ಆ್ಯಪ್ನಗರ

ಅರಳಹಳ್ಳಿ ಅಕ್ರಮ ಮರಳುಗಾರಿಕೆಗೆ ಬ್ರೇಕ್‌

ಹಾವೇರಿ: ಸವಣೂರ ತಾಲೂಕ ಅರಳಹಳ್ಳಿ ಗ್ರಾಮದ ಅಮಾಯಕರ ಹೊಲದಲ್ಲಿಅಕ್ರಮ ಮರಳುಗಾರಿಕೆಗೆ ಬುಧವಾರ ಬ್ರೇಕ್‌ ಬಿದ್ದಿದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಜಮೀನಿಗೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬೆಳಗ್ಗೆ ದಾಳಿ ಮಾಡಿದ್ದಾರೆ. ಈ ವೇಳೆ ಅಂದಾಜು ನಾಲ್ಕು ಟ್ಯಾಕ್ಟರ್‌ ಮಣ್ಣು ಮಿಶ್ರಿತ ಮರಳನ್ನು ವಶಪಡಿಸಿಕೊಂಡಿದ್ದಾರೆ.

Vijaya Karnataka 13 Feb 2020, 5:00 am
ಹಾವೇರಿ: ಸವಣೂರ ತಾಲೂಕ ಅರಳಹಳ್ಳಿ ಗ್ರಾಮದ ಅಮಾಯಕರ ಹೊಲದಲ್ಲಿಅಕ್ರಮ ಮರಳುಗಾರಿಕೆಗೆ ಬುಧವಾರ ಬ್ರೇಕ್‌ ಬಿದ್ದಿದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಜಮೀನಿಗೆ ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬೆಳಗ್ಗೆ ದಾಳಿ ಮಾಡಿದ್ದಾರೆ. ಈ ವೇಳೆ ಅಂದಾಜು ನಾಲ್ಕು ಟ್ಯಾಕ್ಟರ್‌ ಮಣ್ಣು ಮಿಶ್ರಿತ ಮರಳನ್ನು ವಶಪಡಿಸಿಕೊಂಡಿದ್ದಾರೆ.
Vijaya Karnataka Web break the illegal sand dune
ಅರಳಹಳ್ಳಿ ಅಕ್ರಮ ಮರಳುಗಾರಿಕೆಗೆ ಬ್ರೇಕ್‌


ಹಾವೇರಿ ತಾಲೂಕ ಕರಜಗಿ ಮತ್ತು ಸವಣೂರ ತಾಲೂಕ ಹಿರೇಮುಗದೂರ ಮಾರ್ಗ ಮಧ್ಯದಲ್ಲಿರುವ ಈ ಅರಳಹಳ್ಳಿ ಗ್ರಾಮದ ನೀಲಪ್ಪ ಮಾದರ ಮತ್ತು ಅವರ ಸಹೋದರರ ಜಮೀನುಗಳಲ್ಲಿಬೇರೆಯವರು ಎಗ್ಗಿಲ್ಲದೇ ಮರಳು ತೆಗೆಯುತ್ತಿರುವ ಕುರಿತು ವಿಜಯ ಕರ್ನಾಟಕ ಮಂಗಳವಾರ ವಿಶೇಷ ವರದಿ ಪ್ರಕಟಿಸುವ ಮೂಲಕ ಜಿಲ್ಲಾಡಳಿತದ ಗಮನ ಸೆಳೆದಿತ್ತು.

ಜಿಲ್ಲೆಯ ಕಂದಾಯ ಮತ್ತು ಪೊಲೀಸ ಇಲಾಖೆ ಅಧಿಕಾರಿಗಳಿಗೆ ಜಮೀನು ಮಾಲಿಕರು ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲಎಂದು ಮಾಲಿಕರು ವಿಕ ಜತೆ ನೋವು ಹಂಚಿಕೊಂಡಿದ್ದರು. ಈ ನಿರ್ಲಕ್ಷೆಯ ವಿರುದ್ಧ ವಿಕ ವಿಶೇಷ ವರದಿ ಪ್ರಕಟಿಸುತ್ತಿದ್ದಂತೆ ಎಚ್ಚೆತ್ತು ಕೊಂಡಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪುಷ್ಪಲತಾ ಅವರ ನಿರ್ದೇ ಶನ ಮೇರೆಗೆ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಮರಳನ್ನು ವಶಪಡಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ