijaya Karnataka Web book launch 28 percent of the vote pancamasali
‘ಪಂಚಮಸಾಲಿ ಮತ’ ಗ್ರಂಥ ಲೋಕಾರ್ಪಣೆ 28ಕ್ಕೆ


ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಉಪನ್ಯಾಸಕ ಡಾ.ಡಿ.ಎ.ಉಪಧ್ಯ ಅವರು ವಿರಚಿತ ಪಂಚಮಸಾಲಿ ಸಮಾಜದ ಮೊದಲ ಗ್ರಂಥವಾಗಿದೆ. ಪಂಚಮಸಾಲಿ ಸಮಾಜಕ್ಕೆ ಸುಮಾರು ಎಂಟು ಸಾವಿರ ವರ್ಷಗಳ ಇತಿಹಾಸವಿದ್ದರೂ ಇಲ್ಲಿಯವರೆಗೂ ಸಮಾಜದ ಕುರಿತು ಅಧಿಕೃತವಾಗಿ ಯಾವುದೇ ಗ್ರಂಥಗಳು ಇರದ ಕಾರಣ ಗದಗ ಜಿಲ್ಲೆಯಲ್ಲಿ ಪಂಚಮಸಾಲಿ ಸೇವಾ ಸಮಿತಿಯೂ ಗ್ರಂಥ ರಚನೆ ಮಾಡಿಸಿದೆ ಎಂದು ಹೇಳಿದರು.

ಗ್ರಂಥದಲ್ಲಿ ಸಮಾಜ ನಡೆದು ಬಂದ ದಾರಿ, ಅದರ ಕುರುಹುಗಳು, ಪ್ರಸಂಗಗಳು, ಅಗತ್ಯ ದಾಖಲೆಗಳನ್ನು ಪ್ರಸ್ತಾಪಿಸಿದ್ದಾರೆ. ಈ ಗ್ರಂಥ 900 ಪುಟಗಳು ಆಗುತ್ತಿರುವುದರಿಂದ ಓದುವುದಕ್ಕೆ ಕಷ್ಟವಾಗುತ್ತದೆ ಎಂದು 2 ಗ್ರಂಥಗಳನ್ನು ಮಾಡಲಾಗಿದೆ. ಮೊದಲನೇ ಗ್ರಂಥದಲ್ಲಿ 500 ಪುಟಗಳನ್ನು ಒಳಗೊಂಡಿದ್ದು, ಆ ಗ್ರಂಥವು ಲೋಕಾರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜುಲೈ 28ರಂದು ಬೆಳಗ್ಗೆ 8 ಗಂಟೆಗೆ ನಗರದ ಮುನ್ಸಪಲ್‌ ಹೈಸ್ಕೂಲ್‌ ಮೈದಾನದಿಂದ ಗ್ರಂಥ ಮೆರವಣಿಗೆ ಸಕಲ ವಾದ್ಯಗಳೊಂದಿಗೆ ಪ್ರಾರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಡಾ. ಬಿ.ಆರ್‌. ಅಂಬೇಡ್ಕರ್‌ ಭವನ ತಲುಪಲಿದೆ.

ಅಂದು ಬೆಳಗ್ಗೆ 11 ಗಂಟೆಗೆ ಗ್ರಂಥ ಲೋಕಾರ್ಪಣೆಯಾಗಲಿದೆ. ವಿಜಯಪುರ ಶಾಸಕ ಬಸವರಾಜ ಪಾಟೀಲ ಯತ್ನಾಳ ಉದ್ಘಾಟಿಸುವರು. ನರಗುಂದ ಶಾಸಕ ಸಿ.ಸಿ. ಪಾಠೀಲ ಗ್ರಂಥ ಅನಾವರಣ ಗೊಳಿಸುವರು. ಬೀಳಗಿ ಶಾಸಕ ಮುರಗೇಶ ನಿರಾಣಿ ಗ್ರಂಥ ಬಿಡುಗಡೆ ಮಾಡುವರು.

ಗ್ರಂಥ ರಚನೆಕಾರರಾದ ಡಾ. ಡಿ.ಎ. ಉಪಾಧ್ಯ ಗೌರವ ಸಮರ್ಪಣೆ ಮಾಡುವರು. ನಿವೃತ್ತ ಉಪನ್ಯಾಸಕ ಡಾ. ಎಲ್‌.ವಿ. ಪಾಟೀಲ ಉಪನ್ಯಾಸ ನೀಡುವರು. ಉದ್ದಿಮೆದಾರ ವಿಜಯಕುಮಾರ ಗಡ್ಡಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಗಳಾಗಿ ರೋಣ ಶಾಸಕ ಕಳಕಪ್ಪ ಬಂಡಿ, ಮಾಜಿ ಸಚಿವ ವಿನಯ ಕುಲಕರ್ಣಿ, ಸಂಸದ ಸಂಗಣ್ಣ ಕರಡಿ ಸೇರಿದಂತೆ ಅನೇಕ ಗಣ್ಯರು, ಸಾಹಿತಿಗಳು, ಪಂಚಮಸಾಲಿ ಸಮಾಜದ ಗಣ್ಯರು ಆಗಮಿಸುವರು.

ಈ ಗ್ರಂಥದಲ್ಲಿ ಯಾವ ಮಠದ ಶ್ರೀಗಳ ಅನುಮತಿ ಪಡೆದಿಲ್ಲ. ಅವರಿಗೆ ಕೇಳಿಯೂ ಇಲ್ಲ. ಪಂಚಮಸಾಲಿ ಸಮಾಜದ ಸತ್ಯದ ದಾರಿಯನ್ನು ಹುಡುಕಿ ಸ್ವತಃ ಅಧ್ಯಯನ ಮಾಡಿ ರಚಿಸಿದ ಗ್ರಂಥವಾಗಿದೆ. ಗ್ರಂಥದ ಬಗ್ಗೆ ಸಾಹಿತಿಗಳು ಚರ್ಚೆ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿದ್ದಣ್ಣ ಪಲ್ಲೇದ, ಮಹೇಶ ಕರಿಬಷ್ಠಿ, ಪಿ.ಡಿ. ಶಿರೂರ, ಫಕ್ಕೀರೇಶ ಬಳಿಗಾರ, ಬಸವರಾಜ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ