ಆ್ಯಪ್ನಗರ

ಹೊಲ ಬದಲು ರಸ್ತೆಗೆ ಕಾಲುವೆ ನೀರು!

ಗಣೇಶ ನಂದಿಗಾವಿ ಕುಮಾರಪಟ್ಟಣ: ರಾಣೇಬೆನ್ನೂರ ತಾಲೂಕಿನ ಮುದೇನೂರ ಮತ್ತು ಹನುಮನಹಳ್ಳಿ ಗ್ರಾಮಗಳ ನಡುವೆ ತುಂಗಾ ಕಾಲುವೆ ನೀರು ನಿರಂತರವಾಗಿ ಹರಿದು ರಸ್ತೆ ಹಾಳಾಗುತ್ತಿದೆ.

Vijaya Karnataka 18 Aug 2019, 5:00 am
ಗಣೇಶ ನಂದಿಗಾವಿ ಕುಮಾರಪಟ್ಟಣ: ರಾಣೇಬೆನ್ನೂರ ತಾಲೂಕಿನ ಮುದೇನೂರ ಮತ್ತು ಹನುಮನಹಳ್ಳಿ ಗ್ರಾಮಗಳ ನಡುವೆ ತುಂಗಾ ಕಾಲುವೆ ನೀರು ನಿರಂತರವಾಗಿ ಹರಿದು ರಸ್ತೆ ಹಾಳಾಗುತ್ತಿದೆ.
Vijaya Karnataka Web HVR-17 KPM 01 C


ತುಂಗಾ ಮೇಲ್ದಂಡೆ ಯೋಜನೆಯಡಿ ಕಾಲುವೆಯನ್ನು ಹೊಲಗಳಿಗೆ ನೀರು ಪೂರೈಸಲೆಂದು ನಿರ್ಮಿಸಲಾಗಿದೆ. ವರ್ಷದಿಂದ ಕಾಲುವೆ ನೀರು ಜಮೀನುಗಳ ಬದಲು ರಸ್ತೆಗೆ ಹರಿದು ಡಾಂಬರು ಹಾಳಾಗುವ ಜೊತೆಗೆ ಸಾರ್ವಜನಿಕ ರಸ್ತೆ ಸಂಚಾರಕ್ಕೆ ಅನಾನುಕೂಲವಾಗಿದೆ.

ಮುದೇನೂರ ಗ್ರಾಮದ ಬಳಿ ಸಾರಿಗೆ ಸಂಸ್ಥೆ ಬಸ್‌ ಸಂಚರಿಸುವ ರಾಣೇಬೆನ್ನೂರ ಹರಿಹರ ರಸ್ತೆ ಇದಾಗಿದೆ. ರಾಣೇಬೆನ್ನೂರ ಮತ್ತು ಹರಿಹರ ನಗರಗಳಿಗೆ ಮಾಗೋಡ, ಇಟಗಿ ಹನುಮನಹಳ್ಳಿ, ಮುದೇನೂರ, ನಾಗೇನಹಳ್ಳಿ, ಮಾಕನೂರ, ಕವಲೆತ್ತು, ಕುಮಾರಪಟ್ಟಣದ ಮೂಲಕ ತಲುಪಲು ಅವಶ್ಯಕ ರಸ್ತೆ ಇದಾಗಿದೆ. ಈ ರಸ್ತೆ ಸಾರ್ವಜನಿಕ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೊಳಪಡುತ್ತದೆ.

ಮುಷ್ಟೂರು ಗ್ರಾಮಸ್ಥರು ಅವಶ್ಯಕ ಕಾರ್ಯ ನಿಮಿತ್ತ ಪಂಚಾಯಿತಿ ಕೇಂದ್ರ ಸ್ಥಾನ ಮುದೇನೂರ ಗ್ರಾಮಕ್ಕೆ ತೆರಳಬೇಕಾದರೆ ಈ ರಸ್ತೆ ಹದಗೆಟ್ಟು ಡಾಂಬರು ಸಂಪೂರ್ಣ ಕಿತ್ತು ಹೋಗಿದೆ. ರಸ್ತೆಯಲ್ಲಿ ಗುಂಡಿಗಳು ಬಿದ್ದು ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ತಾಣವಾಗಿದೆ. ಬಹುದಿನಗಳಿಂದ ರಸ್ತೆ ಹಾಳಾಗಿದ್ದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿಷ್ಕಾಳಜಿಯಿಂದ ಸಮಸ್ಯೆಯಾಗಿಯೇ ಉಳಿದಿದೆ,

ರಸ್ತೆಯ ಎರಡೂ ಬದಿಯಲ್ಲಿ ಮುಳ್ಳಿನ ಗಿಡಗಳು ಬೆಳೆದು ಎದುರು ಬದುರು ಬರುವ ಸಾರಿಗೆ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ರಾಣೇಬೆನ್ನೂರು ನಗರದಿಂದ ಸುಕ್ಷೇತ್ರ ಉಕ್ಕಡಗಾತ್ರಿ ಕರಿಬಸವೇಶ್ವರ ಅಜ್ಜಯ್ಯನ ದರ್ಶನಕ್ಕೆ ಹೊರಡುವ ಭಕ್ತಾದಿಗಳಿಗೆ ಈ ರಸ್ತೆ ಅವಶ್ಯ. ಮುಷ್ಟೂರು ಗ್ರಾಮದ ಮೂಲಕ ಕೃಷ್ಣಾಪುರ ಹೊಳೆಆನ್ವೇರಿ ಕೋಟಿಹಾಳ, ನಿಟಪಳ್ಳಿ ಗ್ರಾಮಗಳ ಮೂಲಕ ಉಕ್ಕಡಗಾತ್ರಿಗೆ ಪ್ರತಿದಿನ ವಾಯವ್ಯ ಸಾರಿಗೆ ಸಂಸ್ಥೆ ಬಸ್‌ಗಳು ಈ ಮಾರ್ಗದಲ್ಲಿಯೇ ಸಂಚರಿಸಬೇಕು. ಆದ್ದರಿಂದ ಅಧಿಕಾರಿಗಳು ಶೀಘ್ರವೇ ರಸ್ತೆ ದುರಸ್ತಿ ಮಾಡಿಸಿ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ