ಆ್ಯಪ್ನಗರ

ಸ್ವಚ್ಛ ಪರಿಸರಕ್ಕೆ ಕೊಡುಗೆ ನೀಡಿ

ಹಿರೇಕೆರೂರು: ಸ್ವಚ್ಛ ಪರಿಸರಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಂಡು ಗಿಡ, ಮರಗಳನ್ನು ನೆಟ್ಟು ಸ್ವಚ್ಛ ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂದು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಜೆ.ಪಿ ಫೌಂಡೇಶನ್‌ ಅಧ್ಯಕ್ಷ , ಕೆಸಿಸಿ ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಹೇಳಿದರು.

Vijaya Karnataka 15 Jul 2019, 5:00 am
ಹಿರೇಕೆರೂರು: ಸ್ವಚ್ಛ ಪರಿಸರಕ್ಕಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ಅವಲೋಕನ ಮಾಡಿಕೊಂಡು ಗಿಡ, ಮರಗಳನ್ನು ನೆಟ್ಟು ಸ್ವಚ್ಛ ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂದು ಅರ್ಥಮಾಡಿಕೊಳ್ಳಲು ಸಾಧ್ಯ ಎಂದು ಜೆ.ಪಿ ಫೌಂಡೇಶನ್‌ ಅಧ್ಯಕ್ಷ , ಕೆಸಿಸಿ ಬ್ಯಾಂಕ್‌ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಹೇಳಿದರು.
Vijaya Karnataka Web HVR-14HKR 5


ಅವರು ಪಟ್ಟಣ ಪಂಚಾಯತ್‌ ವ್ಯಾಪ್ತಿಯ ಬಸವೇಶ್ವರ ನಗರದಲ್ಲಿ ಜೆ.ಪಿ ಫೌಂಡೇಶನ್‌ ಆಶ್ರಯದಲ್ಲಿ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಟ್ಟು ಚಾಲನೆ ನೀಡಿ ಮಾತನಾಡಿ, ಎಲ್ಲರಲ್ಲೂ ದೀರ್ಘಕಾಲ ಬಾಳುವ ಆಸೆ ಆಕಾಂಕ್ಷೆಗಳು ಇರುತ್ತವೆ. ಆದರೆ ಮಾನವನಿಂದಲೆ ಪರಿಸರದ ಮೇಲೆ ಆದ ವ್ಯತಿರಿಕ್ತ ಪರಿಣಾಮದಿಂದ ಇಂದಿನ ದಿನಗಳಲ್ಲಿ ಮನುಷ್ಯನ ಆಯಸ್ಸು ಕ್ಷಿಣಿಸುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.

ಮನುಷ್ಯನ ಆಯುಷ್ಯಕ್ಕೆ ಬೆಲೆ ಬರಬೇಕಾದರೆ ಪ್ರತಿಯೊಬ್ಬರಿಗೂ ಸ್ವಚ್ಛ ಪರಿಸರ ಹಾಗೂ ಸಸಿನೆಟ್ಟು ಗಿಡ, ಮರಗಳನ್ನಾಗಿ ಬೆಳೆಸುವ ಅರಿವು ಮೂಡಬೇಕು ಎಂದು ಹೇಳಿದರು.

ಸಾಧನೆಯ ದಾರಿಯಲ್ಲಿ ಮನುಷ್ಯನಿಗೆ ಅಸಾಧ್ಯವಾದ ಕಾರ್ಯಗಳು ಯಾವುದು ಇಲ್ಲ. ಆದರೆ ಮಾನವನ ಮನಸ್ಸು ಬುದ್ಧಿಯಲ್ಲಿ ಪರಿಸರದ ಸದ್ವಿಚಾರಗಳು ಬಂದಾಗ ಮಾತ್ರ ಸುಲಭವಾಗಿ ಸ್ವಚ್ಛ ಪರಿಸರದ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ ಎಂದು ಹೇಳಿದರು.

ಸಮಾಜದಲ್ಲಿ ಬದುಕುವ ಪ್ರತಿಯೊಬ್ಬರು ಒಂದೊಂದು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಸಮತೋಲನ ಪರಿಸರ ಕಾಪಾಡೋಣ. ನಮ್ಮ ಜೆ.ಪಿ.ಫೌಂಡೇಶನ ಆಶ್ರಯದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪ್ರಸಕ್ತ ವರ್ಷ 10ಸಾವಿರ ಸಸಿಗಳನ್ನು ನೆಟ್ಟು ಬೆಳೆಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪ.ಪಂ.ಸದಸ್ಯರಾದ ವಿಜಯಶ್ರೀ ವಿಜಯಪ್ಪ ಬಂಗೇರ, ಕುಸುಮಾ ಬಣಕಾರ, ಬಸವೇಶ್ವರ ನಗರ ಅಭಿವೃದ್ದಿ ಸಮಿತಿ ಅಧ್ಯಕ್ಷ ಎಂ.ಬಿ.ಸಾವಜ್ಜಿಯವರ, ಜೆ.ಪಿ ಫೌಂಡೇಶನ್‌ ಕಾರ್ಯದರ್ಶಿ ಮಿಥುನ ಚಿಂದಿ, ಜಿ.ವಿ.ಅಂಗಡಿ, ಚಂದ್ರಪ್ಪ ಮಾಗನೂರು, ಬಿ.ಎಸ್‌.ಅಂತರವಳ್ಳಿ, ಬೀಮಪ್ಪ ಬತ್ತಿಕೊಪ್ಪ, ಎನ್‌.ಶಿವಾನಂದ, ನೀಲಮ್ಮ ಹೊಸಮನಿ, ಫೈರೋಜ್‌ ಬೇವಿನಹಳ್ಳಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ