ಆ್ಯಪ್ನಗರ

ಬಸ್‌ ನಿಲ್ದಾಣ ಕಾಂಕ್ರೀಟ್‌ ಕಾಮಗಾರಿಗೆ ಚಾಲನೆ

ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಬಸ್‌ ನಿಲ್ದಾಣ ಆವರಣವನ್ನು 43.51 ಲಕ್ಷ ರೂ.ದಲ್ಲಿ ಕಾಂಕ್ರೀಟ್‌ ಮಾಡುವ ಕಾಮಗಾರಿಗೆ ಶುಕ್ರವಾರ ಶಾಸಕ ಸಿ.ಎಂ.ಉದಾಸಿ ಚಾಲನೆ ನೀಡಿದರು.

Vijaya Karnataka 12 Jan 2019, 5:01 pm
ಹಾನಗಲ್ಲ: ತಾಲೂಕಿನ ಬಮ್ಮನಹಳ್ಳಿ ಗ್ರಾಮದ ಬಸ್‌ ನಿಲ್ದಾಣ ಆವರಣವನ್ನು 43.51 ಲಕ್ಷ ರೂ.ದಲ್ಲಿ ಕಾಂಕ್ರೀಟ್‌ ಮಾಡುವ ಕಾಮಗಾರಿಗೆ ಶುಕ್ರವಾರ ಶಾಸಕ ಸಿ.ಎಂ.ಉದಾಸಿ ಚಾಲನೆ ನೀಡಿದರು.
Vijaya Karnataka Web bus station drive for concrete work
ಬಸ್‌ ನಿಲ್ದಾಣ ಕಾಂಕ್ರೀಟ್‌ ಕಾಮಗಾರಿಗೆ ಚಾಲನೆ


ಈ ಸಂದರ್ಭದಲ್ಲಿ ಮಾತನಾಡಿದ ಅವರು, ತಾಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಉತ್ತಮವಾಗಿವೆ, ರಸ್ತೆ ಸಾರಿಗೆ ಬಸ್‌ ಸಂಚಾರ ನಿಗದಿತ ಸಮಯಕ್ಕೆ ನಡೆಯುತ್ತಿದೆ, ತಾಲೂಕಿನ ತಿಳವಳ್ಳಿ, ಚಿಕ್ಕಾಂಶಿ ಹೊಸೂರ ಗ್ರಾಮದ ಬಸ್‌ ನಿಲ್ದಾಣದ ಆವರಣಕ್ಕೆ ಕಾಂಕ್ರೀಟ್‌ ಕಾಮಗಾರಿಗೆ ಸದ್ಯದಲ್ಲಿ ಆರಂಭ ಪಡೆಯಲಿದೆ ಎಂದರು.

ವರ್ದಿ-ಕಾತೂರ ರಸ್ತೆ 24 ಕೋಟಿ ರೂ.ಯಲ್ಲಿ ಮತ್ತು ಕರಗುದರಿ ಕ್ರಾಸ್‌-ಬಂಕಾಪೂರ ರಸ್ತೆ 8 ಕೋಟಿ ರೂ. ಮೊತ್ತದಲ್ಲಿ ನಿರ್ಮಾಣ ಕಾಮಗಾರಿ ಆರಂಭಗೊಳ್ಳಲಿದೆ. 8 ಕೋಟಿ ರೂ.ಮೊತ್ತದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಪ್ರಮುಖವಾದ 16 ಕೆರೆಗಳ ಪುನಶ್ಚೇತನಕ್ಕೆ ಕಾರ್ಯಕ್ಕೆ ಟೆಂಡರ್‌ ಕರೆಯಲಾಗಿದೆ ಎಂದು ಉದಾಸಿ ಹೇಳಿದರು.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ಸಾರಿಗೆ ಅಧಿಕಾರಿ ಮುಜುಂದಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಬಸ್‌ ಸಂಚಾರ ನಮ್ಮ ಮುಖ್ಯ ಆದ್ಯತೆ, ಖಾಸಗಿ ವಾಹನಗಳ ಬದಲಾಗಿ ಇಲಾಖೆ ಬಸ್‌ಗಳಲ್ಲಿ ಸುರಕ್ಷಿತ ಸಂಚಾರಕ್ಕೆ ಜನರು ಮುಂದಾಗಬೇಕು ಎಂದು ಮನವಿ ಮಾಡಿದರು.

ಹಾವೇರಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಬೆಳಗಾವಿ ಮಾತನಾಡಿ, ಸಿಬ್ಬಂದಿ ಮತ್ತು ವಾಹನಗಳ ಕೊರತೆ ಮಧೆæ್ಯಯೂ ನಮ್ಮ ಇಲಾಖೆ ಜನರ ಸಮರ್ಪಕ ಸೇವೆಗೆ ಶ್ರಮಿಸುತ್ತಿದೆ ಎಂದರು.

ಹಾನಗಲ್ಲ ಸಾರಿಗೆ ಘಟಕದ ವ್ಯವಸ್ಥಾಪಕ ಆರ್‌.ಸರ್ವೇಶ, ಹಾನಗಲ್ಲ ಘಟಕದಿಂದ 85 ಮಾರ್ಗದಲ್ಲಿ ಬಸ್‌ ಸಂಚಾರ ವ್ಯವಸ್ಥೆ ಇದೆ, ಹೊರ ರಾಜ್ಯದ ಪ್ರಮುಖ ಪಟ್ಟಣ, ಧಾರ್ಮಿಕ ಕ್ಷೇತ್ರಗಳಿಗೆ ಬಸ್‌ ಸಂಚಾರ ಇದೆ. ಘಟಕದಲ್ಲಿ 84 ಬಸ್‌ಗಳಿವೆ ಎಂದು ಮಾಹಿತಿ ನೀಡಿದರು.

ಗ್ರಾ.ಪಂ ಅಧ್ಯಕ್ಷೆ ಕವಿತಾ ಹಾವಣಗಿ, ಉಪಾಧ್ಯಕ್ಷೆ ಗೀತಾ ಚಿಕ್ಕಣಗಿ, ತಾ.ಪಂ ಸದಸ್ಯ ಶಂಕ್ರಪ್ಪ ಪ್ಯಾಟಿ, ಜಿ.ಪಂ ಮಾಜಿ ಸದಸ್ಯ ಪದ್ಮನಾಭ ಕುಂದಾಪೂರ, ಇಲಾಖೆ ಎಂಜನಿಯರ್‌ ಶಿವಮೂರ್ತಿ, ರಾಮದಾಸ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ