Cardamom Garland-ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ಏಲಕ್ಕಿ ಹಾರ, ಏಲಕ್ಕಿ ಪೇಟಕ್ಕೆ ಡಿಮ್ಯಾಂಡೋ ಡಿಮ್ಯಾಂಡು...
ಒಂದು ದೊಡ್ಡ ಕಾರ್ಯಕ್ರಮ ಉದ್ಯಮವೊಂದರ ದೆಸೆಯನ್ನು ಹೇಗೆ ಬದಲಿಸುತ್ತದೆ ಎಂಬುದಕ್ಕೆ ಇದೇ ಉದಾಹರಣೆ. ಏಲಕ್ಕಿ ಕಂಪಿನ ನಾಡಾದ ಹಾವೇರಿಯಲ್ಲಿ ತಯಾರಾಗುವ ಏಲಕ್ಕಿ ಹಾರ ಮತ್ತು ಪೇಟಕ್ಕೆ ಸಾಹಿತ್ಯ ಸಮ್ಮೇಳನ ಮತ್ತು ಹುಬ್ಬಳ್ಳಿಯಲ್ಲಿ ನಡೆದ ಮೋದಿ ಕಾರ್ಯಕ್ರಮದ ಬಳಿಕ ಬೇಡಿಕೆ ಹೆಚ್ಚಿದೆ. ಇದೀಗ ಎಲಕ್ಕಿ ಯ ಹಾರ, ಪೇಟಗಳನ್ನು ತಯಾರಿಸಿಕೊಡುವಂತೆ ಬರುವ ಆರ್ಡರ್ ಗಳ ಸಂಖ್ಯೆ ಹೆಚ್ಚಾಗಿದೆ.
ಹೈಲೈಟ್ಸ್:
- ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಬಳಿಕ ನಾಡಿನುದ್ದಕ್ಕೂ ಹಬ್ಬಿದ ಏಲಕ್ಕಿ ಹಾರ, ಪೇಟದ ಕಂಪು
- ನಾಡಿನ ಉದ್ದಗಲದಿಂದಲೂ ಬರುತ್ತಿದೆ ಹೆಚ್ಚಿನ ಆರ್ಡರ್, ತಯಾರಕರಿಗೆ ಈಗ ಬಿಡುವಿಲ್ಲದಷ್ಟು ಕೆಲಸ
- ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಮೋದಿಗೆ ಏಲಕ್ಕಿ ಹಾರ ಹಾಕಿದ ಬಳಿಕ ಸಹ ಇದರ ಬೇಡಿಕೆ ಹೆಚ್ಚಾಗಿದೆ
ಹಾವೇರಿ: ಇತ್ತೀಚೆಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದ ಹಾವೇರಿಯು ಏಲಕ್ಕಿ ಕಂಪಿನ ನಗರ ಎಂತಲೇ ಪ್ರಸಿದ್ಧಿ. ಸಮ್ಮೇಳನದ ಬಳಿಕ ಇಲ್ಲಿನ ಏಲಕ್ಕಿ ಹಾರ ಮತ್ತು ಏಲಕ್ಕಿ ಪೇಟದ ಖ್ಯಾತಿ ನಾಡಿನುದ್ದಗಲಕ್ಕೂ ಹಬ್ಬಿದ್ದು ಇದೀಗ ಇಲ್ಲಿನ ತಯಾರಕರಿಗೆ ವಿವಿಧೆಡೆಯಿಂದ ಆರ್ಡರ್ ಗಳು ಬರಲು ಪ್ರಾರಂಭವಾಗಿವೆ. ಇಲ್ಲಿಯ ಏಲಕ್ಕಿ ಮಾಲೆಗಳು ರಾಷ್ಟ್ರಪತಿ, ಪ್ರಧಾನಿಗಳು ಸೇರಿದಂತೆ ಅಮೆರಿಕ ಅಧ್ಯಕ್ಷರ ಕೊರಳನ್ನೂ ಅಲಂಕರಿಸಿವೆ. ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ಸುನಕ್ ಕೊರಳು ಏರಿರುವ ಖ್ಯಾತಿಯೂ ಹಾವೇರಿ ಏಲಕ್ಕಿ ಮಾಲೆಗಳಿಗಿದೆ.
ಈ ಹಿಂದೆ ಇಲ್ಲಿಯ ವ್ಯಾಪಾರಿಗಳು ಗಡಿನಾಡು ಕಾಸರಗೋಡಿನಿಂದ ಏಲಕ್ಕಿ ಮೊಗ್ಗುಗಳನ್ನ ತರಿಸಿಕೊಂಡು ಅದನ್ನ ಹುಬ್ಬಿ ಹಾಕಿ ಸಂಸ್ಕರಣೆ ಮಾಡುತ್ತಿದ್ದರು. ಈ ರೀತಿ ಸಂಸ್ಕರಣೆ ಮಾಡಿದ ಏಲಕ್ಕಿಗಳನ್ನ ನಗರದ ರಸ್ತೆಗಳಲ್ಲಿ ಒಣಗಲು ಹಾಕುತ್ತಿದ್ದರು. ರಸ್ತೆ ಇಕ್ಕೆಲಗಳಲ್ಲಿ ಒಣಗಲು ಹಾಕುತ್ತಿದ್ದ ಏಲಕ್ಕಿಗಳಿಂದ ದಾರಿಹೋಕರಿಗೆ ಏಲಕ್ಕಿಯ ಕಂಪು ಗಮ್ಮೆನ್ನುತ್ತಿತ್ತು. ಈ ಕಾರಣದಿಂದ ಹಾವೇರಿಗೆ ಏಲಕ್ಕಿ ಕಂಪಿನ ನಗರ ಎಂಬ ಹೆಸರು ಬಂತು.
ನಂ ವನ್ ಕ್ವಾಲಿಟಿಯ ಹಾರಗಳಿವು
ಈ ರೀತಿ ಒಣಹಾಕಲಾಗುತ್ತಿದ್ದ ಏಲಕ್ಕಿಗಳನ್ನ ತಗೆದುಕೊಂಡ ಕೆಲ ಕುಟುಂಬಗಳು ಏಲಕ್ಕಿ ಮಾಲೆ ತಯಾರಿಸಲಾರಂಭಿಸಿದ್ದರು. ಮೊದ ಮೊದಲು ಸ್ಥಳೀಯರಿಗೆ ಇಷ್ಟವಾಗಿದ್ದರಿಂದ ಏಲಕ್ಕಿ ಮಾಲೆ ತಯಾರಿಸುವದನ್ನ ಕೆಲ ಕುಟುಂಬಗಳು ಕಸುಬು ಮಾಡಿಕೊಂಡವು. ಆರಂಭದಲ್ಲಿ ಏಲಕ್ಕಿಗಳಿಂದ ತಯಾರಾಗುತ್ತಿದ್ದ ಮಾಲೆಗಳಿಗೆ ಅದರಲ್ಲಿ ವಿವಿಧ ಡಿಜೈನ್ಗ, ಗೊಂಡೆಗಳು ಎಸಳುಗಳನ್ನ ಮಿಂಚುಗಳನ್ನ ಸೇರಿಸಿ ಇನ್ನಷ್ಟು ಸುಂದರಗೊಳಿಸಿದರು. ಕಾಸರಗೊಡು ಮಾತ್ರವಲ್ಲದೆ ವಿವಿಧಡೆಯಿಂದ ಏಲಕ್ಕಿ ತಂದು ಅದರಲ್ಲಿ ನಂಬರ ವನ್ ಕ್ವಾಲಿಟಿಯ ಏಲಕ್ಕಿ ಆಯ್ದು ಮಾಲೆ ತಯಾರಿಸಲಾರಂಭಿಸಿದ್ದರು.
ಆರಂಭದಲ್ಲಿ ಅಷ್ಟೇನು ದುಬಾರಿಯಲ್ಲದ ಏಲಕ್ಕಿ ಮಾಲೆಗಳನ್ನ ಸ್ಥಳೀಯ ಜನ ಅತಿಥಿಗಳಿಗೆ ಹಾಕಿ
ಸನ್ಮಾನಿಸುತ್ತಿದ್ದರು. ಆದಾದ ನಂತರ ಹಾವೇರಿ ಏಲಕ್ಕಿ ಮಾಲೆಯ ಕಂಪು ದೇಶ ವಿದೇಶಗಳಿಗೆ ಹರಡಿತು. ಹಾವೇರಿಗೆ ಯಾರಾದರೂ ಮಠಾಧೀಶರು, ಜನಪ್ರತಿನಿಧಿಗಳು ಅಧಿಕಾರಿಗಳು ಆಗಮಿಸಿದರೆ ಅವರಿಗೆ ಏಲಕ್ಕಿ ಮಾಲೆ ಹಾಕುವ ಸಂಪ್ರದಾಯ ಬೆಳೆದು ಬಂತು.
ರಾಜ್ಯೋತ್ಸವ ಪ್ರಶಸ್ತಿಯೂ ಬಂತು
ಈ ರೀತಿಯ ಮಾಲೆಗಳನ್ನ ತಯಾರಿಸುವ ಕೆಲ ಕುಟುಂಬಗಳ ನಡುವೆ ಪಟವೇಗಾರ ಕುಟುಂಬ ಅತಿಹೆಚ್ಚು ಮಾಲೆಗಳನ್ನ ತಯಾರಿಸುವದಲ್ಲದೆ ಹಲವು ವೈವಿಧ್ಯಮಯ ಮಾಲೆಗಳನ್ನ ತಯಾರಿಸುತ್ತಾ ಬಂತು. ಇದಕ್ಕಾಗಿ ಈ ಕುಟುಂಬಕ್ಕೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕೂಡ ಗೌರವಿಸಿತು.
ಅಲ್ಲಿಂದ ಏಲಕ್ಕಿ ಮಾಲೆ ನಡೆದಿದ್ದೆ ದಾರಿ ಆಯ್ತು. ಆರಂಭದಲ್ಲಿ ಒಂದೆಳೆ ಒಂದು ಅಡಿಯಲ್ಲಿ ತಯಾರಾಗುತ್ತಿದ್ದ ಏಲಕ್ಕಿ ಮಾಲೆಗಳು 11 ಎಳೆ 25 ಎಳೆಯಿಂದ ಹಿಡಿದು 10 ಅಡಿಯವರೆಗೆ ತಯಾರಲಾರಂಭಿಸಿದವು. ಗ್ರಾಹಕ ಎಷ್ಟು ಅಡಿ ಹೇಳುತ್ತಾನೋ ಅಷ್ಟು ಅಡಿ ಎತ್ತರ ಮತ್ತು ಎಳೆಯ ಮಾಲೆಗಳು ತಯಾರಾಗಲಾರಂಭಿಸಿದವು. ಸುಮಾರು 150 ರೂಪಾಯಿಯಿಂದ ಹಿಡಿದು 30 ಸಾವಿರ ರೂಪಾಯಿವರೆಗೆ ಮಾಲೆಗಳು ತಯಾರಾಗಲಾರಂಭಿಸಿದವು.
ಈಗ ಬಹಳಷ್ಟು ಆರ್ಡರ್ ಬರುತ್ತಿದೆ
ಇದೀಗ ಹಾವೇರಿಯಲ್ಲಿ 86ನೇ ಸಾಹಿತ್ಯ ಸಮ್ಮೇಳನ ನಡೆದ ನಂತರ ಏಲಕ್ಕಿ ಮಾಲೆಯ ಕಂಪು ಇನ್ನಷ್ಟು ಹರಡಿದೆ. ಇಲ್ಲಿಯ ಏಲಕ್ಕಿ ಮಾಲೆಯ ಬಗ್ಗೆ ತಿಳಿದುಕೊಂಡ ರಾಜ್ಯದ ವಿವಿಧಡೆಯಿಂದ ಬಂದ ಜನ ಇದೀಗ ಇಲ್ಲಿಯ ಏಲಕ್ಕಿ ಮಾಲೆ ತಯಾರಕರಿಗೆ ಕರೆ ಮಾಡುತ್ತಿದ್ದಾರೆ. ಏಲಕ್ಕಿ ಮಾಲೆಯ ಬಗ್ಗೆ ತಿಳಿದುಕೊಂಡು ಆರ್ಡರ್ ನೀಡುತ್ತಿದ್ದಾರೆ. ಇದರಿಂದ ಇಲ್ಲಿಯ ವರ್ತಕರಿಗೆ ಈಗ ಕೆಲಸ ಹೆಚ್ಚು ಸಿಗಲಾರಂಭಿಸಿದೆ.
ಸಮ್ಮೇಳನ ಮುಗಿದ ಮೇಲೆ ಅಧಿಕ ಆರ್ಡರ್ ಸಿಗುತ್ತಿದೆ ಎನ್ನುತ್ತಾರೆ ಇಲ್ಲಿಯ ವರ್ತಕರು. ಇದೀಗ ಏಲಕ್ಕಿ ಮಾಲೆಯ ಜೊತೆ ಏಲಕ್ಕಿ ಪೇಟ ಸಹ ಪ್ರಸಿದ್ಧಿ ಪಡೆಯಲಾರಂಭಿಸಿದೆ. ಸುಮಾರು 20 ವರ್ಷಗಳ ಹಿಂದೆ ಕನ್ನಡದ ವರನಟ ಡಾ.ರಾಜಕುಮಾರ್ ಅವರಿಗಾಗಿ ಏಲಕ್ಕಿಯಲ್ಲಿ ಪೇಟ ತಯಾರಿಸಲಾಗಿತ್ತು. ಇದೇ 12 ರಂದು ಹುಬ್ಬಳ್ಳಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಏಲಕ್ಕಿ ಮಾಲೆ ಮತ್ತು ಪೇಟ ಪ್ರಧಾನಿ ನರೇಂದ್ರ ಮೋದಿ ಅಲಂಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿಗೆ ಹಾಕಲಾಗಿದ್ದ ಏಲಕ್ಕಿ ಪೇಟ ಇದೀಗ ಪ್ರಸಿದ್ಧಿ ಹೊಂದಲಾರಂಭಿಸಿದೆ.
ಜನರ ಪಟವೇಗಾರರ ಅಂಗಡಿಗೆ ಬಂದು ಅಧಿಕ ದರವಿದ್ದರೂ ಸಹ ಏಲಕ್ಕಿ ಪೇಟ ಖರೀದಿ ಮಾಡುತ್ತಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನ ಏಲಕ್ಕಿ ಮಾಲೆಯ ಕಂಪು ಅಧಿಕಗೊಳಿಸಿದರೆ ಪ್ರಧಾನಿಯ ಮೋದಿ ಕಾರ್ಯಕ್ರಮ ಪೇಟದ ಪ್ರಸಿದ್ಧಿಯನ್ನ ಸಹ ಹೆಚ್ಚು ಮಾಡಿದೆ.
ಈ ಹಿಂದೆ ಇಲ್ಲಿಯ ವ್ಯಾಪಾರಿಗಳು ಗಡಿನಾಡು ಕಾಸರಗೋಡಿನಿಂದ ಏಲಕ್ಕಿ ಮೊಗ್ಗುಗಳನ್ನ ತರಿಸಿಕೊಂಡು ಅದನ್ನ ಹುಬ್ಬಿ ಹಾಕಿ ಸಂಸ್ಕರಣೆ ಮಾಡುತ್ತಿದ್ದರು. ಈ ರೀತಿ ಸಂಸ್ಕರಣೆ ಮಾಡಿದ ಏಲಕ್ಕಿಗಳನ್ನ ನಗರದ ರಸ್ತೆಗಳಲ್ಲಿ ಒಣಗಲು ಹಾಕುತ್ತಿದ್ದರು. ರಸ್ತೆ ಇಕ್ಕೆಲಗಳಲ್ಲಿ ಒಣಗಲು ಹಾಕುತ್ತಿದ್ದ ಏಲಕ್ಕಿಗಳಿಂದ ದಾರಿಹೋಕರಿಗೆ ಏಲಕ್ಕಿಯ ಕಂಪು ಗಮ್ಮೆನ್ನುತ್ತಿತ್ತು. ಈ ಕಾರಣದಿಂದ ಹಾವೇರಿಗೆ ಏಲಕ್ಕಿ ಕಂಪಿನ ನಗರ ಎಂಬ ಹೆಸರು ಬಂತು.
ನಂ ವನ್ ಕ್ವಾಲಿಟಿಯ ಹಾರಗಳಿವು
ಈ ರೀತಿ ಒಣಹಾಕಲಾಗುತ್ತಿದ್ದ ಏಲಕ್ಕಿಗಳನ್ನ ತಗೆದುಕೊಂಡ ಕೆಲ ಕುಟುಂಬಗಳು ಏಲಕ್ಕಿ ಮಾಲೆ ತಯಾರಿಸಲಾರಂಭಿಸಿದ್ದರು. ಮೊದ ಮೊದಲು ಸ್ಥಳೀಯರಿಗೆ ಇಷ್ಟವಾಗಿದ್ದರಿಂದ ಏಲಕ್ಕಿ ಮಾಲೆ ತಯಾರಿಸುವದನ್ನ ಕೆಲ ಕುಟುಂಬಗಳು ಕಸುಬು ಮಾಡಿಕೊಂಡವು. ಆರಂಭದಲ್ಲಿ ಏಲಕ್ಕಿಗಳಿಂದ ತಯಾರಾಗುತ್ತಿದ್ದ ಮಾಲೆಗಳಿಗೆ ಅದರಲ್ಲಿ ವಿವಿಧ ಡಿಜೈನ್ಗ, ಗೊಂಡೆಗಳು ಎಸಳುಗಳನ್ನ ಮಿಂಚುಗಳನ್ನ ಸೇರಿಸಿ ಇನ್ನಷ್ಟು ಸುಂದರಗೊಳಿಸಿದರು. ಕಾಸರಗೊಡು ಮಾತ್ರವಲ್ಲದೆ ವಿವಿಧಡೆಯಿಂದ ಏಲಕ್ಕಿ ತಂದು ಅದರಲ್ಲಿ ನಂಬರ ವನ್ ಕ್ವಾಲಿಟಿಯ ಏಲಕ್ಕಿ ಆಯ್ದು ಮಾಲೆ ತಯಾರಿಸಲಾರಂಭಿಸಿದ್ದರು.
ಆರಂಭದಲ್ಲಿ ಅಷ್ಟೇನು ದುಬಾರಿಯಲ್ಲದ ಏಲಕ್ಕಿ ಮಾಲೆಗಳನ್ನ ಸ್ಥಳೀಯ ಜನ ಅತಿಥಿಗಳಿಗೆ ಹಾಕಿ
ಸನ್ಮಾನಿಸುತ್ತಿದ್ದರು. ಆದಾದ ನಂತರ ಹಾವೇರಿ ಏಲಕ್ಕಿ ಮಾಲೆಯ ಕಂಪು ದೇಶ ವಿದೇಶಗಳಿಗೆ ಹರಡಿತು. ಹಾವೇರಿಗೆ ಯಾರಾದರೂ ಮಠಾಧೀಶರು, ಜನಪ್ರತಿನಿಧಿಗಳು ಅಧಿಕಾರಿಗಳು ಆಗಮಿಸಿದರೆ ಅವರಿಗೆ ಏಲಕ್ಕಿ ಮಾಲೆ ಹಾಕುವ ಸಂಪ್ರದಾಯ ಬೆಳೆದು ಬಂತು.
ರಾಜ್ಯೋತ್ಸವ ಪ್ರಶಸ್ತಿಯೂ ಬಂತು
ಈ ರೀತಿಯ ಮಾಲೆಗಳನ್ನ ತಯಾರಿಸುವ ಕೆಲ ಕುಟುಂಬಗಳ ನಡುವೆ ಪಟವೇಗಾರ ಕುಟುಂಬ ಅತಿಹೆಚ್ಚು ಮಾಲೆಗಳನ್ನ ತಯಾರಿಸುವದಲ್ಲದೆ ಹಲವು ವೈವಿಧ್ಯಮಯ ಮಾಲೆಗಳನ್ನ ತಯಾರಿಸುತ್ತಾ ಬಂತು. ಇದಕ್ಕಾಗಿ ಈ ಕುಟುಂಬಕ್ಕೆ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಕೂಡ ಗೌರವಿಸಿತು.
ಅಲ್ಲಿಂದ ಏಲಕ್ಕಿ ಮಾಲೆ ನಡೆದಿದ್ದೆ ದಾರಿ ಆಯ್ತು. ಆರಂಭದಲ್ಲಿ ಒಂದೆಳೆ ಒಂದು ಅಡಿಯಲ್ಲಿ ತಯಾರಾಗುತ್ತಿದ್ದ ಏಲಕ್ಕಿ ಮಾಲೆಗಳು 11 ಎಳೆ 25 ಎಳೆಯಿಂದ ಹಿಡಿದು 10 ಅಡಿಯವರೆಗೆ ತಯಾರಲಾರಂಭಿಸಿದವು. ಗ್ರಾಹಕ ಎಷ್ಟು ಅಡಿ ಹೇಳುತ್ತಾನೋ ಅಷ್ಟು ಅಡಿ ಎತ್ತರ ಮತ್ತು ಎಳೆಯ ಮಾಲೆಗಳು ತಯಾರಾಗಲಾರಂಭಿಸಿದವು. ಸುಮಾರು 150 ರೂಪಾಯಿಯಿಂದ ಹಿಡಿದು 30 ಸಾವಿರ ರೂಪಾಯಿವರೆಗೆ ಮಾಲೆಗಳು ತಯಾರಾಗಲಾರಂಭಿಸಿದವು.
ಈಗ ಬಹಳಷ್ಟು ಆರ್ಡರ್ ಬರುತ್ತಿದೆ
ಇದೀಗ ಹಾವೇರಿಯಲ್ಲಿ 86ನೇ ಸಾಹಿತ್ಯ ಸಮ್ಮೇಳನ ನಡೆದ ನಂತರ ಏಲಕ್ಕಿ ಮಾಲೆಯ ಕಂಪು ಇನ್ನಷ್ಟು ಹರಡಿದೆ. ಇಲ್ಲಿಯ ಏಲಕ್ಕಿ ಮಾಲೆಯ ಬಗ್ಗೆ ತಿಳಿದುಕೊಂಡ ರಾಜ್ಯದ ವಿವಿಧಡೆಯಿಂದ ಬಂದ ಜನ ಇದೀಗ ಇಲ್ಲಿಯ ಏಲಕ್ಕಿ ಮಾಲೆ ತಯಾರಕರಿಗೆ ಕರೆ ಮಾಡುತ್ತಿದ್ದಾರೆ. ಏಲಕ್ಕಿ ಮಾಲೆಯ ಬಗ್ಗೆ ತಿಳಿದುಕೊಂಡು ಆರ್ಡರ್ ನೀಡುತ್ತಿದ್ದಾರೆ. ಇದರಿಂದ ಇಲ್ಲಿಯ ವರ್ತಕರಿಗೆ ಈಗ ಕೆಲಸ ಹೆಚ್ಚು ಸಿಗಲಾರಂಭಿಸಿದೆ.
ಸಮ್ಮೇಳನ ಮುಗಿದ ಮೇಲೆ ಅಧಿಕ ಆರ್ಡರ್ ಸಿಗುತ್ತಿದೆ ಎನ್ನುತ್ತಾರೆ ಇಲ್ಲಿಯ ವರ್ತಕರು. ಇದೀಗ ಏಲಕ್ಕಿ ಮಾಲೆಯ ಜೊತೆ ಏಲಕ್ಕಿ ಪೇಟ ಸಹ ಪ್ರಸಿದ್ಧಿ ಪಡೆಯಲಾರಂಭಿಸಿದೆ. ಸುಮಾರು 20 ವರ್ಷಗಳ ಹಿಂದೆ ಕನ್ನಡದ ವರನಟ ಡಾ.ರಾಜಕುಮಾರ್ ಅವರಿಗಾಗಿ ಏಲಕ್ಕಿಯಲ್ಲಿ ಪೇಟ ತಯಾರಿಸಲಾಗಿತ್ತು. ಇದೇ 12 ರಂದು ಹುಬ್ಬಳ್ಳಿಯಲ್ಲಿ ನಡೆದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಏಲಕ್ಕಿ ಮಾಲೆ ಮತ್ತು ಪೇಟ ಪ್ರಧಾನಿ ನರೇಂದ್ರ ಮೋದಿ ಅಲಂಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿಗೆ ಹಾಕಲಾಗಿದ್ದ ಏಲಕ್ಕಿ ಪೇಟ ಇದೀಗ ಪ್ರಸಿದ್ಧಿ ಹೊಂದಲಾರಂಭಿಸಿದೆ.
ಜನರ ಪಟವೇಗಾರರ ಅಂಗಡಿಗೆ ಬಂದು ಅಧಿಕ ದರವಿದ್ದರೂ ಸಹ ಏಲಕ್ಕಿ ಪೇಟ ಖರೀದಿ ಮಾಡುತ್ತಿದ್ದಾರೆ. ಹಾವೇರಿ ಸಾಹಿತ್ಯ ಸಮ್ಮೇಳನ ಏಲಕ್ಕಿ ಮಾಲೆಯ ಕಂಪು ಅಧಿಕಗೊಳಿಸಿದರೆ ಪ್ರಧಾನಿಯ ಮೋದಿ ಕಾರ್ಯಕ್ರಮ ಪೇಟದ ಪ್ರಸಿದ್ಧಿಯನ್ನ ಸಹ ಹೆಚ್ಚು ಮಾಡಿದೆ.