ಆ್ಯಪ್ನಗರ

ಸ್ವಚ್ಛತೆಗೂ ಸೈ, ಚಿಕಿತ್ಸೆಗೂ ಸೈ..!

ಅಕ್ಕಿಆಲೂರು: ಸರಕಾರಿ ಆಸ್ಪತ್ರೆಗಳಲ್ಲಿ ಗಲೀಜು, ದುರ್ವಾಸನೆ ಮಾಮೂಲು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಿರುವುದು ಎದ್ದು ಕಾಣಿಸುತ್ತಿದೆ!

Vijaya Karnataka 17 Jan 2019, 5:00 am
ಅಕ್ಕಿಆಲೂರು: ಸರಕಾರಿ ಆಸ್ಪತ್ರೆಗಳಲ್ಲಿ ಗಲೀಜು, ದುರ್ವಾಸನೆ ಮಾಮೂಲು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛ ಭಾರತದ ಕನಸು ಸಾಕಾರಗೊಳಿಸಿರುವುದು ಎದ್ದು ಕಾಣಿಸುತ್ತಿದೆ!
Vijaya Karnataka Web clean up to treat
ಸ್ವಚ್ಛತೆಗೂ ಸೈ, ಚಿಕಿತ್ಸೆಗೂ ಸೈ..!


30 ಹಾಸಿಗೆಗಳ ಆರೋಗ್ಯ ಕೇಂದ್ರಕ್ಕೆ ನಿತ್ಯವೂ ವೈದ್ಯಕೀಯ ಸೇವೆಗಾಗಿ ಹಾನಗಲ್‌ ಮಾತ್ರವಲ್ಲದೇ ನೆರೆಯ ತಾಲೂಕುಗಳ ಜನ ಆಗಮಿಸುತ್ತಾರೆ. ನಿತ್ಯವೂ 200 ಕ್ಕೂ ಹೆಚ್ಚು ರೋಗಿಗಳು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರತಿ ತಿಂಗಳು ನೂರಕ್ಕೂ ಅಧಿಕ ಹೆರಿಗೆಗಳಾಗುತ್ತಿವೆ. ಅಪಘಾತ ಸೇರಿದಂತೆ ಇತರ ತುರ್ತು ಚಿಕಿತ್ಸೆಯೂ ಇಲ್ಲಿ ಲಭ್ಯವಿದೆ.

ದುರ್ವಾಸನೆ ಮೂಗಿಗೆ ರಾಚಲ್ಲ..! :
ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿರುವುದು ವಿಶೇಷ. ದಿನಕ್ಕೆರಡು ಬಾರಿ ಕೇಂದ್ರದ ಇಡೀ ಆವರಣ ಸ್ವಚ್ಛಗೊಳಿಸುತ್ತಿರುವ ಸಿಬ್ಬಂದಿ, ರೋಗಿಗಳು ಮತ್ತು ಸಾರ್ವಜನಿಕರಿಗೆ ಸ್ವಚ್ಛತೆಯ ಪಾಠ ಹೇಳಿಕೊಡುತ್ತಿದ್ದಾರೆ. ಪರಿಣಾಮ ಎಲ್ಲೆಂದರಲ್ಲಿ ಉಗುಳುವುದು, ಉಳಿದ ಆಹಾರ ಪದಾರ್ಥ ಬಿಸಾಡುವುದು, ಮಲ-ಮೂತ್ರ ವಿಸರ್ಜನೆಗೆ ಫುಲ್‌ಸ್ಟಾಪ್‌ ಬಿದ್ದಿದೆ. ಶೌಚಾಲಯಗಳ ಶುಭ್ರತೆಗೆ ಗಮನ ಹರಿಸಿರುವುದರಿಂದ ದುರ್ವಾಸನೆ ಇಲ್ಲಿ ಮೂಗಿಗೆ ರಾಚದು.

ತ್ಯಾಜ್ಯ ವಿಲೇವಾರಿಯಲ್ಲೂ ಸೈ: ಘನ ಮತ್ತು ದ್ರವ ರೂಪದ ತ್ಯಾಜ್ಯವನ್ನು ಇಲ್ಲಿ ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿದೆ. ಸಂಗ್ರಹಗೊಂಡ ತ್ಯಾಜ್ಯ ವೈಜ್ಞಾನಿಕ ವಿಧಾನದಲ್ಲಿ ವಿಲೇವಾರಿಯಾಗುತ್ತಿದೆ. ಎಳನೀರು ಬುರುಡೆ, ಪ್ಲಾಸ್ಟಿಕ್‌ ಸೇರಿದಂತೆ ಗಲೀಜಿಗೆ ಕಾರಣವಾಗುವ ವಸ್ತುಗಳು ಇಲ್ಲಿ ನಿಷೇಧಗೊಳಪಟ್ಟಿವೆ. ಆವರಣದಲ್ಲೆಲ್ಲ ಶುಭ್ರತೆ ಮನೆ ಮಾಡಿರುವುದರಿಂದ ಇಲ್ಲಿಗಾಗಮಿಸುವ ಜನರಲ್ಲಿಯೂ ನಿಧಾನವಾಗಿ ಜಾಗೃತಿ ಮೂಡುತ್ತಿದ್ದು, ಅಗತ್ಯ ಸಹಕಾರ ನೀಡುತ್ತಿದ್ದಾರೆ.

ಅಲ್ಲಲ್ಲಿ ಸೌಂಡ್‌ಬಾಕ್ಸ್‌ ಅಳವಡಿಸಲಾಗಿದ್ದು ಯಾವ ಸೇವೆ ಯಾವ ಕೊಠಡಿಗಳಲ್ಲಿ ಲಭ್ಯ ಎನ್ನುವುದರ ಬಗೆಗೆ ನಿರಂತರ ಮಾಹಿತಿ ನೀಡಲಾಗುತ್ತಿರುವುದು ಗಮನ ಸೆಳೆಯುತ್ತಿದೆ. ಸುರಕ್ಷ ತೆಯ ದೃಷ್ಟಿಯಿಂದ ಸಿಸಿ ಕ್ಯಾಮರಾ ಹಾಕಲಾಗಿದೆ. ವೇಟಿಂಗ್‌ ಏರಿಯಾದಲ್ಲಿ ದೂರದರ್ಶನದ ವ್ಯವಸ್ಥೆ ಮಾಡಲಾಗಿದೆ. ಹೂಕುಂಡಗಳನ್ನು ಜೋಡಿಸಿಟ್ಟಿರುವುದು ಕಣ್ಮನ ಸೆಳೆಯುವಂತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯೂ ಲಭ್ಯವಿದೆ.

ನಗುಮೊಗದ ಸೇವೆ: ಕಾರ್ಪೊರೇಟ್‌ ಆಸ್ಪತ್ರೆಗಳ ಮಾದರಿಯಲ್ಲಿ ರೇಡಿಯಂ ಕಲರ್‌ ಕೋಟಿಂಗ್‌ ಮೂಲಕ ಇಲ್ಲಿ ವಿವಿಧ ಸೇವೆಗಳ ಬಗೆಗೆ ಮಾಹಿತಿ ಒದಗಿಸಲಾಗುತ್ತಿದೆ. ಯಾವುದೇ ಕೊಠಡಿ ಒಳ ಪ್ರವೇಶಿಸಿದರೂ ಸಹ ಅತ್ಯುತ್ತಮ ವ್ಯವಸ್ಥೆ ಕಾಣಸಿಗುತ್ತದೆ. ಗಾರ್ಡನ್‌ ನಿರ್ವಹಣೆಯೂ ತೃಪ್ತಿಕರವಾಗಿದೆ. ಎಲ್ಲೆಂದರಲ್ಲಿ ಬೈಕ್‌ ಮತ್ತು ವಾಹನ ನಿಲುಗಡೆಗೆ ಕಡಿವಾಣ ಹಾಕಲಾಗಿದೆ. ಬಹುಮುಖ್ಯವಾಗಿ ವೈದ್ಯರು ಮತ್ತು ಸಿಬ್ಬಂದಿ ನಗುಮೊಗದ ಸೇವೆ ನೀಡುತ್ತಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಕೇಂದ್ರಕ್ಕೆ ಭೇಟಿ ನೀಡಿ ವ್ಯವಸ್ಥೆಗೆ ಭೇಷ್‌ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ