ಆ್ಯಪ್ನಗರ

ಗುರಿ ಇಲ್ಲದ ಮನುಷ್ಯ ಶ್ರೇಯಸ್ಸು ಸಾಧಿಸಲಾರ

ಹಿರೇಕೆರೂರ : ಸಂತೃಪ್ತಿಯಿಂದ ಕಾಯಕ ಹಿಡಿದು ಬದುಕಬೇಕು. ಕಾಯಕದಿಂದ ತೃಪ್ತಿ ಹೊಂದಬೇಕು. ಜೀವನದಲ್ಲಿ ಗುರಿ ಇಲ್ಲದ ಮನುಷ್ಯ ಶ್ರೇಯಸ್ಸನ್ನು ಸಾಧಿಸಲಾರ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಪೀಠಾಧಿಪತಿ ಶಿವಲಿಂಗ ಶಿವಾಚಾರ್ಯರು ಹೇಳಿದರು.

Vijaya Karnataka 13 Apr 2019, 5:00 am
ಹಿರೇಕೆರೂರ : ಸಂತೃಪ್ತಿಯಿಂದ ಕಾಯಕ ಹಿಡಿದು ಬದುಕಬೇಕು. ಕಾಯಕದಿಂದ ತೃಪ್ತಿ ಹೊಂದಬೇಕು. ಜೀವನದಲ್ಲಿ ಗುರಿ ಇಲ್ಲದ ಮನುಷ್ಯ ಶ್ರೇಯಸ್ಸನ್ನು ಸಾಧಿಸಲಾರ ಎಂದು ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಪೀಠಾಧಿಪತಿ ಶಿವಲಿಂಗ ಶಿವಾಚಾರ್ಯರು ಹೇಳಿದರು.
Vijaya Karnataka Web HVR-12HKR 1
ಹಿರೇಕೆರೂರು ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೂಪರ್‌ ಮಾರ್ಕೆಟ್‌ ನೂತನ ಮಳಿಗೆ ಪ್ರಾರಂಭೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಶಿವಲಿಂಗ ಶಿವಾಚಾರ್ಯರು ಮಾತನಾಡಿದರು.


ಅವರು ಸೋಮವಾರ ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸೂಪರ್‌ ಮಾರ್ಕೆಟ್‌ ನೂತನ ಮಳಿಗೆ ಪ್ರಾರಂಭೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನಿಧ್ಯವಹಿಸಿ ಮಾತನಾಡಿ, ಮಾನವ ಬದುಕು ಯಾವಾಗಲು ಸದಾ ವಿಚಾರವಂತಿಕೆಯಿಂದ ಕೂಡಿದೆ. ಶ್ರಮ ಹಾಗೂ ಬುದ್ಧಿವಂತಿಕೆ ಮನುಷ್ಯನನ್ನು ಎತ್ತರಕ್ಕೆ ಬೆಳೆಯುವಂತೆ ಮಾಡುತ್ತದೆ ಎಂದರು.

ಜಂಗಮ ಕ್ಷೇತ್ರ ತಿಪ್ಪಾಯಿಕೊಪ್ಪ ಗ್ರಾಮದ ಗುರುಮೂಕಪ್ಪ ಶಿವಯೋಗಿಗಳ ಮಠದ ಭಾವಿ ಪೀಠಾಧಿಪತಿ ಮಹಾಂತ ದೇವರು ಮಾತನಾಡಿ, ಜಾಗತೀಕ ಮಟ್ಟದಲ್ಲಿ ಉದ್ಯಮ ಬೆಳೆಯುತ್ತಿದೆ. ವ್ಯಾಪಾರ ಹಾಗೂ ವಹಿವಾಟಿನಲ್ಲಿ ಜನರಿಗೆ ಮೋಸ ಆಗಬಾರದು. ಸಾಮಾಜಿಕ ಸೇವೆ ಸಾರ್ಥಕ ಜೀವನ ನೀಡುತ್ತದೆ ಎಂದರು.

ಮೂಡಿ ಶಿವಲಿಂಗೇಶ್ವರ ಮಠದ ಸದಾಶಿವ ಶ್ರೀ, ಯರಗಟ್ಟಿ ರಾಜರಾಜೇಶ್ವರಿ ಆಶ್ರಮದ ಗಣಪತಿ ಮಹಾರಾಜರು ಸಾನಿಧ್ಯವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಸಿ.ಪಾಟೀಲ್‌, ಮಾಜಿ ಶಾಸಕ ಯು.ಬಿ.ಬಣಕಾರ, ಗುರುಶಾಂತ ಯತ್ತಿನಹಳ್ಳಿ, ರಾಜಶೇಖರ ಹಂಪಾಳಿ, ಸಿದ್ದಲಿಂಗಪ್ಪ ಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು.

ಗ್ಲೋಬಲ್‌ ಲಿಂಕ್ಸ್‌ ಸಂಸ್ಥೆಯ ಮ್ಯಾನೇಜಿಂಗ್‌ ಡೈರೇಕ್ಟರ್‌ ವಿಜಯಕುಮಾರ ಸಿರಿಗೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾಳಪ್ಪ ಬಡಿಗೇರ ಸ್ವಾಗತಿಸಿದರು, ಅನುಷಾ ಕಲ್ಯಾಣಿ ನಿರೂಪಿಸಿದರು, ರಂಜಿತಾ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ