ಆ್ಯಪ್ನಗರ

ಮಾಸೂರಿಗೆ ಬಂದ ಕೊರೊನಾ

ರಟ್ಟೀಹಳ್ಳಿ: ತಾಲೂಕಿನ ಮಾಸೂರು ಗ್ರಾಮದಲ್ಲಿಭಾನುವಾರ ವೈದ್ಯರು ಸೇರಿದಂತೆ ಐವರಿಗೆ ಕೊರೊನಾ ದೃಢವಾಗಿದೆ. ವೈರಸ್‌ ಹಿನ್ನೆಲೆಯಲ್ಲಿತಾಲೂಕಿನಲ್ಲಿಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು. ಇತ್ತೀಚೆಗೆ ಶಿಕಾರಿಪುರ ತಾಲೂಕಿನ ವೃದ್ಧೆಯೊಬ್ಬರು ತಾಲೂಕಿಗೆ ಬಂದು ವಾಪಸಾಗಿದ್ದರು. ನಂತರ ಅನಾರೋಗ್ಯದಿಂದ ನಿಧನರಾದ

Vijaya Karnataka 29 Jun 2020, 5:00 am
ರಟ್ಟೀಹಳ್ಳಿ: ತಾಲೂಕಿನ ಮಾಸೂರು ಗ್ರಾಮದಲ್ಲಿಭಾನುವಾರ ವೈದ್ಯರು ಸೇರಿದಂತೆ ಐವರಿಗೆ ಕೊರೊನಾ ದೃಢವಾಗಿದೆ. ವೈರಸ್‌ ಹಿನ್ನೆಲೆಯಲ್ಲಿತಾಲೂಕಿನಲ್ಲಿಸಾಕಷ್ಟು ಮುಂಜಾಗ್ರತೆ ವಹಿಸಲಾಗಿತ್ತು. ಇತ್ತೀಚೆಗೆ ಶಿಕಾರಿಪುರ ತಾಲೂಕಿನ ವೃದ್ಧೆಯೊಬ್ಬರು ತಾಲೂಕಿಗೆ ಬಂದು ವಾಪಸಾಗಿದ್ದರು. ನಂತರ ಅನಾರೋಗ್ಯದಿಂದ ನಿಧನರಾದ ವೃದ್ಧೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ದೃಢಪಟ್ಟಿತ್ತು. ವಿಷಯ ತಿಳಿದ ತಕ್ಷಣ ರಟ್ಟೀಹಳ್ಳಿ ತಹಸೀಲ್ದಾರ್‌, ವೃದ್ಧೆಯೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ರಾಮತೀರ್ಥ ಗ್ರಾಮದ 25 ಜನ ಮತ್ತು ಮಾಸೂರಿನ 6 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ ಕಳಿಸಿಕೊಟ್ಟಿದ್ದರು. ಬಳಿಕ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ವೈದ್ಯರು ಸೇರಿದಂತೆ 5 ಜನರಿಗೆ ಕೊರೊನಾ ಇರುವುದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿವೈದ್ಯರು ವಾಸವಾಗಿದ್ದ ಸರ್ವಜ್ಞ ನಗರವನ್ನು ಸೀಲ್‌ಡೌನ್‌ ಮಾಡಲಾಗಿದೆ.
Vijaya Karnataka Web corona to masuri
ಮಾಸೂರಿಗೆ ಬಂದ ಕೊರೊನಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ