ಆ್ಯಪ್ನಗರ

ಶಿಶುವಿನಹಾಳದಲ್ಲಿ ರಥೋತ್ಸವ ಸಂಭ್ರಮ

ಶಿಗ್ಗಾವಿ: ನಾಡಿಗೆ ಶಾಂತಿ-ಸೌಹಾರ್ದತೆಯ ಸಂದೇಶ ಸಾರಿದ ಭಾವೈಕ್ಯತೆಯ ನೆಲೆವೀಡು ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ತತ್ವ-ಪದಕಾರ ಸಂತ ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಭಟ್ಟರ ಮಹಾ ರಥೋತ್ಸವ ಶನಿವಾರ ಸಹಸ್ರ ಭಕ್ತರ ಸಮೂಹದ ಭಕ್ತಿ, ಭಾವದ ಮಧ್ಯೆ ಸಂಭ್ರಮದಿಂದ ನೆರವೇರಿತು.

Vijaya Karnataka 17 Mar 2019, 5:00 am
ಶಿಗ್ಗಾವಿ: ನಾಡಿಗೆ ಶಾಂತಿ-ಸೌಹಾರ್ದತೆಯ ಸಂದೇಶ ಸಾರಿದ ಭಾವೈಕ್ಯತೆಯ ನೆಲೆವೀಡು ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ತತ್ವ-ಪದಕಾರ ಸಂತ ಶರೀಫ ಶಿವಯೋಗಿಗಳ ಮತ್ತು ಗುರುಗೋವಿಂದ ಭಟ್ಟರ ಮಹಾ ರಥೋತ್ಸವ ಶನಿವಾರ ಸಹಸ್ರ ಭಕ್ತರ ಸಮೂಹದ ಭಕ್ತಿ, ಭಾವದ ಮಧ್ಯೆ ಸಂಭ್ರಮದಿಂದ ನೆರವೇರಿತು.
Vijaya Karnataka Web HVR-16SGN-1


ಅನಿಷ್ಠ ಪದ್ದತಿಗಳನ್ನು ತೊಡೆದು ಹಾಕಿ, ಆಧ್ಯಾತ್ಮಿಕತೆಯ ಬೆಳಕನ್ನು ಎಲ್ಲಡೆ ಪಸರಿಸಿರುವ ಸಂತ ಶರೀಫ, ಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ದೂರದ ಊರುಗಳಿಂದ ತಂಡೋಪ ತಂಡವಾಗಿ ಧಾವಿಸಿದ್ದ ಸಹಸ್ರ ಸಂಖ್ಯೆ ಭಕ್ತರು, ಗದ್ದುಗೆಗೆ ಬೆಳಗ್ಗೆಯಿಂದ ಧಾರ್ಮಿಕ ವಿಧಿ, ವಿಧಾನಗಳಿಂದ ಸಲ್ಲಿಸುತ್ತಿದ್ದ ವಿಶೇಷ ಪೂಜೆ ಭಕ್ತಿ, ಭಾವವೇಷ ಪ್ರತಿಧÜ್ವನಿಸಿತು.

ಭÜಕ್ತರು ಭಕ್ತಿ ಭಾವದಿಂದ ಕಟ್ಟಿಕೊಂಡು ಬಂದ ಅನ್ನದ ಬುತ್ತಿಯನ್ನೇ ಪ್ರಸಾದ ರೂಪದಲ್ಲಿ ನೀಡುತ್ತಿದ್ದ ದೃಶ್ಯ ಶರೀಫ ಗಿರಿಯಲ್ಲಿ ಗಮನ ಸೆಳೆಯಿತು. ಬಂದವರು ನೂಕು, ನುಗ್ಗಲದ ನಡುವೆ ಅನ್ನಪ್ರಸಾದ ಪಡೆಯತ್ತಿದ್ದ ದೃಶ್ಯ ಸಹಜ ವಾಗಿತ್ತು.

ಪ್ರತಿ ವರ್ಷಕ್ಕಿಂತಲೂ ಈ ಬಾರಿ ಜಾತ್ರೆಗೆ ವಾಹನಗಳ ವ್ಯವಸ್ಥೆ ಮಾಡಿದ್ದರೂ ಗ್ರಾಮಾಂತರ ಭಾಗದ ಭಕ್ತರು, ಚಿತ್ತಾರಗಳಿಂದ ಕೂಡಿದ ಎತ್ತಿನ ಬಂಡಿಗಳ ಮೂಲಕ ಜಾತ್ರೆಗೆ ಬಂದಿದ್ದು ಗಮನ ಸೆಳೆಯಿತು. ಮತ್ತೊಂದಡೆ ಶರೀಫಜ್ಜನ ಭಕ್ತರು, ಜಾತ್ರೆಯಲ್ಲಿ ಚಿಲುಮೆ ಸೇವನೆ ಮೂಲಕ ಭಕ್ತಿ ಅರ್ಪಿಸಿದ್ದು ಗಮನ ಸೆÙಯಿತು. ಡೊಳ್ಳು ಕುಣಿತ ರಥೋತ್ವಕ್ಕೆ ಮೆರುಗು ನೀಡಿತು.

ರಥೋತ್ಸವಕ್ಕೆ ಕೂಡಲದ ನಂಜೇಶ್ವರ ಮಠದ ಮಹೇಶ್ವರ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದ ರಥೋತ್ಸವಕ್ಕೆ ಚಾಲನೆ ನೀಡಿದರು. ಶಾಸಕ ಬಸವರಾಜ ಬೊಮ್ಮಾಯಿ, ಎಪಿಎಂಸಿ ಅಧ್ಯಕ್ಷೆ ಪ್ರೇಮಾ ಪಾಟೀಲ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ದೇವಣ್ಣ ಚಾಕಲಬ್ಬಿ ಸೇರಿದಂತೆ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಸದಸ್ಯರು, ಶಿಶುವಿನಾಳ ಟ್ರಸ್ಟ್‌ ಸಮಿತಿ ಅಧ್ಯಕ್ಷ ರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ