ಆ್ಯಪ್ನಗರ

ಸಂಘರ್ಷದ ಕಥನ ‘ರಾಕ್ಷಸ ತಂಗಡಿ’

ಅಕ್ಕಿಆಲೂರು: ರಂಗಗ್ರಾಮ ಖ್ಯಾತಿಯ ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿಗಜಾನನ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿಆಯೋಜಿಸಲಾಗಿದ್ದ ನೀನಾಸಂ ನಾಟಕೋತ್ಸವದಲ್ಲಿಮೊದಲ ದಿನ ಪ್ರದರ್ಶನ ಕಂಡ ಗಿರೀಶ್‌ ಕಾರ್ನಾಡ್‌ ರಚನೆ, ಬಿ.ಆರ್‌.ವೆಂಕಟರಮಣ ಐತಾಳ ನಿರ್ದೇಶನದ 'ರಾಕ್ಷಸ ತಂಗಡಿ' ನಾಟಕ ನೆರೆದ ರಂಗಾಸಕ್ತರ ಮನ ಸೆಳೆಯಿತು.

Vijaya Karnataka 21 Nov 2019, 5:00 am
ಅಕ್ಕಿಆಲೂರು: ರಂಗಗ್ರಾಮ ಖ್ಯಾತಿಯ ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿಗಜಾನನ ಯುವಕ ಮಂಡಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿಆಯೋಜಿಸಲಾಗಿದ್ದ ನೀನಾಸಂ ನಾಟಕೋತ್ಸವದಲ್ಲಿಮೊದಲ ದಿನ ಪ್ರದರ್ಶನ ಕಂಡ ಗಿರೀಶ್‌ ಕಾರ್ನಾಡ್‌ ರಚನೆ, ಬಿ.ಆರ್‌.ವೆಂಕಟರಮಣ ಐತಾಳ ನಿರ್ದೇಶನದ 'ರಾಕ್ಷಸ ತಂಗಡಿ' ನಾಟಕ ನೆರೆದ ರಂಗಾಸಕ್ತರ ಮನ ಸೆಳೆಯಿತು.
Vijaya Karnataka Web conflict story
ಸಂಘರ್ಷದ ಕಥನ ‘ರಾಕ್ಷಸ ತಂಗಡಿ’


ವಿಜಯನಗರ ಸಾಮ್ರಾಜ್ಯ ಮತ್ತು ಅದರ ಪತನವನ್ನು ರಾಷ್ಟ್ರೀಯತೆಗಳ ಸಂಘರ್ಷ, ಧರ್ಮಗಳ ತಿಕ್ಕಾಟವಾಗಿ ಹಲವು ಇತಿಹಾಸಕಾರರು ಕಟ್ಟಿದ್ದರೆ, ಗಿರೀಶ್‌ ಕಾರ್ನಾಡ್‌ ಅವರ ಪ್ರಸ್ತುತ ನಾಟಕ ರಾಜಕೀಯ ಮತ್ತು ಸಾಮಾಜಿಕ ವಾಸ್ತವಗಳ ಹಿನ್ನೆಲೆಯಲ್ಲಿವ್ಯಕ್ತಿತ್ವಗಳ ನೆಲೆಯಿಂದ ಕಥನ ಗ್ರಹಿಸಲು ಪ್ರಯತ್ನಿಸಿದ್ದು ಎದ್ದು ಕಂಡಿತು.

ಕದನದ ಒಂದು ತುದಿಯಲ್ಲಿಅಳಿಯ ರಾಮರಾಯನಿದ್ದು, ಚಕ್ರವರ್ತಿ ಕೃಷ್ಣದೇವರಾಯನ ಈ ಅಳಿಯ ರಾಜನ ನೇರ ಸಂಬಂಧಿಗಳನ್ನು ಬದಿಗೆ ತಳ್ಳಿ ಆಡಳಿತ ನಿಯಂತ್ರಿಸುತ್ತಾನೆ. ಇನ್ನೊಂದೆಡೆ ಹರಿದು ಹಂಚಿಕೊಂಡಿದ್ದ ಉತ್ತರ ಪ್ರದೇಶದ ಮುಸ್ಲಿಂ ತುಂಡರಸರು ವಿಜಯಪುರದ ಸುಲ್ತಾನ್‌ ಆದಿಲ್‌ ಷಾನ ನೇತೃತ್ವದಲ್ಲಿಒಂದಾಗುತ್ತಾರೆ. ಇಂಥ ವಿಶಿಷ್ಟ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿನಿರ್ಣಾಯಕ ಯುದ್ಧವೊಂದು ಸಂಭವಿಸುತ್ತದೆ.

ರಕ್ಕಸಗಿ ಮತ್ತು ತಂಗಡಗಿ ಎಂಬೆರಡು ಊರುಗಳ ಮಧ್ಯೆ ನಡೆಯುವ ಈ ಯುದ್ಧದ ಪ್ರಮುಖ ಮಜಲಿನಲ್ಲಿರಾಮರಾಯ ಹತನಾಗುತ್ತಾನೆ. ಆ ಬಳಿಕ ಸಾಮ್ರಾಜ್ಯ ಹೊರಗಿನವರಿಂದ ಮಾತ್ರವಲ್ಲದೇ ಸ್ಥಳೀಯರಿಂದಲೂ ಕೊಳ್ಳೆ ಹೊಡೆಯಲ್ಪಡುತ್ತದೆ. ಕೆಲವೇ ಕಾಲದಲ್ಲಿನಾಮಾವಶೇಷವಾಗುತ್ತದೆ.

ಯುದ್ಧ ನಿರರ್ಥಕ ಮತ್ತು ಅನರ್ಥಕಾರಿ ಎನ್ನುವುದನ್ನು ಮಹಾಭಾರತವೇ ತೋರಿಸಿದ್ದರೂ ಭಾರತದ ಇತಿಹಾಸದಲ್ಲಿಇಂದಿನವರೆಗೂ ನಡೆದು ಮುನ್ನಡೆಯುತ್ತಿರುವ ಯುದ್ಧೋತ್ಸಾಹ, ಯುದ್ಧೋನ್ಮಾದಗಳ ಹಿನ್ನೆಲೆಯಲ್ಲಿಈ ನಾಟಕವನ್ನು ರಂಗಕ್ಕೆ ತರುವ ಪ್ರಯತ್ನ ಕಲಾವಿದರ ಮನೋಜ್ಞ ಅಭಿನಯದಿಂದ ಯಶ ಕಂಡಿತು.

ಉಜ್ವಲ್‌ ಯು.ವಿ., ಕರಿಯಪ್ಪ ಕವಲೂರು, ಚಂದನ್‌ ಎನ್‌., ದೇವೇಂದ್ರ ಬಡಿಗೇರ, ನಾಗೇಂದ್ರ ಶ್ರೀನಿವಾಸ್‌, ಪ್ರಶಾಂತ ಶೆಟ್ಟಿ, ಮಂಜುನಾಥ ಎ.ಸಿ., ಮಂಜುನಾಥ ಎಚ್‌., ಮಂಜುನಾಥ ಹಿರೇಮಠ, ರವಿಕುಮಾರ ಬೆಣ್ಣಿ, ರಂಜಿತಾ ಜಾಧವ್‌, ಶಿವಕುಮಾರ ತೀರ್ಥಹಳ್ಳಿ, ಶ್ರೀಪಾದ್‌ ತೀರ್ಥಹಳ್ಳಿ, ಸಲ್ಮಾ ದಂಡಿನ, ಸುಮಧುರ ರಾವ್‌, ದಿಲಾವರ್‌ ಖಾನ್‌, ಸಂತೋಷಕುಮಾರ ಮಳ್ಳಿ, ಹನುಮಂತ ಗುಡಗೂರು ವಿವಿಧ ಪಾತ್ರಗಳಲ್ಲಿಮಿಂಚಿ, ಸೈ ಎನಿಸಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ