ಆ್ಯಪ್ನಗರ

ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ

ಶಿಗ್ಗಾವಿ: ಕಾಂಗ್ರೆಸ್‌ ಮುಖಂಡ ಗುರುನಗೌಡ್ರ ಪಾಟೀಲ ಅವರ ನೇತೃತ್ವದಲ್ಲಿ ಕಾರ್ಯಕರ್ತರು, ಭಾನುವಾರ ತಾಲೂಕಿನ ಅತ್ತಿಗೇರಿ, ಶಿಶುವಿನಹಾಳ, ಹಿರೇಮಲ್ಲೂರು ಚಿಕ್ಕಮಲ್ಲೂರ, ಕಂಕಣವಾಡ, ಹನುಮರಹಳ್ಳಿ ಸೇರಿದಂತೆ ವಿವಿಧಡೆ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪರ ಮತಯಾಚಿಸಿದರು.

Vijaya Karnataka 22 Apr 2019, 5:00 am
ಶಿಗ್ಗಾವಿ: ಕಾಂಗ್ರೆಸ್‌ ಮುಖಂಡ ಗುರುನಗೌಡ್ರ ಪಾಟೀಲ ಅವರ ನೇತೃತ್ವದಲ್ಲಿ ಕಾರ್ಯಕರ್ತರು, ಭಾನುವಾರ ತಾಲೂಕಿನ ಅತ್ತಿಗೇರಿ, ಶಿಶುವಿನಹಾಳ, ಹಿರೇಮಲ್ಲೂರು ಚಿಕ್ಕಮಲ್ಲೂರ, ಕಂಕಣವಾಡ, ಹನುಮರಹಳ್ಳಿ ಸೇರಿದಂತೆ ವಿವಿಧಡೆ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಲಕರ್ಣಿ ಪರ ಮತಯಾಚಿಸಿದರು.
Vijaya Karnataka Web congress nominee candidate
ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ


ಈ ಸಂದರ್ಭದಲ್ಲಿ ಮಾತನಾಡಿದ ಪಾಟೀಲ, ದಲಿತ ಹಿಂದುಳಿದವರಿಗೆ ಬಿಜೆಪಿ ನೀಡಿರುವ ಕೊಡುಗೇನು? ಮತ್ತೇ ಅಧಿಕಾರ ಕೊಟ್ಟರೆ ಸಂವಿಧಾನ ಬದಲಾವಣೆಯ ಮೂಲಕ ಈ ಜನಾಂಗದ ಹಕ್ಕು ಮೊಟುಕುಗೊಳಿಸುವಂತ ನೀಚ ಹುನ್ನಾರ ಬಿಜೆಪಿಯದ್ದು. 15 ವರ್ಷ ಸಂಸದರಾದ ಪ್ರಹ್ಲಾದ ಜೋಶಿ, ಹಿಂದುಳಿದ ವಿಶೇಷಚೇತನ ಎಂಬ ಕಾರಣಕ್ಕೆ ಒಂದು ಬೈಸಿಕಲ್‌ ನೀಡಲಿಲ್ಲ. ಅರ್ಜಿ ಹಿಡಿದು, ಅಲೆದಾಡಿದರೂ ಕ್ಯಾರೆ ಎನ್ನಲಿಲ್ಲ. ಈ ಜನರ ಧ್ವನಿಯಾದ ವಿನಯ್‌ಗೆ ಮತ ನೀಡಿ ಎಂದು ಮನವಿ ಮಾಡಿದರು.

ದಲಿತ, ಹಿಂದುಳಿದವರ ಮತ ನನಗೆ ಬೇಕಿಲ್ಲ. ನನ್ನ ಗೆಲ್ಲಿಸುವ ಜನರು ಬೇರೆ ಎಂದು ಸಾರಿ ಹೇಳುವ ಜೋಶಿ ಅವರನ್ನು ಮನೆಗೆ ಕಳುಹಿಸಿ. ಸಮಸ್ಯೆಗೆ ಸ್ಪಂದಿಸಿ ಪರಿಹಾರವಾಗುವ ಕುಲಕರ್ಣಿ ಅವರನ್ನು ಲೋಕಸಭೆಗೆ ಕಳು ಹಿಸಬೇಕು. ಪ್ರತಿಯೊಬ್ಬ ಸ್ವಾಭಿಮಾನಿ ಈ ಬಾರಿ ಕಾಂಗ್ರೆಸ್‌ಗೆ ಮತ ಕೊಡಬೇಕು ಎಂದು ಪಾಟೀಲ ಕೇಳಿಕೊಂಡರು.

ಗ್ರಾಪಂ ಅಧ್ಯಕ್ಷ ಗದಿಗೆಪ್ಪ ತಾರಿಹಾಳ, ಮುಖಂಡರಾದ ಮಲ್ಲಿಕಾರ್ಜುನಗೌಡ್ರ ಪಾಟೀಲ, ವಿಶ್ವನಾಥ ದೇವರಮನಿ, ಗ್ರಾಪಂ ಸದಸ್ಯ ನಿಂಗನಗೌಡ ಪಾಟೀಲ, ಶಿವಪ್ಪ ನಿಂಗಪ್ಪನವರ, ಶಂಕರಗೌಡ ಪಾಟೀಲ, ಗಂಗಯ್ಯ ಚಿಕ್ಕಮಠ, ಬಸವರಾಜ ಗಿರಡ್ಡಿ, ಬಸವರಾಜ ಯರೇಸೀಮೆ, ರವಿ ಕುಲಕರ್ಣಿ, ಶಿವಣ್ಣ ಚಕ್ರಸಾಲಿ, ಫಕ್ಕಿರಪ್ಪ ಕರೆಕನ್ನಮ್ಮನವರ, ಸಂಕಪ್ಪ ಮಡಿವಾಳರ, ವೀರನಗೌಡ ಹೊಕ್ಕರದೋದಿ, ಶಿವುನಗೌಡ ರಾಮನಗೌಡ್ರ, ಶಿವನಗೌಡ್ರ ಯಕ್ಕಿಕೊಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ