ಆ್ಯಪ್ನಗರ

ಮುಷ್ಟೂರಲ್ಲಿ ಚಿರತೆ ಭೀತಿ

ಕುಮಾರಪಟ್ಟಣ: ರಾಣೇಬೆನ್ನೂರು ತಾಲೂಕಿನ ಮುಷ್ಟೂರು ಗ್ರಾಮದ ಕಬ್ಬಿನ ಹೊಲದಲ್ಲಿ ಚಿರತೆಯ ಕಾಟ ಆರಂಭವಾಗಿದ್ದು ಬೆಳೆಗಳ ನಾಶ ಮಾಡುವುದಲ್ಲದೇ ಕುರಿ ಮತ್ತು ನಾಯಿಗೆ ಕಚ್ಚಿದೆ ಎಂದು ಸ್ಥಳೀಯ ಗ್ರಾಮೀಣ ಘಟಕದ ರೈತ ಸಂಘದ ಅಧ್ಯಕ್ಷ ಪ್ರಭು ತಳವಾರ ತಿಳಿಸಿದ್ದಾರೆ.

Vijaya Karnataka 11 Mar 2019, 5:00 am
ಕುಮಾರಪಟ್ಟಣ: ರಾಣೇಬೆನ್ನೂರು ತಾಲೂಕಿನ ಮುಷ್ಟೂರು ಗ್ರಾಮದ ಕಬ್ಬಿನ ಹೊಲದಲ್ಲಿ ಚಿರತೆಯ ಕಾಟ ಆರಂಭವಾಗಿದ್ದು ಬೆಳೆಗಳ ನಾಶ ಮಾಡುವುದಲ್ಲದೇ ಕುರಿ ಮತ್ತು ನಾಯಿಗೆ ಕಚ್ಚಿದೆ ಎಂದು ಸ್ಥಳೀಯ ಗ್ರಾಮೀಣ ಘಟಕದ ರೈತ ಸಂಘದ ಅಧ್ಯಕ್ಷ ಪ್ರಭು ತಳವಾರ ತಿಳಿಸಿದ್ದಾರೆ.
Vijaya Karnataka Web HVR-10 KPM 01 P2 CHIRATE


ಇದರಿಂದ ಕಬ್ಬಿನ ಹೊಲಕ್ಕೆ ರಾತ್ರಿ ವೇಳೆ ನೀರು ಹಾಯಿಸಲು ರೈತರು ಭಯ ಪಡುತ್ತಿದ್ದಾರೆ. ಬಯಲಿದ್ದ ಹೊಲಗಳಲ್ಲಿ ಕುರಿ ಕಾಯುವವರು ಈ ಹಿಂದೆ ಕೆಲ ದಿನಗಳ ಮಟ್ಟಿಗೆ ವಾಸವಾಗಿರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಚಿರತೆ ದಾಳಿಯಿಂದ ಕುರಿಗಾಹಿಗಳಿಗೆ ಮತ್ತು ರೈತ ಸಮುದಾಯಕ್ಕೆ ಭೀತಿ ಉಂಟಾಗಿದೆ.

ಈ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೆ ಕ್ರಮ ಜರುಗಿಸಿ, ಚಿರತೆಯನ್ನು ಸೆರೆ ಹಿಡಿದು ರೈತರಿಗೆ ಮತ್ತು ಗ್ರಾಮಸ್ಥರಿಗೆ ರಕ್ಷ ಣೆ ನೀಡಬೇಕೆಂದು ಮುದೇನೂರು ಗ್ರಾಮ ಪಂಚಾಯಿತಿ ಸದಸ್ಯ ಆನಂದರೆಡ್ಡಿ ಎ. ಒತ್ತಾಯಿಸಿದ್ದಾರೆ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ