ಕುಮಾರಪಟ್ಟಣ: ಮುದೇನೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಎರಡು ಕೊಠಡಿ ನಿರ್ಮಿಸಿ ಎಂದು ಮುದೇನೂರ ಗ್ರಾಮಸ್ಥರು ಹಾಗೂ ಗ್ರಾಪಂ ಸರ್ವ ಸದಸ್ಯರು ಜಿ ಪಂ ಉಪಾಧ್ಯಕ್ಷೆ ಗಿರಿಜಮ್ಮ ಬ್ಯಾಲದಹಳ್ಳಿ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು.
ಶಾಲೆಯಲ್ಲಿ1ರಿಂದ 7ನೇ ವರ್ಗದ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಉತ್ತಮವಾಗಿದೆ. ಕೊಠಡಿಗಳಿಲ್ಲದೆ ಶಿಕ್ಷಕರು ಮಕ್ಕಳಿಗೆ ಬಯಲಿನಲ್ಲಿಪಾಠ ಮಾಡುವ ಸ್ಥಿತಿ ಇದೆ. ಮಳೆಗಾಲದಲ್ಲಿತೀವ್ರ ತೊಂದರೆಯಾಗುತ್ತದೆ. ತಮ್ಮ ಅನುದಾನದಲ್ಲಾಗಲಿ ಅಥವಾ ಯೋಜನೇತರ ಅನುದಾನದಲ್ಲಿಮುದೇನೂರ ಗ್ರಾಮದ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸದಿದ್ದರೆ ಜಿಲ್ಲಾಡಳಿತದ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಇದೇ ವೇಳೆ ಗ್ರಾಮದ ಹಿರಿಯ ಮುಖಂಡ ಶಿವನಗೌಡ ಗಂಗನಗೌಡ್ರ ಎಚ್ಚರಿಸಿದರು.
ಜಿಪಂ ಸಾಮಾನ್ಯ ಸಭೆಯಲ್ಲಿಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ಮಾತನಾಡಿ ಮುದೇನೂರ ಸರಕಾರಿ ಶಾಲೆಗೆ ಕೊಠಡಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಬ್ಯಾಲದಹಳ್ಳಿ ತಿಳಿಸಿದರು. ಜ್ಯೋತಿ ಗೋವಿಂದಗೌಡ್ರ, ಮಂಜುನಾಥ ಪಿ, ರವೀಂದ್ರಗೌಡ ಪಾಟೀಲ, ಅಶೋಕ್ ಆರ್ ಜಿ, ಶ್ರೀನಿವಾಸ್ ಎ, ಗಣೇಶ ಬಾನಿ, ಸುರೇಶ ಕರೂರ, ಜಗದೀಶ ಹೊಸಳ್ಳಿ, ಶಿವರಾಜ್ ಪತ್ತೇಪುರ ಇತರರು ಇದ್ದರು.
ಶಾಲೆಯಲ್ಲಿ1ರಿಂದ 7ನೇ ವರ್ಗದ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಉತ್ತಮವಾಗಿದೆ. ಕೊಠಡಿಗಳಿಲ್ಲದೆ ಶಿಕ್ಷಕರು ಮಕ್ಕಳಿಗೆ ಬಯಲಿನಲ್ಲಿಪಾಠ ಮಾಡುವ ಸ್ಥಿತಿ ಇದೆ. ಮಳೆಗಾಲದಲ್ಲಿತೀವ್ರ ತೊಂದರೆಯಾಗುತ್ತದೆ. ತಮ್ಮ ಅನುದಾನದಲ್ಲಾಗಲಿ ಅಥವಾ ಯೋಜನೇತರ ಅನುದಾನದಲ್ಲಿಮುದೇನೂರ ಗ್ರಾಮದ ಸರಕಾರಿ ಶಾಲೆಗೆ ಕೊಠಡಿ ನಿರ್ಮಿಸದಿದ್ದರೆ ಜಿಲ್ಲಾಡಳಿತದ ಮುಂದೆ ಉಗ್ರ ಹೋರಾಟ ಮಾಡುವುದಾಗಿ ಇದೇ ವೇಳೆ ಗ್ರಾಮದ ಹಿರಿಯ ಮುಖಂಡ ಶಿವನಗೌಡ ಗಂಗನಗೌಡ್ರ ಎಚ್ಚರಿಸಿದರು.
ಜಿಪಂ ಸಾಮಾನ್ಯ ಸಭೆಯಲ್ಲಿಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ಮಾತನಾಡಿ ಮುದೇನೂರ ಸರಕಾರಿ ಶಾಲೆಗೆ ಕೊಠಡಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಬ್ಯಾಲದಹಳ್ಳಿ ತಿಳಿಸಿದರು. ಜ್ಯೋತಿ ಗೋವಿಂದಗೌಡ್ರ, ಮಂಜುನಾಥ ಪಿ, ರವೀಂದ್ರಗೌಡ ಪಾಟೀಲ, ಅಶೋಕ್ ಆರ್ ಜಿ, ಶ್ರೀನಿವಾಸ್ ಎ, ಗಣೇಶ ಬಾನಿ, ಸುರೇಶ ಕರೂರ, ಜಗದೀಶ ಹೊಸಳ್ಳಿ, ಶಿವರಾಜ್ ಪತ್ತೇಪುರ ಇತರರು ಇದ್ದರು.