ಆ್ಯಪ್ನಗರ

ಶಾಲೆ ಪ್ರಾರಂಭಿಸಲು ಪೋಷಕರ, ಪಾಲಕರ ಒಮ್ಮತದ ಒಪ್ಪಿಗೆ

ಹಿರೇಕೆರೂರು : ರಟ್ಟೀಹಳ್ಳಿ ತಾಲೂಕಿನ ಹೊಸಳ್ಳಿಗ್ರಾಮದಲ್ಲಿರುವ ಸಿಇಎಸ್‌ ವಿದ್ಯಾಸಂಸ್ಥೆಯ ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆಯ ಆವರಣದಲ್ಲಿಜರುಗಿದ ಮಕ್ಕಳ ಪಾಲಕರ ಹಾಗೂ ಪೋಷಕರ ಸಭೆಯಲ್ಲಿಶಾಲೆ ಪ್ರಾರಂಭಿಸುವಂತೆ ಪಾಲಕರು ಹಾಗೂ ಪೋಷಕರಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.

Vijaya Karnataka 14 Jun 2020, 5:00 am
ಹಿರೇಕೆರೂರು : ರಟ್ಟೀಹಳ್ಳಿ ತಾಲೂಕಿನ ಹೊಸಳ್ಳಿಗ್ರಾಮದಲ್ಲಿರುವ ಸಿಇಎಸ್‌ ವಿದ್ಯಾಸಂಸ್ಥೆಯ ಶ್ರೀ ಮಲ್ಲಿಕಾರ್ಜುನ ಪ್ರೌಢ ಶಾಲೆಯ ಆವರಣದಲ್ಲಿಜರುಗಿದ ಮಕ್ಕಳ ಪಾಲಕರ ಹಾಗೂ ಪೋಷಕರ ಸಭೆಯಲ್ಲಿಶಾಲೆ ಪ್ರಾರಂಭಿಸುವಂತೆ ಪಾಲಕರು ಹಾಗೂ ಪೋಷಕರಿಂದ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು.
Vijaya Karnataka Web consent of parents and guardians to start school
ಶಾಲೆ ಪ್ರಾರಂಭಿಸಲು ಪೋಷಕರ, ಪಾಲಕರ ಒಮ್ಮತದ ಒಪ್ಪಿಗೆ


ಶಾಲಾ ಸುಧಾರಣ ಸಮಿತಿ ಅಧ್ಯಕ್ಷ ಈ.ಎಸ್‌. ಬಣಕಾರ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗೆ ಹಾಜರಾಗುವ ಹಾಗೂ 2020-21ನೇ ಸಾಲಿನ 8,9,10 ನೇ ತರಗತಿ ಪ್ರಾರಂಭಿಸಲು ಪಾಲಕರ ಅಭಿಪ್ರಾಯ ಕುರಿತು ವಿಷಯ ಚರ್ಚಿಸಲಾಯಿತು.

ಜುಲೈ 15ರಿಂದ ಶಾಲೆ ಪ್ರಾರಂಭಿಸಲು ಪಾಲಕರು ಒಮ್ಮತದಿಂದ ಒಪ್ಪಿಗೆ ಸೂಚಿಸಿದರು. ಮೊದಲಿನ ಪದ್ಧತಿಯಲ್ಲಿಯೇ ಸಾಮಾಜಿಕ ಅಂತರ ಕಾಯ್ದುಕೊಂಡು ಬೆಂಚಿಗೆ ಇಬ್ಬರು ವಿದ್ಯಾರ್ಥಿಗಳಂತೆ ಕೂಡಿಸಿ ಬೋಧಿಸಲು ತಿಳಿಸಲಾಯಿತು. ಮೊದಲಿನಂತೆ ಒಂದೇ ಪಾಳಿಯಲ್ಲಿಶಾಲೆ ನಡೆಸಲು ಸೂಚಿಸಿದರು. ಬಿಸಿಊಟದ ಸಂದರ್ಭದಲ್ಲಿಬಿಸಿ ನೀರಿನಲ್ಲಿಪಾತ್ರೆ ಪರಿಕರ ಹಾಗೂ ಊಟದ ತಟ್ಟೆ ಶುಚಿಗೊಳಿಸಲು ತಿಳಿಸಿದರು. ವಿದ್ಯಾರ್ಥಿಗಳು ಶಾಲೆಗೆ ಬಂದ ಮೇಲೆ ಸ್ಯಾನಿಟೈಸರ್‌ ಮತ್ತು ಮಾಸ್ಕ್‌ ಬಳಸಲು ಸೂಚಿಸಿದರು. ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಪಾಲಕರು ಮಕ್ಕಳನ್ನು ಜವಾಬ್ದಾರಿಯುತವಾಗಿ ಕರೆದುಕೊಂಡು ಹೋಗಿ ಬರಲು ಸೂಚಿಸಲಾಯಿತು.

ಸರಕಾರದ ಆದೇಶದಂತೆ ಜು.15ರಿಂದ ಶಾಲಾ ದಾಖಲಾತಿ ಪ್ರಾರಂಭಿಸಲು ಪಾಲಕರ ಸಭೆಯಲ್ಲಿತೀರ್ಮಾನಿಸಲಾಯಿತು. ಸೋಮಶೇಖರಪ್ಪ ಚಪ್ಪರದಹಳ್ಳಿ,ಬಸವರಾಜ ಮಳಗಿ,ಗಡ್ಲಪ್ಪ ಯಡಚಿ, ರಮೇಶ ಗಿಡ್ಡಪ್ಪನವರ,ಜೈಕುಮಾರ ಉಪ್ಪಾರ, ಆರ್‌.ಎಚ್‌.ಪೂಜಾರಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ