ಆ್ಯಪ್ನಗರ

ವಿಶ್ವಾಸ ಮತ 'ಧಾರಾವಾಹಿ': ಗಲ್ಲಿ ಗಲ್ಲಿಯಲ್ಲಿ ಚರ್ಚೆ

ಬಸವರಾಜ ಸರೂರ ರಾಣೇಬೆನ್ನೂರ: ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷ ಗಳ ಸಮ್ಮಿಶ್ರ ಸರಕಾರದ ವಿಶ್ವಾಸ ಮತ ಪ್ರಹಸನ ಕಳೆದು ಒಂದು ವಾರದಿಂದ ಧಾರಾವಾಹಿ ರೀತಿಯಲ್ಲಿ ಮುಂದುವರಿದ ಕುರಿತು ನಗರ ಹಾಗೂ ಗ್ರಾಮೀಣ ಭಾಗದ ಗಲ್ಲಿ ಗಲ್ಲಿಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.

Vijaya Karnataka 24 Jul 2019, 5:00 am
ಬಸವರಾಜ ಸರೂರ ರಾಣೇಬೆನ್ನೂರ: ರಾಜ್ಯದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷ ಗಳ ಸಮ್ಮಿಶ್ರ ಸರಕಾರದ ವಿಶ್ವಾಸ ಮತ ಪ್ರಹಸನ ಕಳೆದು ಒಂದು ವಾರದಿಂದ ಧಾರಾವಾಹಿ ರೀತಿಯಲ್ಲಿ ಮುಂದುವರಿದ ಕುರಿತು ನಗರ ಹಾಗೂ ಗ್ರಾಮೀಣ ಭಾಗದ ಗಲ್ಲಿ ಗಲ್ಲಿಗಳಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
Vijaya Karnataka Web confidence vote serial debate in galli galli
ವಿಶ್ವಾಸ ಮತ 'ಧಾರಾವಾಹಿ': ಗಲ್ಲಿ ಗಲ್ಲಿಯಲ್ಲಿ ಚರ್ಚೆ


ಕ್ರಿಕೆಟ್‌ ಪಂದ್ಯಗಳನ್ನು ವೀಕ್ಷಿಸುವ ರೀತಿಯಲ್ಲಿ ಜನರು ಸಮ್ಮಿಶ್ರ ಸರಕಾರದ ಪ್ರತಿದಿನದ ಬೆಳವಣಿಗೆಯನ್ನು ಕುತೂಹಲದಿಂದ ನೋಡಿದರು. ಇನ್ನು ಕೆಲವರು ಮೊಬೈಲ್‌ಗಳಲ್ಲಿ ವಿಧಾನಸಭೆ ಕಲಾಪಗಳ ದೃಶ್ಯಗಳನ್ನು ವೀಕ್ಷ ಣೆ ಮಾಡುತ್ತಿರುವುದು ಸಾಮಾನ್ಯವಾಗಿದೆ.

ಪ್ರಮುಖ ಚರ್ಚಾ ವಿಷಯ: ನಗರ, ಹಳ್ಳಿಯ ಹೋಟೆಲ್‌, ಚಹಾದಂಗಡಿ, ಕಿರಾಣಿ ಅಂಗಡಿ, ಹೇರ್‌ಕಟಿಂಗ್‌ ಸಲೂನ್‌ ಮುಂತಾದ ಸ್ಥಳಗಳಲ್ಲಿ ಸಮ್ಮಿಶ್ರ ಸರಕಾರದ ವಿಶ್ವಾಸ ಮತದ ವಿಷಯ ಪ್ರಮುಖ ಚರ್ಚಾ ವಿಷಯವಾಗಿದೆ.

ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಏನು ಬರಬಹುದು. ಸ್ಪೀಕರ್‌ ನಡೆ, ಮುಖ್ಯಮಂತ್ರಿ, ಪ್ರತಿಪಕ್ಷದ ಮುಖಂಡರ ಮಾತಿನ ಚಕಮಕಿ, ಅಧಿವೇಶನದಲ್ಲಿ ಗದ್ದಲ, ಪ್ರತಿದಿನ ಅಧಿವೇಶನ ಮುಂದೂಡಿಕೆ ಒಟ್ಟಾರೆ ಸಂಗತಿಗಳ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ.

ವಿಧಾನಸಭೆಯಲ್ಲಿ ಸಮ್ಮಿಶ್ರ ಸರಕಾರ ವಿಶ್ವಾಸ ಮತ ವಿಷಯ ಹೊರತುಪಡಿಸಿ ಅನ್ಯ ವಿಷಯಗಳ ಚರ್ಚೆ ನಡೆಸಿದ ಬಗ್ಗೆಯೂ ಜನರಿಂದ ಆಕ್ಷೇಪ ವ್ಯಕ್ತವಾಯಿತು. ಇಂತಹ ವಿಶ್ವಾಸ ಮತದ ಪ್ರಹಸನ ಜನರಲ್ಲಿ ಬೇಸರ ತರಿಸಿದ್ದಲ್ಲದೇ, ಇಂತಹವರಿಗೆ ನಾವು ಯಾಕಾದರೂ ಮತ ಹಾಕಿ ಆಯ್ಕೆ ಮಾಡಿದ್ದೇವೆ ಎನ್ನುವ ಮಾತು ಕೂಡ ಕೇಳಿಬಂತು.

ಶಾಸಕ ಆರ್‌.ಶಂಕರ್‌ ನಡೆಗೆ ಬೇಸರ: ಪ್ರಸಕ್ತ ರಾಜಕೀಯ ವಿದ್ಯಮಾನಗಳಲ್ಲಿ ಸ್ಥಳೀಯ ಪಕ್ಷೇತರ ಶಾಸಕ ಆರ್‌.ಶಂಕರ್‌ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಶಾಸಕರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸಚಿವ ಸ್ಥಾನಕ್ಕಾಗಿ ಒಂದು ಬಾರಿ ಕಾಂಗ್ರೆಸ್‌, ಮತ್ತೊಂದು ಬಾರಿ ಬಿಜೆಪಿ ಜತೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಗೆ ವೈಯಕ್ತಿಕ ಲಾಭವೇ ಮುಖ್ಯವಾಗಿದೆಯೇ ಹೊರತು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಕಿಂಚಿತ್ತೂ ಕಳಕಳಿಯಿಲ್ಲವಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಬಿ.ಸಿ.ಪಾಟೀಲ್‌ ನಡೆಗೆ ಅಚ್ಚರಿ: ಇನ್ನೊಂದೆಡೆ ಹಿರೇಕೆರೂರ ಶಾಸಕ ಬಿ.ಸಿ.ಪಾಟೀಲ್‌ ಅವರು ಅತೃಪ್ತರ ಪಟ್ಟಿಯಲ್ಲಿ ಸೇರಿದ ಬಗ್ಗೆ ಹಿರೇಕೆರೂರ ತಾಲೂಕಿನಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಶಾಸಕರ ನಡೆಯನ್ನು ಬೆಂಬಲಿಸಿರುವ ಅವರ ಬೆಂಬಲಿಗರು, ಕಾರ್ಯಕರ್ತರು ಅಭಿವೃದ್ಧಿಗಾಗಿ ಬಿ.ಸಿ.ಪಾಟೀಲ ಒಳ್ಳೆಯ ಹೆಜ್ಜೆ ಇಟ್ಟಿದ್ದಾರೆ ಎಂದಿದ್ದಾರೆ. ಇನ್ನೊಂದೆಡೆ ಮತದಾರರು ರಾಜಕೀಯ ವಿಪ್ಲವದ ಬಗ್ಗೆ ಅಷ್ಟೇ ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ