ಆ್ಯಪ್ನಗರ

ಸಮಯ ಅತ್ಯಮೂಲ್ಯ ಸದ್ಭಳಕೆ ಮಾಡಿಕೊಳ್ಳಲು ಕರೆ

ಹಿರೇಕೆರೂರು : ಶಿಕ್ಷಣದಿಂದ ಮಾತ್ರ ಸಮಾಜದಲ್ಲಿವ್ಯಕ್ತಿತ್ವ ಪೂರ್ಣಗೊಳ್ಳುತ್ತದೆ, ಸಮಯ ಅತ್ಯಮೂಲ್ಯವಾದದ್ದು ಹರಿಯುವ ನೀರಿನ ಜತೆ ಹೋಗುವ ಕಸಕಡ್ಡಿ ಆಗಬೇಡಿ, ನೀರಿನ ವಿರುದ್ಧ ಈಜುವ ಮೀನುಗಳು ನೀವಾಗಿ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್‌.ಸಾಗರ್‌ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

Vijaya Karnataka 28 Aug 2019, 5:00 am
ಹಿರೇಕೆರೂರು : ಶಿಕ್ಷಣದಿಂದ ಮಾತ್ರ ಸಮಾಜದಲ್ಲಿವ್ಯಕ್ತಿತ್ವ ಪೂರ್ಣಗೊಳ್ಳುತ್ತದೆ, ಸಮಯ ಅತ್ಯಮೂಲ್ಯವಾದದ್ದು ಹರಿಯುವ ನೀರಿನ ಜತೆ ಹೋಗುವ ಕಸಕಡ್ಡಿ ಆಗಬೇಡಿ, ನೀರಿನ ವಿರುದ್ಧ ಈಜುವ ಮೀನುಗಳು ನೀವಾಗಿ ಎಂದು ಅಂತರಾಷ್ಟ್ರೀಯ ಶಿಕ್ಷಣ ತಜ್ಞ ಎ.ಎಚ್‌.ಸಾಗರ್‌ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
Vijaya Karnataka Web call to make time worthwhile
ಸಮಯ ಅತ್ಯಮೂಲ್ಯ ಸದ್ಭಳಕೆ ಮಾಡಿಕೊಳ್ಳಲು ಕರೆ


ಅವರು ಮಂಗಳವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾ ಭವನದಲ್ಲಿ2019-20ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್ನೆಸ್ಸೆಸ್ಸ, ರೆಡ್‌ಕ್ರಾಸ್‌, ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾಂರಭವನ್ನು ಉದ್ಘಾಟಿಸಿ ಮಾತನಾಡಿ, ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಸಕ್ರೀಯವಾಗಿ ಭಾಗವಹಿಸಿದಾಗ ಆತ್ಮವಿಶ್ವಾಸ ಹೆಚ್ಚುವ ಜತಗೆ ಸಂಶೋಧನತ್ಮಾಕ ಗುಣಗಳು ಬೆಳೆಯಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಸಮಯ ಹಾಗೂ ಸಮುದ್ರದ ಅಲೆಗಳು ಯಾರಿಗಾಗಿಯೂ ಕಾಯುವುದಿಲ್ಲ. ಆದ್ಧರಿಂದ ಶಿಕ್ಷಣ ಪಡೆಯುವಾಗ ಸಿಗುವ ಅಮೂಲ್ಯವಾದ ಸಮಯವನ್ನು ಸದ್ಭಳಕೆ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಲಿಕೆ ನಿರಂತರ ಪ್ರಕ್ರಿಯೆ, ನಿತ್ಯ ಹೊಸತನ್ನು ಕಲಿಯುವ ಹಂಬಲ ವಿದ್ಯಾರ್ಥಿಗಳಾದ್ದಗಬೇಕು.

ಕಲಿಕೆಯಲ್ಲಿವಿಮರ್ಶೆಗಳು ಅನಿವಾರ್ಯ ಅವುಗಳನ್ನು ಮೆಟ್ಟಿ ನಿಲ್ಲಬೇಕು. ಆಂತರಿಕ ಅಂಕ ಮತ್ತು ಹಾಜರಾತಿಗಾಗಿ ಕಾಲೇಜಿಗೆ ಬರುವ ಮನೋಭಾವ ನಮ್ಮದಾಗದೇ, ಆಸಕ್ತಿಯಿಂದ ಕಲಿಕೆಯಲ್ಲಿ

ತೊಡಗಿಸಿಕೊಳ್ಳಬೇಕು. ಕೀಳರಿಮೆ ತೊರದು, ಸೋಲನ್ನು ಸವಾಲಿಗಿ ಸ್ವೀಕರಿಸಿ ಅವಿರತ ಪ್ರಯತ್ನದೊಂದಿಗೆ ಗೆಲುವು ಪಡೆದು ಸಾಧನೆ ಮಾಡುವ ಮೂಲಕ ಇತರರಿಗೆ ಸ್ಪೂರ್ತಿಯಾಗುವ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಪ್ರಾಚಾರ್ಯ ಡಾ.ಎಸ್‌.ಪಿ.ಗೌಡ್ರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರೊ. ಎಂ.ಬಿ.ಬದನೆಕಾಯಿ, ಡಾ.ಎಲ್‌.ಎಂ.ಪೂಜಾರ, ಪ್ರೊ.ಎಸ್‌.ಬಿ.ಭಜಂತ್ರಿ, ಪ್ರೊ. ಬಿ.ಎಂ.ರಾಮಚಂದ್ರಪ್ಪ, ಪ್ರೊ.ಪಿ.ಐ.ಸಿದ್ದನಗೌಡ್ರ, ಪ್ರೊ.ಕೆ.ಸುಜಾತಾ, ಪ್ರೊ.ಎಂ.ನವೀನ್‌, ಪ್ರೊ. ಯತೀಶ್‌, ಎಲ್‌.ಜಗದೀಶ, ಶಿವಾನಂದ ಸಂಗಾಪುರ, ಎಸ್‌.ಎಂ.ಶರತ್‌ಕುಮಾರ, ಸಂದೀಪ್‌ ಮಾಯಾಚಾರಿ, ಶಿವನಗೌಡ ಭಂಗಿಗೌಡ್ರ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಾಂಸ್ಕೃತಿಕ ವಿಭಾಗದ ಸಂಚಾಲಕಿ ಕೆ.ಸುಜಾತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್‌.ಬಿ.ಬಜಂತ್ರಿ ಸ್ವಾಗತಿಸಿದರು, ಪ್ರೊ.ವಿ.ಟೀನಾ ನಿರೂಪಿಸಿದರು, ಎಂ.ಗೀತಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ