ಆ್ಯಪ್ನಗರ

ಬೆಳೆ ವಿಮೆ ಯೋಜನೆ ಸದ್ಬಳಕೆಗೆ ಕರೆ

ಹಿರೇಕೆರೂರು: ಮುಂಗಾರು-ಹಿಂಗಾರು ಹವಾಮಾನ ಆಧಾರಿತ 2020-21 ನೇ ಸಾಲಿನ ಮೆಣಸಿನಕಾಯಿ, ಅಡಕೆ, ಶುಂಠಿ ಹಾಗೂ ಮಾವು ಬೆಳೆ ವಿಮಾ ಯೋಜನೆಗೆ ವಿಮೆ ನೋಂದಾಯಿಸಲು ಜೂ.30 ಕೊನೆಯ ದಿನವಾಗಿದ್ದು, ರೈತರು ಬೆಳೆ ವಿಮೆ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ರೈತರಿಗೆ ಕರೆ ನೀಡಿದರು.

Vijaya Karnataka 29 Jun 2020, 5:00 am
ಹಿರೇಕೆರೂರು: ಮುಂಗಾರು-ಹಿಂಗಾರು ಹವಾಮಾನ ಆಧಾರಿತ 2020-21 ನೇ ಸಾಲಿನ ಮೆಣಸಿನಕಾಯಿ, ಅಡಕೆ, ಶುಂಠಿ ಹಾಗೂ ಮಾವು ಬೆಳೆ ವಿಮಾ ಯೋಜನೆಗೆ ವಿಮೆ ನೋಂದಾಯಿಸಲು ಜೂ.30 ಕೊನೆಯ ದಿನವಾಗಿದ್ದು, ರೈತರು ಬೆಳೆ ವಿಮೆ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ ರೈತರಿಗೆ ಕರೆ ನೀಡಿದರು.
Vijaya Karnataka Web crop insurance scheme calling well being
ಬೆಳೆ ವಿಮೆ ಯೋಜನೆ ಸದ್ಬಳಕೆಗೆ ಕರೆ


ಅವರು ಭಾನುವಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿ, ಹಿರೇಕೆರೂರು, ರಟ್ಟೀಹಳ್ಳಿ, ಬ್ಯಾಡಗಿ, ಹಾವೇರಿ, ಹಾನಗಲ್ಲ, ರಾಣೇಬೆನ್ನೂರು, ಶಿಗ್ಗಾಂವ ಹಾಗೂ ಸವಣೂರು ತಾಲೂಕಿನ ರೈತರನ್ನು 2020-21ನೇ ಸಾಲಿನ ಮುಂಗಾರು-ಹಿಂಗಾರು ಹಂಗಾಮಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಮುಂಗಾರು ಹಂಗಾಮಿನ ಮೆಣಸಿನಕಾಯಿ ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ 71 ಸಾವಿರ ರೂ. ಸಾಮಾನ್ಯ ವಿಮಾ ಕಂತು 3550 ರೂ. ಅಡಕೆ ಬೆಳೆ ಪ್ರತಿ ಹೆಕ್ಟೇರಿಗೆ 1,28,000 ರೂ, ಸಾಮಾನ್ಯ ವಿಮಾ ಕಂತು 6400 ರೂ. ಶುಂಠಿ ಬೆಳೆ ಪ್ರತಿ ಹೆಕ್ಟೇರಿಗೆ 1,30,000 ರೂ, ಸಾಮಾನ್ಯ ವಿಮಾ ಕಂತು 6500 ರೂ. ಇದ್ದು ವಿಮೆ ನೋಂದಾಯಿಸಲು ಜೂ.30 ಕೊನೆಯ ದಿನವಾಗಿದೆ. ಹಿಂಗಾರು ಹಂಗಾಮಿನ ಮಾವು ಬೆಳೆಗೆ ವಿಮಾ ಮೊತ್ತ ಪ್ರತಿ ಹೆಕ್ಟೇರಿಗೆ 80,000 ರೂ, ಸಾಮಾನ್ಯ ವಿಮಾ ಕಂತು 4,000 ರೂ. ಇದ್ದು, ವಿಮೆ ನೋಂದಾಯಿಸಲು 15-11-2020 ಕೊನೆಯ ದಿನವಾಗಿದೆ. ಆದ್ದರಿಂದ ರೈತರು ಸಮಯಕ್ಕೆ ಸರಿಯಾಗಿ ವಿಮೆ ನೋಂದಾಯಿಸಿ ಯೋಜನೆ ಸದ್ಬಳಕೆ ಮಾಡಿಕೊಳ್ಳುವಂತೆ ರೈತರಿಗೆ ಮನವಿ ಮಾಡಿದರು.

ಈ ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ತಮ್ಮ ಬೆಳೆ ವಿಮೆ ಪಾವತಿಸಲು ಪಹಣಿ ಪತ್ರಿಕೆ, ಬ್ಯಾಂಕ್‌ ಖಾತೆ ಪುಸ್ತಕ, ಕಂದಾಯ ರಶೀದಿ, ಆಧಾರ್‌ ಕಾರ್ಡ್‌ ಝೆರಾಕ್ಸ ಪ್ರತಿಗಳೊಂದಿಗೆ ರಾಷ್ಟ್ರೀಕೃತ ಬ್ಯಾಂಕ್‌ ಶಾಖೆಗಳನ್ನು ಹಾಗೂ ಸಹಕಾರಿ ಸಂಘಗಳನ್ನು ಸಂಪರ್ಕಿಸುವಂತೆ ರೈತರಿಗೆ ಸೂಚನೆ ನೀಡಿದರು. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆ ಸಂಪರ್ಕಿಸಿ ವಿಮಾ ಯೋಜನೆಗೆ ಬೇಕಾದ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ರೈತರಿಗೆ ಸಲಹೆ ಮಾಡಿದರು.

ಈ ಸಂದರ್ಭದಲ್ಲಿರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ,ತಾಲೂಕಾ ಕೃಷಿಕ ಸಮಾಜದ ಅಧ್ಯಕ್ಷ ಜಿ.ಶಿವನಗೌಡ,ದೊಡ್ಡಗೌಡ ಪಾಟೀಲ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ