ಆ್ಯಪ್ನಗರ

ಹೊಲಕ್ಕೆ ಹೋಗಲು ರಸ್ತೆ ನಿರ್ಮಿಸಿ

ರಟ್ಟೀಹಳ್ಳಿ : ತಾಲೂಕಿನ ಕುಡುಪಲಿ ಗ್ರಾ.ಪಂ. ವ್ಯಾಪ್ತಿಯ ಕುಡುಪಲಿ, ಹಿರೇಮಾದಾಪುರ, ಬಡಸಂಗಾಪುರ ಗ್ರಾಮಗಳಿಗೆ ಸಂಬಂಧಿಸಿದಂತೆ ಬುಧವಾರ ಕುಡುಪಲಿ ಗ್ರಾಮದ ಶ್ರೀ ವೀರಮಹೇಶ್ವರ, ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ2020-21ನೇ ಸಾಲಿನ 1ನೇ ಸುತ್ತಿನ ಗ್ರಾಮಸಭೆ ನಡೆಯಿತು.

Vijaya Karnataka 11 Sep 2020, 5:00 am
ರಟ್ಟೀಹಳ್ಳಿ : ತಾಲೂಕಿನ ಕುಡುಪಲಿ ಗ್ರಾ.ಪಂ. ವ್ಯಾಪ್ತಿಯ ಕುಡುಪಲಿ, ಹಿರೇಮಾದಾಪುರ, ಬಡಸಂಗಾಪುರ ಗ್ರಾಮಗಳಿಗೆ ಸಂಬಂಧಿಸಿದಂತೆ ಬುಧವಾರ ಕುಡುಪಲಿ ಗ್ರಾಮದ ಶ್ರೀ ವೀರಮಹೇಶ್ವರ, ಶ್ರೀ ಶರಣಬಸವೇಶ್ವರ ಕಲ್ಯಾಣ ಮಂಟಪದಲ್ಲಿ2020-21ನೇ ಸಾಲಿನ 1ನೇ ಸುತ್ತಿನ ಗ್ರಾಮಸಭೆ ನಡೆಯಿತು.
Vijaya Karnataka Web 10 RATTIHALLI 1_23
ಕುಡುಪಲಿಯಲ್ಲಿನಡೆದ ಗ್ರಾಮಸಭೆಯಲ್ಲಿಪಿಡಿಒ ಪ್ರಕಾಶ ಸುಂಕಾಪುರ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷ ನಜೀರಸಾಬ ದೊಡ್ಡಮನಿ, ಉಪಾಧ್ಯಕ್ಷೆ ನಾಗವ್ವ ಗೋಣಗೇರ ಇದ್ದರು.


ಕುಡುಪಲಿ ರೈತರಿಂದ ತುಂಬಿದ ದೊಡ್ಡ ಗ್ರಾಮ. ರೈತರು ತಮ್ಮ ಜಮೀನುಗಳಿಗೆ ಹೋಗುವುದಕ್ಕೆ ದಾರಿ ಇಲ್ಲದಂತಾಗಿದೆ. ರೈತರು ಓಡಾಡುವ ಪ್ರಮುಖ ರಸ್ತೆಗಳನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಲ್ಲಿನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಪಿಡಿಒ ಪ್ರಕಾಶ ಸುಂಕಾಪುರ ಮಾತನಾಡಿ, ಎನ್‌ಆರ್‌ಜಿಎ ಯೋಜನೆಯಲ್ಲಿಶೇ.10ರಷ್ಟು ಮಾತ್ರ ರಸ್ತೆ ನಿರ್ಮಾಣಕ್ಕೆ ಅವಕಾಶವಿದೆ. ಮಾರ್ಗಸೂಚಿಯಲ್ಲಿರಸ್ತೆಗಳಿಗೆ ಅತಿಹೆಚ್ಚು ಅವಕಾಶವಿಲ್ಲ. ಇದರಿಂದ ಜಮೀನುಗಳಿಗೆ ಹೋಗುವ ರಸ್ತೆಗಳನ್ನು ನಿರ್ಮಿಸಲು ಆಗುತ್ತಿಲ್ಲಎಂದರು.

ರಸ್ತೆ ಇಲ್ಲದೇ ರೈತರಿಗೆ ಸಾಕಷ್ಟು ಸಮಸ್ಯೆಯಾಗಿದೆ, ಕೂಡಲೇ ರಸ್ತೆ ನಿರ್ಮಿಸಬೇಕೆಂದು ಜನರು ಒತ್ತಾಯಿಸಿದರು. ಬಳಿಕ ಗ್ರಾಮದಲ್ಲಿನೂತನವಾಗಿ ನಿರ್ಮಿಸಿರುವ ಸರಕಾರಿ ಆಸ್ಪತ್ರೆ ಕಟ್ಟಡವನ್ನು ಉದ್ಘಾಟಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಜನರು ಒತ್ತಾಯ ಮಾಡಿದರು.

ಗ್ರಾಮಸಭೆಯಲ್ಲಿ2020-21ನೇ ಸಾಲಿನ ಮನ್ರೇಗಾ ಯೋಜನೆಯ ಹೆಚ್ಚುವರಿ ಕ್ರಿಯಾ ಯೋಜನೆ ತಯಾರಿಸುವುದು, ಬಚ್ಚಲುಗುಂಡಿ, ಕೈತೋಟ ಮುಂತಾದ ವೈಯಕ್ತಿಕ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಲಾಯಿತು. ಗ್ರಾಮೀಣ ನೀವೇಶನ ಯೋಜನೆಯಲ್ಲಿಫಲಾನುಭವಿಗಳ ಆಯ್ಕೆ ಮಾಡಲಾಯಿತು. ಗ್ರಾಮಸಭೆಯಲ್ಲಿಹಲವು ವಿಷಯಗಳು ಚರ್ಚೆಯಾದವು. ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ ಸಹಾಯಕ ಕೃಷಿ ಅಧಿಕಾರಿ ಎ.ವಿ.ಪೂಜಾರ ಅವರು ಕೃಷಿ ಇಲಾಖೆಯಲ್ಲಿರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ರೈತರು ಕೃಷಿ ಇಲಾಖೆಯಲ್ಲಿಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.

ಗ್ರಾ.ಪಂ.ಅಧ್ಯಕ್ಷ ನಜೀರಸಾಬ ದೊಡ್ಡಮನಿ, ಉಪಾಧ್ಯಕ್ಷೆ ನಾಗವ್ವ ಗೋಣಗೇರ, ತಾ.ಪಂ.ಸದಸ್ಯ ಹೇಮಣ್ಣ ಮುದರಡ್ಡೇರ, ಸಹಾಯಕ ಕೃಷಿ ಅಧಿಕಾರಿ ಎ.ವಿ.ಪೂಜಾರ, ಸದಸ್ಯರಾದ ಬಸನಗೌಡ ಕರೇಗೌಡ್ರ, ರವಿ ಸಣ್ಣದ್ಯಾವಣ್ಣನವರ, ನಾಗರಾಜ ಚೌಡಕ್ಕನವರ, ಬಸನಗೌಡ ಸಂಕಣ್ಣನವರ ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ