ಹಾನಗಲ್ಲ: ಕೇರಳದ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿಯ ಶಾಖೆ ಹಾನಗಲ್ಲ ತಾಲೂಕಿನ ಗೆಜ್ಜಿಹಳ್ಳಿ ಗ್ರಾಮ ಹದ್ದಿನಲ್ಲಿ 3 ವರ್ಷದಿಂದ ನಡೆಯುತ್ತಿದೆ. ಇಲ್ಲಿ ಎಲ್ಲವೂ ಪಾರದರ್ಶಕ. ಸಂಶಯಾಸ್ಪದ ಚಟುವಟಿಕೆ ನಡೆಯುತ್ತಿವೆ ಎಂಬುದು ಕಲ್ಪಿತ ಆಪಾದನೆಯಾಗಿದೆ ಎಂದು ಈ ಶಾಲೆಗೆ ಸಂಬಂಧಿಸಿದ ಕಾನೂನು ಸಲಹೆಗಾರ, ಹಾವೇರಿ ನ್ಯಾಯವಾದಿ ಎಸ್.ಎಸ್.ಖಾಜಿ ಸ್ಪಷ್ಟನೆ ನೀಡಿದ್ದಾರೆ.
ರವಿವಾರ ಸಂಜೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗಣರಾಜ್ಯೋತ್ಸವದಂದು ಹಿರೂರ ಗ್ರಾಮದಲ್ಲಿ ನಡೆದ ಘಟನೆಯನ್ನು ಪ್ರತಿಯೊಬ್ಬ ಭಾರತೀಯ ಖಂಡಿಸುತ್ತಾರೆ. ಆದರೆ ಈ ಘಟನೆಗೆ ಮತ್ತು ನಮ್ಮ ಇಸ್ಲಾಮಿಕ್ ಯುನಿವರ್ಸಿಟಿಯ ಶಾಲೆಗೂ ಸಂಬಂಧವಿಲ್ಲ ಎಂದು ಹೇಳಿದರು.
1986 ರಲ್ಲಿ ಕೇರಳದಲ್ಲಿ ಆರಂಭಗೊಂಡ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 32 ಶಾಖೆ, ಶಾಲೆಗಳನ್ನು ಹೊಂದಿದೆ. ಈ ಸಂಸ್ಥೆ ಕೇಂದ್ರ ಸರಕಾರದ ಮಾನ್ಯತೆ ಪಡೆದಿದೆ. ಇಲ್ಲಿ ಎನ್ಐಓಎಸ್ ಶಿಕ್ಷ ಣ ನೀಡಲಾಗುತ್ತದೆ, ಇಂಗ್ಲೀಷ್ ಮಾದ್ಯಮ ಮತ್ತು ಸ್ಥಳೀಯ ಕನ್ನಡ ಭಾಷೆ ಒಂದು ವಿಷಯವಾಗಿ ಇಲ್ಲಿ ಬೋಧಿಸಲಾಗುತ್ತದೆ ಎಂದರು.
ಮುಸ್ಲಿಂ ಮಾತ್ರವಲ್ಲ, ಎಲ್ಲ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶವಿದೆ. ಇದು ಉಚಿತ ವಸತಿಯುತ ಶಾಲೆ, ಈ ಶಾಲೆಗೆ ಪ್ರವೇಶ ಪರೀಕ್ಷೆ ನಡೆಯುತ್ತದೆ, 6 ನೇ ತರಗತಿಯಿಂದ ಆರಂಭಗೊಳ್ಳುವ ಈ ಶಾಲೆಯಲ್ಲಿ ಸದ್ಯ 6, 7, 8 ನೇ ತರಗತಿಗಳು ನಡೆಯುತ್ತಿವೆ. ಸಮೀಪದ ಬಂಕಾಪೂರ, ಶಿಗ್ಗಾವ, ಸವಣೂರ, ಹಾವೇರಿ, ಶಿವಮೊಗ್ಗ, ಕುಮಟಾ, ಕಾರವಾರ, ಚಿಕ್ಕಮಗಳೂರ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಹಾನಗಲ್ಲ, ಅರಳೇಶ್ವರ, ಪಾಳಾ ಮತ್ತು ಮಂಗಳೂರ, ಮುಂಬೈ, ಕೇರಳದ ತಲಾ ಇಬ್ಬರು ಶಿಕ್ಷ ಕರು ಇಲ್ಲಿದ್ದಾರೆ ಎಂದರು.
ಈ ಶಾಲೆಗೆ 6 ಎಕರೆ ಭೂಮಿ ದಾನ ಮಾಡಿದ ಇಲ್ಲಿನ ಎಚ್.ಕೆ.ಎಚ್ ಮಾವಿನ ಮಂಡಿ ಮಾಲೀಕ, ಈ ಶಾಲೆಯ ಆಡಳಿತ ಸಮಿತಿ ಉಸ್ತುವಾರಿ ಅಬ್ದುಲ್ ಖರೀಮ್ ಮಾತನಾಡಿ, ಹಿರೂರಲ್ಲಿ ಗಣರಾಜ್ಯೋತ್ಸವ ಘಟನೆ ನಡೆದ ಬಳಿಕ ನಮ್ಮ ಶಾಲೆ ಮೇಲೆ ವಿನಾಕಾರಣ ಆರೋಪಗಳು ಕೇಳಿಬರುತ್ತಿವೆ. ನಾಲ್ಕು ದಿನಗಳ ಹಿಂದೆ ಸ್ಥಳೀಯ ತಹಶೀಲ್ದಾರ್, ಹಿರಿಯ ಪೊಲೀಸ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬಡ ಪ್ರತಿಭಾವಂತ ಮಕ್ಕಳ ಶಿಕ್ಷ ಣಕ್ಕಾಗಿ ಈ ಶಾಲೆ ಆರಂಭಗೊಂಡಿದೆ ಎಂದರು.
ಹಿರೂರ ಗಣರಾಜ್ಯೋತ್ಸವ ಘಟನೆಯನ್ನು ಮುಂದಿಟ್ಟುಕೊಂಡು ವಿ.ಪ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನಮ್ಮ ಶಾಲೆಯ ಬಗ್ಗೆ ಮಾಡಿರುವ ಆರೋಪಗಳು ನೋವು ತಂದಿದೆ. ಶಿಕ್ಷ ಣ ರಂಗದಲ್ಲಿ ಧರ್ಮ, ರಾಜಕೀಯ ತರುವುದು ಸರಿ ಅಲ್ಲ ಎಂದು ಅಬ್ದುಲ್ ಖರೀಮ್ ಅಭಿಪ್ರಾಯಪಟ್ಟರು. ಶಾಲೆಯ ಶಿಕ್ಷ ಕರಾದ ಉದೇದ ಉದವಿ, ಖಲೀಲ್ ಉದವಿ, ಸ್ಥಳೀಯರಾದ ಕೆ.ಎಂ.ಮಸೂತಿಖಾನಿ ಉಪಸ್ಥಿತರಿದ್ದರು.
ರವಿವಾರ ಸಂಜೆ ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಗಣರಾಜ್ಯೋತ್ಸವದಂದು ಹಿರೂರ ಗ್ರಾಮದಲ್ಲಿ ನಡೆದ ಘಟನೆಯನ್ನು ಪ್ರತಿಯೊಬ್ಬ ಭಾರತೀಯ ಖಂಡಿಸುತ್ತಾರೆ. ಆದರೆ ಈ ಘಟನೆಗೆ ಮತ್ತು ನಮ್ಮ ಇಸ್ಲಾಮಿಕ್ ಯುನಿವರ್ಸಿಟಿಯ ಶಾಲೆಗೂ ಸಂಬಂಧವಿಲ್ಲ ಎಂದು ಹೇಳಿದರು.
1986 ರಲ್ಲಿ ಕೇರಳದಲ್ಲಿ ಆರಂಭಗೊಂಡ ದಾರುಲ್ ಹುದಾ ಇಸ್ಲಾಮಿಕ್ ಯುನಿವರ್ಸಿಟಿ ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 32 ಶಾಖೆ, ಶಾಲೆಗಳನ್ನು ಹೊಂದಿದೆ. ಈ ಸಂಸ್ಥೆ ಕೇಂದ್ರ ಸರಕಾರದ ಮಾನ್ಯತೆ ಪಡೆದಿದೆ. ಇಲ್ಲಿ ಎನ್ಐಓಎಸ್ ಶಿಕ್ಷ ಣ ನೀಡಲಾಗುತ್ತದೆ, ಇಂಗ್ಲೀಷ್ ಮಾದ್ಯಮ ಮತ್ತು ಸ್ಥಳೀಯ ಕನ್ನಡ ಭಾಷೆ ಒಂದು ವಿಷಯವಾಗಿ ಇಲ್ಲಿ ಬೋಧಿಸಲಾಗುತ್ತದೆ ಎಂದರು.
ಮುಸ್ಲಿಂ ಮಾತ್ರವಲ್ಲ, ಎಲ್ಲ ಧರ್ಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶವಿದೆ. ಇದು ಉಚಿತ ವಸತಿಯುತ ಶಾಲೆ, ಈ ಶಾಲೆಗೆ ಪ್ರವೇಶ ಪರೀಕ್ಷೆ ನಡೆಯುತ್ತದೆ, 6 ನೇ ತರಗತಿಯಿಂದ ಆರಂಭಗೊಳ್ಳುವ ಈ ಶಾಲೆಯಲ್ಲಿ ಸದ್ಯ 6, 7, 8 ನೇ ತರಗತಿಗಳು ನಡೆಯುತ್ತಿವೆ. ಸಮೀಪದ ಬಂಕಾಪೂರ, ಶಿಗ್ಗಾವ, ಸವಣೂರ, ಹಾವೇರಿ, ಶಿವಮೊಗ್ಗ, ಕುಮಟಾ, ಕಾರವಾರ, ಚಿಕ್ಕಮಗಳೂರ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಹಾನಗಲ್ಲ, ಅರಳೇಶ್ವರ, ಪಾಳಾ ಮತ್ತು ಮಂಗಳೂರ, ಮುಂಬೈ, ಕೇರಳದ ತಲಾ ಇಬ್ಬರು ಶಿಕ್ಷ ಕರು ಇಲ್ಲಿದ್ದಾರೆ ಎಂದರು.
ಈ ಶಾಲೆಗೆ 6 ಎಕರೆ ಭೂಮಿ ದಾನ ಮಾಡಿದ ಇಲ್ಲಿನ ಎಚ್.ಕೆ.ಎಚ್ ಮಾವಿನ ಮಂಡಿ ಮಾಲೀಕ, ಈ ಶಾಲೆಯ ಆಡಳಿತ ಸಮಿತಿ ಉಸ್ತುವಾರಿ ಅಬ್ದುಲ್ ಖರೀಮ್ ಮಾತನಾಡಿ, ಹಿರೂರಲ್ಲಿ ಗಣರಾಜ್ಯೋತ್ಸವ ಘಟನೆ ನಡೆದ ಬಳಿಕ ನಮ್ಮ ಶಾಲೆ ಮೇಲೆ ವಿನಾಕಾರಣ ಆರೋಪಗಳು ಕೇಳಿಬರುತ್ತಿವೆ. ನಾಲ್ಕು ದಿನಗಳ ಹಿಂದೆ ಸ್ಥಳೀಯ ತಹಶೀಲ್ದಾರ್, ಹಿರಿಯ ಪೊಲೀಸ್ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಬಡ ಪ್ರತಿಭಾವಂತ ಮಕ್ಕಳ ಶಿಕ್ಷ ಣಕ್ಕಾಗಿ ಈ ಶಾಲೆ ಆರಂಭಗೊಂಡಿದೆ ಎಂದರು.
ಹಿರೂರ ಗಣರಾಜ್ಯೋತ್ಸವ ಘಟನೆಯನ್ನು ಮುಂದಿಟ್ಟುಕೊಂಡು ವಿ.ಪ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ನಮ್ಮ ಶಾಲೆಯ ಬಗ್ಗೆ ಮಾಡಿರುವ ಆರೋಪಗಳು ನೋವು ತಂದಿದೆ. ಶಿಕ್ಷ ಣ ರಂಗದಲ್ಲಿ ಧರ್ಮ, ರಾಜಕೀಯ ತರುವುದು ಸರಿ ಅಲ್ಲ ಎಂದು ಅಬ್ದುಲ್ ಖರೀಮ್ ಅಭಿಪ್ರಾಯಪಟ್ಟರು. ಶಾಲೆಯ ಶಿಕ್ಷ ಕರಾದ ಉದೇದ ಉದವಿ, ಖಲೀಲ್ ಉದವಿ, ಸ್ಥಳೀಯರಾದ ಕೆ.ಎಂ.ಮಸೂತಿಖಾನಿ ಉಪಸ್ಥಿತರಿದ್ದರು.