ಆ್ಯಪ್ನಗರ

ಸಿ.ಸಿ. ಟಿವಿ ಇಲ್ಲದ ಹಾವೇರಿ ಸ್ಟೇಶನ್‌

ರಾಜು ನದಾಫ ಹಾವೇರಿ: ಜಿಲ್ಲಾಕೇಂದ್ರ ಹಾವೇರಿ ರೈಲ್ವೆ ನಿಲ್ದಾಣ ಇನ್ನೂ ಓಬೇರಾಯನ ಕಾಲದ ಪಳೆಯುಳಿಕೆಯಾಗಿದೆ. ನಿಲ್ದಾಣದೊಳಗೆ ಏನೇ ನಡೆದರೂ ಸಿ.ಸಿ. ಟಿವಿ ಇಲ್ಲದ ಕಾರಣಕ್ಕೆ ಅಪರಾಧಿಗಳು ಸಾಕ್ಷ್ಯಾಧಾರ ವಿಲ್ಲದೇ ಬಚಾವ್‌ ಆಗುವ ಪರಿಸ್ಥಿತಿ ಇದೆ. ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿತ್ಯದ ಮಾತಾಗಿದೆ.

Vijaya Karnataka 7 Nov 2019, 5:00 am
ರಾಜು ನದಾಫ ಹಾವೇರಿ: ಜಿಲ್ಲಾಕೇಂದ್ರ ಹಾವೇರಿ ರೈಲ್ವೆ ನಿಲ್ದಾಣ ಇನ್ನೂ ಓಬೇರಾಯನ ಕಾಲದ ಪಳೆಯುಳಿಕೆಯಾಗಿದೆ. ನಿಲ್ದಾಣದೊಳಗೆ ಏನೇ ನಡೆದರೂ ಸಿ.ಸಿ. ಟಿವಿ ಇಲ್ಲದ ಕಾರಣಕ್ಕೆ ಅಪರಾಧಿಗಳು ಸಾಕ್ಷ್ಯಾಧಾರ ವಿಲ್ಲದೇ ಬಚಾವ್‌ ಆಗುವ ಪರಿಸ್ಥಿತಿ ಇದೆ. ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆ ಇಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿತ್ಯದ ಮಾತಾಗಿದೆ.
Vijaya Karnataka Web c c haveri station with no tv
ಸಿ.ಸಿ. ಟಿವಿ ಇಲ್ಲದ ಹಾವೇರಿ ಸ್ಟೇಶನ್‌


ಹುಬ್ಬಳ್ಳಿ ಮತ್ತು ಬೆಂಗಳೂರ ಜತೆಗೆ ಮೈಸೂರ ಕಡೆಗೆ ನಿತ್ಯ 52 ರೈಲುಗಳು ಸಂಚರಿಸುವ ನಿಲ್ದಾಣದಿಂದ ಪ್ರತಿನಿತ್ಯ ಕನಿಷ್ಠ 1500 ಕ್ಕೂ ಹೆಚ್ಚು ಟಿಕೆಟ್‌ಗಳು, 1.20 ಲಕ್ಷ ರೂ.ಗೂ ಅಧಿಕ ಪ್ರಯಾಣಿಕರಿಂದ ಆದಾಯ ಹಾಗೂ ತಿಂಗಳಿಗೆ ಕನಿಷ್ಠ 25 ಲಕ್ಷ ರೂ.ಗೂ ಅಧಿಕ ಸಗಟು ಆದಾಯಕ್ಕೆ ಈ ನಿಲ್ದಾಣ ಬಿ.ಕ್ಲಾಸ್‌ ಗ್ರೇಡ್‌ ಪಡೆದುಕೊಂಡಿದೆ. ಕೇಂದ್ರ ರೈಲ್ವೆ ಇಲಾಖೆಗೆ ಆರ್ಥಿಕ ಸಂಪನ್ಮೂಲ ನೀಡುತ್ತಿದ್ದರೂ ಹೈಕ್ಲಾಸ್‌ ಕಟ್ಟಡ ತಿರುಕನ ಕನಸಾಗಿಯೇ ಉಳಿದಿದೆ.

ಕಳ್ಳರ ಕೈಚಳಕ ಕೇಂದ್ರ: ಭೌಗೋಳಿಕ ಮಧ್ಯವರ್ತಿ ಜಿಲ್ಲೆ, ಧಾರ್ಮಿಕ ಸುಕ್ಷೇತ್ರಗಳ ಜತೆಗೆ ಪ್ರವಾಸೋದ್ಯಮ ಕೇಂದ್ರವೆನ್ನುವ ಕಾರಣಕ್ಕೆ ಈ ನಿಲ್ದಾಣಕ್ಕೆ ನಿತ್ಯ ಸಹಸ್ರಾರು ಪ್ರಯಾಣಿಕರು ಬಂದು-ಹೋಗುತ್ತಿರುತ್ತಾರೆ. ಈ ಅಂಶ ಚಾಲಾಕಿ ಕಳ್ಳರಿಗೆ ಹಾವೇರಿ, ರಾಣೇಬೆನ್ನೂರ ಮತ್ತು ಯಲವಗಿ ರೈಲ್ವೆ ನಿಲ್ದಾಣಗಳು ಅತ್ಯಂತ ಸುರಕ್ಷತೆ ಮತ್ತು ಕೈಚಳಕ ತೋರಿಸಿ ಅಮಾಯಕ ಪ್ರಯಾಣಿಕರಿಗೆ ಯಾಮಾರಿಸಿ ಕಳ್ಳತನ ಮಾಡಲು ಹೇಳಿ ಮಾಡಿಸಿದ ಕೇಂದ್ರಗಳಾಗಿ ಹೊರಹೊಮ್ಮಿವೆ.

ಠಾಣೆಯೇ ಇಲ್ಲ: ಹಾವೇರಿ ರೈಲ್ವೆ ನಿಲ್ದಾಣದಲ್ಲಿಆರ್‌ಪಿಎಫ್‌ (ರೈಲ್ವೆ ಪೊಲೀಸ ಭದ್ರತಾ ಠಾಣೆ) ಸೌಲಭ್ಯವನ್ನು ಮಾತ್ರ ಒಳಗೊಂಡಿದ್ದು, ಈ ಠಾಣೆಯ ಅಧಿಕಾರಿ ಸಿಬ್ಬಂದಿ ತಮ್ಮ ರೈಲ್ವೆ ಇಲಾಖೆಗೆ ಸೇರಿರುವ ಆಸ್ತಿ ರಕ್ಷಣೆ ಮಾಡುವ ಕೆಲಸಕ್ಕೆ ಮಾತ್ರ ಸೀಮಿತರಾಗಿದ್ದಾರೆಯೇ ವಿನಃ ಕಳ್ಳತನ, ಸಾವು, ದರೋಡೆ, ಅವಘಡ ಪ್ರಕರಣ ಇವರಿಗೆ ಸಂಬಂಧಿಸಿಲ್ಲ.

ಈ ಘಟನಾವಳಿಗೆ ಸಂಬಂಧಿಸಿದ ಎಲ್ಲಪ್ರಕರಣಗಳು ರಾಜ್ಯ ಸರಕಾರದ ಪೊಲೀಸ ಇಲಾಖೆಗೆ ಸೇರಿದೆ. ಗೃಹ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ಕಾರಣಕ್ಕೆ ರೈಲ್ವೆ ನಿಲ್ದಾಣದಲ್ಲೂರೈಲ್ವೆ ಪೊಲೀಸ ಠಾಣೆ ಸ್ಥಾಪಿಸಲಾಗುತ್ತದೆ. ಹಾವೇರಿ ಜಿಲ್ಲಾಕೇಂದ್ರವಾಗಿದ್ದರೂ ರಾಣೇಬೆನ್ನೂರ ಹೊರ ಠಾಣೆ ವ್ಯಾಪ್ತಿಗೇ ಒಳಪಟ್ಟಿದೆ. ಏನೇ ಅನಾಹುತ, ಅವಘಡ ಸಂಭವಿಸಿದರೂ ಈ ಠಾಣೆಯ ಸಿಬ್ಬಂದಿಗಳೇ ಗತಿ. ರಾಣೇಬೆನ್ನೂರನಿಂದ ಕುಂದಗೋಳ ವ್ಯಾಪ್ತಿಯವರೆಗೂ ಈ ಇಬ್ಬರು ಸಿಬ್ಬಂದಿಗಳೇ ತ್ವರಿತವಾಗಿ ಸಹಾಯಕ್ಕೆ ಧಾವಿಸಿ ನೆರವು ನೀಡಲು ಮತ್ತು ತಪ್ಪಿತಸ್ಥರ ವಿರುದ್ಧ ಕೇಸ್‌ ದಾಖಲಿಸುವುದು ಅಸಾಧ್ಯ ಎನ್ನುವ ಪ್ರಶ್ನೆ ಪ್ರಯಾಣಿಕರ ವಲಯದಿಂದಲೂ ವ್ಯಕ್ತವಾಗಿದೆ.

ಪ್ರಕರಣ ಹೆಚ್ಚಳ: ರಾಣೇಬೆನ್ನೂರ ಠಾಣೆ ಮೂಲಗಳ ಪ್ರಕಾರ, ಪ್ರಯಾಣಿಕರ ಚೈನ್‌, ಬ್ಯಾಗ್‌, ಪರ್ಸ್‌ ಕಳ್ಳತನದ ಪ್ರಕರಣಗಳೇ ಹೆಚ್ಚು. ಆತ್ಮಹತ್ಯೆ ಪ್ರಕರಣಗಳು ಸಹ ಹೆಚ್ಚುತ್ತಲೇ ಇವೆ. ಸಣ್ಣ-ಪುಟ್ಟ ಪ್ರಕರಣಗಳಿಗಂತೂ ಲೆಕ್ಕವೇ ಇಲ್ಲ. ಲೈಂಗಿಕ ಕಿರುಕುಳ ಸಂಭವಿಸಿದಲ್ಲಿಯಾರು ಹಿಡಿಯಬೇಕೆನ್ನುವುದು? ಸಹ ಯಕ್ಷಪ್ರಶ್ನೆಯೇ ಆಗಿದೆ.

ಬೇಡಿಕೆ ಏನು?: ಆವರಣದಲ್ಲಿಸಿ.ಸಿ. ಟಿವಿ, ಡೋರ್‌ ಮತ್ತು ಹ್ಯಾಂಡ್‌ ಮೆಟಲ್‌ ಡಿಟಕ್ಟರ್‌ ಯಂತ್ರ. ರೈಲ್ವೆ ಪ್ಲಾಟ್‌ಫಾಮ್‌ರ್‍ ನಂ.1 ರಲ್ಲಿಫಲಕಗಳು (ಸೈನ್‌ಬೋರ್ಡ್ಸ್), ಎಟಿಎಂ ವ್ಯವಸ್ಥೆ. ಪ್ರಯಾಣಿಕ ರಿಗಾಗಿ ವಿಶ್ರಾಂತಿ ಗೃಹ ಜತೆಗೆ ಊಟ ಮತ್ತು ಉಪಹಾರ ಗೃಹ. ಅಂಬ್ಯೂಲೆನ್ಸ್‌ ವ್ಯವಸ್ಥೆ ಜತೆಗೆ ತುರ್ತು ಚಿಕಿತ್ಸೆಗೆ ವೈದ್ಯರ ನೇಮಕ. ಸುಸಜ್ಜಿತ ರೈಲ್ವೆ ನಿಲ್ದಾಣ ಹೆಚ್ಚು ಬೇಡಿಕೆ ಇದೆ. ಬಿಕನೇರ್‌ ಮತ್ತು ಚಂದಿಘಡ ಎಕ್ಸಪ್ರೆಸ್‌ ರೈಲು ನಿಲುಗಡೆ ಅತ್ಯಗತ್ಯವಿದೆ.

ಒಟ್ಟಿನಲ್ಲಿಆದಾಯ ಮತ್ತು ಪ್ರಯಾಣಿಕರ ದಟ್ಟಣೆ ಕಾರಣಕ್ಕೆ ಹಾವೇರಿ ರೈಲ್ವೆ ನಿಲ್ದಾಣಕ್ಕೆ ಬಂದಿ ಳಿದು-ಹೋಗುವ ಪ್ರಯಾಣಿಕರ ಭದ್ರತೆಗೆ ಸುಸಜ್ಜಿತ ಪೊಲೀಸ ಠಾಣೆ ಮತ್ತು ಭದ್ರತೆಗೆ ಅಗತ್ಯ ವಿರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿಸಂಸದರ ಕ್ರಮ ಏನು? ಕಾದು ನೋಡಬೇಕಿದೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ