ಆ್ಯಪ್ನಗರ

ಹಾವೇರಿ ಜಿಲ್ಲಾದ್ಯಂತ ಮುಂದುವರಿದ ಮಳೆ ಆರ್ಭಟ

ಹಾವೇರಿ: ಜಿಲ್ಲಾದ್ಯಂತ ಮಳೆಯ ಆರ್ಭಟ ಭಾನುವಾರವೂ ಮುಂದುವರೆದಿದೆ. ಜಿಲ್ಲೆಯಲ್ಲಿಹರಿದಿರುವ ಪಂಚ ನದಿಗಳ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ತೀರದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

Vijaya Karnataka 17 Aug 2020, 5:00 am
ಹಾವೇರಿ: ಜಿಲ್ಲಾದ್ಯಂತ ಮಳೆಯ ಆರ್ಭಟ ಭಾನುವಾರವೂ ಮುಂದುವರೆದಿದೆ. ಜಿಲ್ಲೆಯಲ್ಲಿಹರಿದಿರುವ ಪಂಚ ನದಿಗಳ ನೀರಿನ ಹರಿವು ಹೆಚ್ಚಳವಾಗಿದ್ದು, ನದಿ ತೀರದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
Vijaya Karnataka Web 16 MANJU 7D--_23
ಸವಣೂರ ತಾಲೂಕಿನ ಮೆಳ್ಳಾಗಟ್ಟಿ ಬ್ರಿಜ್‌ ಕಮ್‌ ಬ್ಯಾರೇಜ್‌ ತುಂಬಿ ಹರಿಯುತ್ತಿರುವುದು.


ಶನಿವಾರ ಸಂಜೆಯಿಂದ ಜಿಟಿಜಿಟಿಯಾಗಿ ಜಡಿ ಮಳೆ ಸುರಿಯುತ್ತಿದ್ದು, ಭಾನುವಾರವೂ ಮುಂದುವರಿದಿತ್ತು. ಹಾವೇರಿ, ಶಿಗ್ಗಾವಿ, ಸವಣೂರ, ಹಾನಗಲ್‌ ಸೇರಿದಂತೆ ಜಿಲ್ಲಾದ್ಯಂತ ಮಳೆ ಸುರಿಯುತ್ತಿದ್ದು, ತುಂಗಭದ್ರಾ, ವರದೆ, ಕುಮದ್ವತಿ, ಧರ್ಮಾ ನದಿಗಳು ನೀರಿನ ಮಟ್ಟವೂ ಕ್ರಮೇಣ ಹೆಚ್ಚಾಗಿದೆ.

ವರದಾ ನದಿ ದಂಡೆಯಲ್ಲಿರುವ ತೆವರಮೆಳ್ಳಹಳ್ಳಿ, ವರದಾಹಳ್ಳಿ, ಚಳ್ಯಾಳ, ಕಳಸೂರ, ಹಾಲಗಿ ಮರೋಳ, ನಾಗನೂರು, ಬರದೂರ, ಹಳೆಹಲಸೂರ, ಕೋಳೂರು, ಮಂಟಗಣಿ, ಕಲಕೋಟಿ, ಹಿರೇಮುಗದೂರ, ನದಿನೀರಲಗಿ ಸೇರಿದಂತೆ ಹಾನಗಲ್‌ ತಾಲೂಕಿನ ಧರ್ಮಾ, ವರದಾ ನದಿ ದಂಡೆಯಲ್ಲಿರುವ ಗ್ರಾಮಗಳಲ್ಲಿಆತಂಕ ಉಂಟಾಗಿದೆ.

ಹಿರೇಕೆರೂರು, ರಟ್ಟೀಹಳ್ಳಿ ಹಾಗೂ ರಾಣೇಬೆನ್ನೂರ ತಾಲೂಕಿನಲ್ಲಿಹರಿದಿರುವ ತುಂಗಭದ್ರಾ, ಕುಮದ್ವತಿ ನದಿ ನೀರಿನ ಪ್ರಮಾಣ ಹೆಚ್ಚಾಗಿ ಸೇತುವೆ ರಸ್ತೆಗೆ ನಿರ್ಮಿಸಲಾಗಿರುವ ಬಾಂದರ್‌ ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಗೊಬ್ಬರಕ್ಕೆ ಪರದಾಟ:
ಜಡಿ ಮಳೆಯಿಂದ ಬೆಳೆದ ಬೆಳೆಗಳು ಶೀತಗೊಂಡು ನೆಲಕಚ್ಚಿವೆ. ಶೀತ ನಿವಾರಣೆಗಾಗಿ ಬೆಳೆಗಳಿಗೆ ಗೊಬ್ಬರ ನೀಡುವ ಅಗತ್ಯವಿದ್ದು, ಸಮರ್ಪಕವಾಗಿ ಗೊಬ್ಬರ ಪೂರೈಕೆಯಾಗದ ಕಾರಣ ರೈತರು ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ಎದುರಾಗಿದೆ.

ಮಳೆ ಪ್ರಮಾಣ (ಮಿ.ಮೀ.ಗಳಲ್ಲಿ)
ಹಾವೇರಿ 13.2
ರಾಣೇಬೆನ್ನೂರ 4.0
ಬ್ಯಾಡಗಿ 3.2
ಹಿರೇಕೆರೂರ 3.6
ಸವಣೂರ 8.7
ಶಿಗ್ಗಾಂವ 7.4
ಹಾನಗಲ್‌ 12

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ