ಆ್ಯಪ್ನಗರ

ಕಲಿಕೆಯಲ್ಲಿ ಶ್ರದ್ಧೆ,ಆತ್ಮವಿಶ್ವಾಸ ಬೆಳೆಸಿಕೊಳ್ಳಿ:ಪ್ರಕಾಶಾನಂದಜಿ ಶ್ರೀ

ರಾಣೇಬೆನ್ನೂರ: ವಿದ್ಯಾರ್ಥಿಗಳು ಕಲಿಕೆಯಲ್ಲಿಶ್ರದ್ಧೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಜ್ಞಾನ ಸಾಧನೆ ಮಾಡಬೇಕು ಎಂದು ರಾಣೇಬೆನ್ನೂರಿನ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ನುಡಿದರು.

Vijaya Karnataka 7 Nov 2019, 5:00 am
ರಾಣೇಬೆನ್ನೂರ: ವಿದ್ಯಾರ್ಥಿಗಳು ಕಲಿಕೆಯಲ್ಲಿಶ್ರದ್ಧೆ ಮತ್ತು ಆತ್ಮವಿಶ್ವಾಸ ಬೆಳೆಸಿಕೊಳ್ಳುವ ಮೂಲಕ ಜ್ಞಾನ ಸಾಧನೆ ಮಾಡಬೇಕು ಎಂದು ರಾಣೇಬೆನ್ನೂರಿನ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ ನುಡಿದರು.
Vijaya Karnataka Web build diligence and confidence in learning prakashanandaji sri
ಕಲಿಕೆಯಲ್ಲಿ ಶ್ರದ್ಧೆ,ಆತ್ಮವಿಶ್ವಾಸ ಬೆಳೆಸಿಕೊಳ್ಳಿ:ಪ್ರಕಾಶಾನಂದಜಿ ಶ್ರೀ


ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ.ಪೂ.ಕಾಲೇಜಿನ ಎನ್ನೆಸ್ಸೆಸ್‌ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿಪಾಲ್ಗೊಂಡು ಮಾತನಾಡಿದರು. ಇಂದಿನ ದಿನಗಳಲ್ಲಿಪ್ರತಿಯೊಬ್ಬ ವಿದ್ಯಾರ್ಥಿಯು ಸಮಾಜ ಸುಧಾರಕರಾಗಬೇಕು. ಸದೃಢ ದೇಶ ನಿರ್ಮಾಣದಲ್ಲಿಯುವಜನತೆಯ ಪಾತ್ರ ಅಮೂಲ್ಯವಾಗಿದೆ. ಮಾಡುವ ಕೆಲಸದಲ್ಲಿಶ್ರದ್ಧೆ ಮತ್ತು ನಂಬಿಕೆ ಇದ್ದಲ್ಲಿಅದು ಯಶಸ್ಸನ್ನು ತಂದು ಕೊಡುತ್ತದೆ, ಕತ್ತಲಿಂದ ಬೆಳಕಿನ ಕಡೆಗೆ ಜೀವನವನ್ನು ರೂಪಿಸಿಕೊಂಡು ಬದುಕಿನಲ್ಲಿಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ದಾವಣಗೆರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ಪ್ರಕಾಶ ಹಲಗೇರಿ, ಮಂಜಣ್ಣ ಲಿಂಗದಹಳ್ಳಿ, ಜಿ.ಜಿ.ಹೊಟ್ಟಿಗೌಡ್ರ ಮಾತನಾಡಿದರು. ಪ್ರಾ.ಪಿ.ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿರಾಜ್ಯ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಎಚ್‌.ಶಿವಾನಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಜಿಪಂ ಸದಸ್ಯೆ ಗದಿಗೆವ್ವ ದೇಸಾಯಿ, ಸಣ್ಣಗೌಡ ಜಾಪಾಳಿ, ಕಣ್ಣಪ್ಪ ಹೊರಗಿ, ಕೋಕಪ್ಪ ಸಂಗಾಪುರ, ಪ್ರಕಾಶ ಬಳ್ಳಾಪುರ, ಬಿ.ವಿ.ಕುಡುಪಲಿ, ವಿ.ಪಿ. ಪೋಲಿಸಗೌಡ್ರ, ಶಂಕರಗೌಡ ಕುಸಗೂರ, ವಿನಯ, ಎಚ್‌.ಪಿ.ರಂಗಣ್ಣನವರ, ಎಂ.ಶಿವಕುಮಾರ, ಚನ್ನಬಸಪ್ಪ ಸಂಗಣ್ಣನವರ, ಎಂ.ಡಿ.ಹೊನ್ನಮ್ಮನವರ, ರುದ್ರಪ್ಪ ಮಾರೇರ, ಬಸನಗೌಡ ಕುಸಗೂರ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ