ಆ್ಯಪ್ನಗರ

ಪಂ.ಪುಟ್ಟರಾಜ್‌ ಕವಿ ಗವಾಯಿಗಳ ಪುಣ್ಯಸ್ಮರಣೋತ್ಸವ

ಅಕ್ಕಿಆಲೂರು: ಲಕ್ಷಾಂತರ ಅಂಧ ಮತ್ತು ಅನಾಥರ ಪಾಲಿಗೆ ಬೆಳಕಾಗಿದ್ದ ಪಂ.ಪುಟ್ಟರಾಜ್‌ ಕವಿ ಗವಾಯಿಗಳು ಸದಾಕಾಲವೂ ಸ್ಮರಣೀಯರಾಗಿದ್ದು, ಅವರ ಆದರ್ಶದ ಹೊಂಬೆಳಕಿನಲ್ಲಿನಾವೆಲ್ಲಮುನ್ನಡೆಯುವ ಸಂಕಲ್ಪಗೈಯ್ಯಬೇಕಿದೆ ಎಂದು ಹೋತನಹಳ್ಳಿಯ ಸಿದ್ದಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಹೇಳಿದರು.

Vijaya Karnataka 12 Oct 2019, 5:00 am
ಅಕ್ಕಿಆಲೂರು: ಲಕ್ಷಾಂತರ ಅಂಧ ಮತ್ತು ಅನಾಥರ ಪಾಲಿಗೆ ಬೆಳಕಾಗಿದ್ದ ಪಂ.ಪುಟ್ಟರಾಜ್‌ ಕವಿ ಗವಾಯಿಗಳು ಸದಾಕಾಲವೂ ಸ್ಮರಣೀಯರಾಗಿದ್ದು, ಅವರ ಆದರ್ಶದ ಹೊಂಬೆಳಕಿನಲ್ಲಿನಾವೆಲ್ಲಮುನ್ನಡೆಯುವ ಸಂಕಲ್ಪಗೈಯ್ಯಬೇಕಿದೆ ಎಂದು ಹೋತನಹಳ್ಳಿಯ ಸಿದ್ದಾರೂಢ ಮಠದ ಸದ್ಗುರು ಶಂಕರಾನಂದ ಸ್ವಾಮೀಜಿ ಹೇಳಿದರು.
Vijaya Karnataka Web commemoration of the poet pattaraj poet gawaii
ಪಂ.ಪುಟ್ಟರಾಜ್‌ ಕವಿ ಗವಾಯಿಗಳ ಪುಣ್ಯಸ್ಮರಣೋತ್ಸವ


ಶಾಡಗುಪ್ಪಿಯ ಕುಮಾರೇಶ್ವರ ಓಣಿಯಲ್ಲಿಆಯೋಜಿಸಲಾಗಿದ್ದ ಪಂ.ಪುಟ್ಟರಾಜ್‌ ಕವಿ ಗವಾಯಿಗಳ ಪುಣ್ಯಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗವಾಯಿಗಳು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೇ ಸಮಾಜದ ನಾನಾ ಮಗ್ಗಲುಗಳಲ್ಲಿತಮ್ಮ ಸೇವಾ ಚಟುವಟಿಕೆ ವಿಸ್ತರಿಸಿ ಅಸಂಖ್ಯಾತರಿಗೆ ಬಾಳ ಜೀವನಕ್ಕೆ ದಾರಿ ಕಲ್ಪಿಸಿದ್ದಾರೆ. ಸಂಗೀತ, ಸಾಹಿತ್ಯ ಕ್ಷೇತ್ರಗಳಿಗೂ ಬಹುದೊಡ್ಡ ಕೊಡುಗೆ ನೀಡಿದ್ದಾರೆ ಎಂದರು.

ರಾಜ್ಯಪ್ರಶಸ್ತಿ ಪುರಸ್ಕೃತ ಕಲಾವಿದ ಎಸ್‌.ಎಸ್‌.ಮೂರಮಟ್ಟಿ, ಶಿವಪುತ್ರಪ್ಪ ಹೇರೂರ ಸಂಗೀತ ಕಾರ್ಯಕ್ರಮ ನೀಡಿದರು. ಸೋಮಪ್ಪ ಮುರಡಣ್ಣನವರ, ಬಸವರಾಜ್‌ ಹೇರೂರ, ಪರಸಪ್ಪ ನರ್ಚಿಕಟ್ಟಿ, ಮಲ್ಲಿಕಾರ್ಜುನ ಬಾಳೂರ, ನಾಗಪ್ಪ ಪಿಲ್ಲಿಕಟ್ಟಿ, ಶಿವರುದ್ರಪ್ಪ ಮಲ್ಲಾಡದ, ನೀಲಮ್ಮ ಮೂರಮಟ್ಟಿ ಸೇರಿದಂತೆ ಇನ್ನೂ ಹಲವರು ಇದ್ದರು. ಇದೇ ಸಂದರ್ಭದಲ್ಲಿನಾನಾ ಧಾರ್ಮಿಕ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ