ಆ್ಯಪ್ನಗರ

ಕೋವಿಡ್‌ ಟೆಸ್ಟ್‌ ಲ್ಯಾಬ್‌ ಶೀಘ್ರ

ಹಾವೇರಿ : ವæೖರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್‌) ಸ್ಥಾಪನೆ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರ ಜಿಲ್ಲಾಆಸ್ಪತ್ರೆಯಲ್ಲಿಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.

Vijaya Karnataka 13 Jun 2020, 5:00 am
ಹಾವೇರಿ : ವæೖರಾಣು ಸಂಶೋಧನೆ ಮತ್ತು ರೋಗ ನಿರ್ಣಯ ಪ್ರಯೋಗಾಲಯ (ವಿಆರ್‌ಡಿಎಲ್‌) ಸ್ಥಾಪನೆ ಕಾರ್ಯ ಅಂತಿಮ ಹಂತದಲ್ಲಿದ್ದು, ಶೀಘ್ರ ಜಿಲ್ಲಾಆಸ್ಪತ್ರೆಯಲ್ಲಿಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದರು.
Vijaya Karnataka Web covid test lab quick
ಕೋವಿಡ್‌ ಟೆಸ್ಟ್‌ ಲ್ಯಾಬ್‌ ಶೀಘ್ರ


ಹಾವೇರಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿ, ಜಿಲ್ಲೆಯಲ್ಲಿಸ್ಥಾಪನೆಗೊಳ್ಳುತ್ತಿರುವ ವಿಆರ್‌ಡಿಎಲ್‌ ಪ್ರಯೋಗಾಲಯ ಉಪಯೋಗಿಯಾಗಿದ್ದು, ಕೋವಿಡ್‌ ವೈರಾಣು ಪತ್ತೆ ಪರೀಕ್ಷೆ ಜತೆಗೆ ಇತರ ಕಾಯಿಲೆ ಪತ್ತೆಗೂ ಈ ಪ್ರಯೋಗಾಲಯ ಬಳಕೆ ಮಾಡಬಹುದಾಗಿದೆ ಎಂದು ತಿಳಿಸಿದರು.

ಪ್ರಯೋಗಾಲಯವನ್ನು 1.3 ಕೋಟಿ ರೂ. ವೆಚ್ಚದಲ್ಲಿಸ್ಥಾಪಿಸಲಾಗುತ್ತಿದೆ. ಜಿಲ್ಲಾಆಸ್ಪತ್ರೆಯಲ್ಲಿ25 ಚ.ಮೀ ಜಾಗದಲ್ಲಿಸಿವಿಲ್‌ ಕಾಮಗಾರಿಗಳು ಪೂರ್ಣಗೊಂಡಿವೆ. ಲ್ಯಾಬರೋಟರಿ ಉಪಕರಣಗಳು ಒಂದೆರಡು ದಿನದಲ್ಲಿಜಿಲ್ಲೆಗೆ ಆಗಮಿಸಲಿವೆ. ಉಪಕರಣಗಳ ಜೋಡಣೆ ಕಾರ್ಯ ಕೈಗೊಂಡು ಸಾರ್ವಜನಿಕ ಸೇವೆಗೆ ತೆರವುಗೊಳಿಸಲಾಗುವುದು. ಈಗಾಗಲೇ ಲ್ಯಾಬರೋಟರಿಯಲ್ಲಿಕಾರ್ಯನಿರ್ವಹಿಸಲು ವೈದ್ಯಕೀಯ ಮತ್ತು ಅರೆವೈದ್ಯಕೀಯ ಲ್ಯಾಬ್‌ಟೆಕ್ನಿಯನ್‌ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಜಿಲ್ಲಾಆಸ್ಪತ್ರೆ ಮೈಕ್ರೋಬೈಲಾಜಿಸಿಷ್‌್ಟ ವೈದ್ಯರೊಬ್ಬರನ್ನು ಹಾಗೂ ಎರಡು ಜನ ಲ್ಯಾಬ್‌ ಟೆಕ್ನಿಯನ್‌ಗಳನ್ನು ಬೆಂಗಳೂರಿನ ಕಿದ್ವಾಯ್‌ ಮೆಮೋರಿಯಲ್‌ ಕ್ಯಾನ್ಸರ್‌ ಆಸ್ಪತ್ರೆಗೆ ಕಳುಹಿಸಿ ತರಬೇತಿ ಸಹ ಕೊಡಿಸಲಾಗಿದೆ ಎಂದರು.

ಜುಲೈನಲ್ಲಿಕೋವಿಡ್‌ ಪ್ರಕರಣಗಳು ಹೆಚ್ಚಳವಾಗಲಿವೆ ಎಂಬ ವರದಿ ಹಿನ್ನೆಲೆಯಲ್ಲಿಈಗಾಗಲೇ ಜಿಲ್ಲಾಡಳಿತದಿಂದ ಎಲ್ಲಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನಸಂಖ್ಯೆಗೆ ಅನುಗುಣವಾಗಿ ಜಿಲ್ಲೆಯಲ್ಲಿಅಂದಾಜು 3307 ಜನರಿಗೆ ಸೋಂಕು ಕಾಣಬಹುದು ಎಂದು ಅಂದಾಜಿಸಲಾಗಿದೆ. ಇಷ್ಟು ಸಂಖ್ಯೆಯಲ್ಲಿಸೋಂಕು ಕಾಣಿಸಿದರೂ ಇದನ್ನು ನಿಭಾಯಿಸಲು ಜಿಲ್ಲಾಡಳಿತ ಸಮರ್ಥವಾಗಿದೆ ಎಂದು ತಿಳಿಸಿದರು.

ಈಗಾಗಲೇ 20 ಕೇಂದ್ರಿಕೃತ ಐ.ಸಿಯು ವಾರ್ಡ್‌ಗಳಿವೆ. 14 ವೆಂಟಿಲೇಟರ್‌ ವ್ಯವಸ್ಥೆ ಇದೆ. ಆರು ವೆಂಟಿಲೇಟರ್‌ ಪೂರೈಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೋವಿಡ್‌ ಪ್ರಕರಣದಲ್ಲಿವೆಂಟಿಲೇಟರ್‌ ಬಳಕೆ ಕೊನೆಯ ಹಂತದ್ದಾಗಿದೆ. ಜಿಲ್ಲೆಯಲ್ಲಿಈವರೆಗೆ ವೆಂಟಿಲೇಟರ್‌ ಬಳಸುವ ಪ್ರಕರಣ ಉದ್ಬವಿಸಿಲ್ಲ. 50 ಬೆಡ್‌ ಹಾಸಿಗೆ ವ್ಯವಸ್ಥೆ ಇದೆ. ಹಿರೇಕೆರೂರು, ಸವಣೂರು, ಶಿಗ್ಗಾವಿಗಳಲ್ಲಿ30 ಬೆಡ್‌ ಆಕ್ಸಿಜನ್‌ ವ್ಯವಸ್ಥೆ ಇರುವ ವಾರ್ಡ್‌ಗಳು ಸಿದ್ಧವಾಗಿವೆ. ಜಿಲ್ಲೆಯಲ್ಲಿಒಟ್ಟಾರೆ 150 ಹಾಸಿಗೆ ಉತ್ತಮ ಸೌಲಭ್ಯವಿದೆ. 250 ರಿಂದ 500 ಕೇಸ್‌ಗಳು ಬಂದರೂ ಚಿಕಿತ್ಸೆ ನೀಡುವ ಸೌಲಭ್ಯವಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ