ಆ್ಯಪ್ನಗರ

ಬೆಳೆ ವಿಮೆ ಬಿಡುಗಡೆ: ರೈತ ಸಂಘ ವಿಜಯೋತ್ಸವ

ಹಾನಗಲ್ಲ : ತಾಲೂಕಿನ ರೈತರಿಗೆ ಬರಬೇಕಿದ್ದ 3 ವರ್ಷದ ಹಿಂದಿನ ಬೆಳೆವಿಮೆ ಬಾಕಿ ಹಣ ಬಿಡುಗಡೆಗೊಂಡಿದೆ ಎಂದು ರೈತ ಸಂಘದವರು ಶುಕ್ರವಾರ ಇಲ್ಲಿನ ಗಾಂಧಿವೃತ್ತದಲ್ಲಿ ಸಂಭ್ರಮಿಸಿದರು.

Vijaya Karnataka 27 Apr 2019, 5:00 am
ಹಾನಗಲ್ಲ : ತಾಲೂಕಿನ ರೈತರಿಗೆ ಬರಬೇಕಿದ್ದ 3 ವರ್ಷದ ಹಿಂದಿನ ಬೆಳೆವಿಮೆ ಬಾಕಿ ಹಣ ಬಿಡುಗಡೆಗೊಂಡಿದೆ ಎಂದು ರೈತ ಸಂಘದವರು ಶುಕ್ರವಾರ ಇಲ್ಲಿನ ಗಾಂಧಿವೃತ್ತದಲ್ಲಿ ಸಂಭ್ರಮಿಸಿದರು.
Vijaya Karnataka Web HVR-26HGL2
ಹಾನಗಲ್ಲನ ಗಾಂಧಿವೃತ್ತದಲ್ಲಿ ಶುಕ್ರವಾರ ರೈತ ಸಂಘಟನೆಯಿಂದ ಬೆಳೆವಿಮೆ ಪರಿಹಾರ ಬಿಡುಗಡೆಯ ಸಂಭ್ರಮ ಆಚರಿಸಲಾಯಿತು.


2016-17 ನೇ ಸಾಲಿನಲ್ಲಿ ಬೆಳೆವಿಮೆ ಕಂತು ಕಟ್ಟುವ ಅವದಿಯಲ್ಲಿ ಆಗಿದ್ದ ತಂತ್ರಾಂಶದ ಸಮಸ್ಯೆಯಿಂದ ಬಿಡುಗಡೆ ಆಗದೇ ಬಾಕಿ ಉಳಿದಿದ್ದ 13 ಕೋಟಿ ಬೆಳೆವಿಮೆ ಪರಿಹಾರ ಮೊತ್ತವು ಸಂಬಂಧಿಸಿದ ರೈತರಿಗೆ ಜಮೆಗೊಳ್ಳುವ ಬಗ್ಗೆ ಸರಕಾರದ ಆದೇಶ ಬಂದಿದೆ. ರೈತ ಸಂಘದ ನಿರಂತರ ಹೋರಾಟ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ರೈತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ರೈತಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಈ ವೇಳೆ ಮಾತನಾಡಿ, ಜನಪ್ರತಿನಿಧಿಗಳು ರೈತರ ನೆರವಿಗೆ ಬಾರದಿದ್ದರೂ, ರೈತ ಸಂಘ ಹೋರಾಟದಿಂದಲೇ ಬೆಳೆ ವಿಮೆ ಪಡೆದು ರೈತರಿಗೆ ನ್ಯಾಯ ಒದಗಿಸಿಕೊಟ್ಟ ಸಮಾಧಾನವಿದೆ ಎಂದರು.

ಬೆಳೆವಿಮೆ ವಿಷಯದಲ್ಲಿ ಜನಪ್ರತಿಧಿಗಳು ಸಕಾಲಿಕವಾಗಿ ರೈತರ ಸಹಾಯಕ್ಕೆ ಬರದಿದ್ದರೆ ಅಧಿಕಾರಿಗಳ ಆಟದಿಂದಾಗಿ ರೈತ ಹಲವು ನಷ್ಟ ಅನುಭವಿಸುವಂತಾಗುತ್ತದೆ. 2016-17 ರ ಬೆಳೆವಿಮೆ ಬಾಕಿ 13 ಕೋಟಿ ರೂ ಬಾಕಿಗಾಗಿ ನಾವು ನಡೆಸಿದ ಹೋರಾಟಕ್ಕೆ ಜನಪ್ರತಿನಿಧಿಗಳು ಸ್ಪಂದಿಸಿದ್ದರೆ, ಇದಕ್ಕೂ ಮುನ್ನವೇ ಪರಿಹಾರ ಹಣ ಪಡೆಯಬಹುದಾಗಿತ್ತು. ಆದರೆ ಹಾಗಾಗದೇ ರೈತ ಸಂಘದ ಹೋರಾಟವೇ ಅನಿವಾರ್ಯವಾಯಿತು. ನಮಗೆ ಜಯ ಲಭಿಸಿದೆ ಎಂಬ ಸಮಾಧಾನವಿದ್ದರೂ, ನ್ಯಾಯಯುತವಾಗಿ ಪಡೆಯುವುದಕ್ಕೆ ಹೋರಾಟವೇ ಬೇಕಾಗುತ್ತದೆ ಎಂಬ ವಿಷಾದವಿದೆ ಎಂದರು.

ಬ್ಯಾಡಗಿ ತಾಲೂಕು ಅಧ್ಯಕ್ಷ ರುದ್ರಗೌಡ ಕಾಡನಗೌಡ್ರ, ತಾಲೂಕು ಪದಾಧಿಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ರಾಜು ದಾನಪ್ಪನವರ, ಸೋಮಣ್ಣ ಜಡೆಗೊಂಡರ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಘವೇಂದ್ರ ಹುನುಗುಂದ, ಮೋದಿನಸಾಬ ನಾಗರವಳ್ಳಿ, ರಾಮನಗೌಡ ಪಾಟೀಲ, ಕರಸಬಪ್ಪ ಮಾಕೊಪ್ಪ, ಚನ್ನಪ್ಪ ಪಾವಲಿ, ಶ್ರೀಕಾಂತ ದುಂಡಣ್ಣನನವರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ