ಆ್ಯಪ್ನಗರ

ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರ ಅಗತ್ಯ

ನರೇಗಲ್ಲ: ಮಕ್ಕಳಿಗೆ ಮೌಲ್ಯಯುತ ಶಿಕ್ಷ ಣದ ಜತೆಗೆ ಉತ್ತಮ ಸಂಸ್ಕಾರ ಅಗತ್ಯವಾಗಿದೆ. ಪಾಲಕರು ಇದಕ್ಕೆ ಆದ್ಯತೆ ನೀಡಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ. ಜಿ.ಹಿರೇಮಠ ಹೇಳಿದರು.

Vijaya Karnataka 17 Dec 2018, 5:00 am
ನರೇಗಲ್ಲ: ಮಕ್ಕಳಿಗೆ ಮೌಲ್ಯಯುತ ಶಿಕ್ಷ ಣದ ಜತೆಗೆ ಉತ್ತಮ ಸಂಸ್ಕಾರ ಅಗತ್ಯವಾಗಿದೆ. ಪಾಲಕರು ಇದಕ್ಕೆ ಆದ್ಯತೆ ನೀಡಬೇಕು ಎಂದು ಗದಗ ಜಿಲ್ಲಾಧಿಕಾರಿ ಎಂ. ಜಿ.ಹಿರೇಮಠ ಹೇಳಿದರು.
Vijaya Karnataka Web children need education with education
ಮಕ್ಕಳಿಗೆ ಶಿಕ್ಷಣ ಜತೆ ಸಂಸ್ಕಾರ ಅಗತ್ಯ


ನರೇಗಲ್ಲ ಸಮಿಪದ ಹಾಲಕೆರೆ ಅನ್ನದಾನೇಶ್ವರ ಮಠದ ಸಭಾ ಮಂಟಪದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ಹಾಲಕೆರೆ ಸರಕಾರಿ ಪ್ರೌಢ ಶಾಲೆಯ ಲಿಂಗ ಸಮಾನತೆ ಅರಿವು ಕುರಿತ ಕಾರ್ಯಕ್ರಮ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಬಸವಣ್ಣನವರ ಕಾಲದಿಂದಲೂ ಮಹಿಳೆಗೆ ಪ್ರಾಧಾನ್ಯತೆ ನೀಡುವ ಕುರಿತು ಮಾತನಾಡುತ್ತೇವೆ. ಆದರೆ ಅದಕ್ಕೆ ಎಷ್ಟು ಮಾನ್ಯತೆ ನೀಡುತ್ತಿದ್ದೇವೆ ಎಂಬುದು ಆತ್ಮಾವಲೋಕನ ಮಾಡಿಕೊಳ್ಳುವಂತಾಗಿದೆ. ಮನೆಯಲ್ಲಿ ತಾಯಿ, ಸಹೋದರಿಯರ ಕಾರ್ಯಗಳಿಗೆ ಮನ್ನಣೆ ನೀಡುವ ನಾವು ಅದೆ ಒಂದು ಸಾಮಾಜಿಕ ಕ್ಷೇತ್ರದಲ್ಲಿ ಮಹಿಳೆಗೆ ಮಾನ್ಯತೆ ನೀಡುವುದಕ್ಕೆ ಹಿಂಜರಿಯುತ್ತಿದ್ದೇವೆ. ಮಹಿಳೆ ಇಂದು ಸಾಮಾಜಿಕ, ಶೈಕ್ಷ ಣಿಕ, ರಾಜಕೀಯದಂತಹ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾಳೆ. ಗ್ರಾಮೀಣ ಪ್ರದೇಶದಂತ ಇಂತಹ ಚಿಕ್ಕ ಗ್ರಾಮದಲ್ಲಿ ವಿದ್ಯಾರ್ಥಿನಿಯರ ಮತ್ತು ಪಾಲಕರ ಸಾಮಾಜಿಕ ಪಿಡುಗಿನ ಜಾಗೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಇಲ್ಲಿನ ಪ್ರಭಾರಿ ಮುಖೋಪಾಧ್ಯಾಯ ಪ್ರವೀಣ ಬೀರಾದಾರ ಹಾಗೂ ಶಿಕ್ಷ ಕ ಬಳಗದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ರೋಣ ಐಸಿಟಿಸಿ ಚ್ಯಾನ್ಸಲರ್‌ ರೇಷ್ಮಾ ದೇಸಾಯಿ ಉಪನ್ಯಾಸ ನೀಡಿ, ಸಮಾಜದಲ್ಲಿ ಮಹಿಳೆ ಪುರುಷರಷ್ಟೇ ಸಮಾನಳಾಗಿ ಎಲ್ಲ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮಹಿಳೆ ಅಬಲೆಯಲ್ಲ ಸಬಲಳು ಎಂದು ಸಾಬೀತುಪಡಿಸಿದ್ದಾಳೆ. ಶಿಕ್ಷ ಕ ಉತ್ತಮ ಶಿಕ್ಷ ಣ ನೀಡಿದರೆ ಪಾಲಕರು ಮಾನಸಿಕ ಸದೃಢತೆಯಿಂದ ಸಂಸ್ಕಾರ ನೀಡಿದಲ್ಲಿ ಸಮಾನತೆಗೆ ಆದ್ಯತೆ ನೀಡಿದಂತಾಗುತ್ತದೆ ಎಂದರು.

ಪ್ರಭಾರಿ ಮುಖ್ಯೋಪಾದ್ಯಾಯ ಪ್ರವೀಣ ಬೀರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾಧಿಕಾರಿ ಎಂ. ಜಿ. ಹಿರೇಮಠ ಹಾಗೂ ಡಾ. ಅಭಿನವ ಅನ್ನದಾನ ಸ್ವಾಮಿಗಳು ಲಿಂಗ ಸಮಾನತೆ ಕುರಿತ ಕರಪತ್ರ ಬಿಡುಗಡೆ ಮಾಡಿದರು. ಬಾಬು ಜಗಜೀವನ್‌ರಾವ್‌ ಸಂಸ್ಥೆ ಮುಖ್ಯಸ್ಥ ಸಣ್ಣಬಸಪ್ಪನವರ ಹಾಗೂ ಗದಗ ಡಯಟ್‌ನ ಆರ್‌. ಎಸ್‌. ಬುರುಡಿಯವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ನೀಡಿದರು.

ಅತಿಥಿಗಳಾಗಿ ರೋಣ ಬಿಇಓ ಎನ್‌. ನಂಜುಂಡಯ್ಯ, ತಾಪಂ ಸದಸ್ಯೆ ಜಯಶ್ರೀ ಪಾಟೀಲ, ಸೊಪ್ಪಿಹಿರೇಮಠ, ಗ್ರಾಪಂ ಅಧ್ಯಕ್ಷೆ ರೇಣಮ್ಮ ಕುರಿ, ಉಪಾಧ್ಯಕ್ಷ ಬಸವರಾಜ ಬಂಗಾಳಿಗಿಡದ, ಸದಸ್ಯರು ಹಾಗೂ ಎಸ್‌ಡಿಎಮ್‌ಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ