ಆ್ಯಪ್ನಗರ

ತಂದೆ-ತಾಯಿ ಕನಸು ನನಸಾಗಿಸಿ

ರಟ್ಟೀಹಳ್ಳಿ : ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡಬಾರದು. ಕಳೆದುಹೋದ ಸಮಯ ಮತ್ತೆ ಬರುವುದಿಲ್ಲ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು. ಉತ್ತಮ ಶಿಕ್ಷ ಣದಿಂದ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ಅಣಜಿ-ನಾಗವಂದ ಮಾರುತಿ ಕಾಲೇಜ್‌ ಪ್ರಾಚಾರ್ಯ ರಹಮತ್‌ಉಲ್ಲಾ ಖಾನ್‌ ಹೇಳಿದರು.

Vijaya Karnataka 24 Feb 2019, 5:00 am
ರಟ್ಟೀಹಳ್ಳಿ : ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡಬಾರದು. ಕಳೆದುಹೋದ ಸಮಯ ಮತ್ತೆ ಬರುವುದಿಲ್ಲ. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು. ಉತ್ತಮ ಶಿಕ್ಷ ಣದಿಂದ ಒಳ್ಳೆಯ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ ಎಂದು ಅಣಜಿ-ನಾಗವಂದ ಮಾರುತಿ ಕಾಲೇಜ್‌ ಪ್ರಾಚಾರ್ಯ ರಹಮತ್‌ಉಲ್ಲಾ ಖಾನ್‌ ಹೇಳಿದರು.
Vijaya Karnataka Web dads mother dreams come true
ತಂದೆ-ತಾಯಿ ಕನಸು ನನಸಾಗಿಸಿ


ಅವರು ರಟ್ಟೀಹಳ್ಳಿ ತಾಲೂಕಿನ ಅಣಜಿ ಗ್ರಾಮದ ಶ್ರೀ ಮಾರುತಿ ಪದವಿ ಪೂರ್ವ ಕಾಲೇಜ್‌ ವಿದ್ಯಾರ್ಥಿಗಳ ಬೀಳ್ಕೋಡುಗೆ ಸಮಾರಂಭದಲ್ಲಿ ಮಾತನಾಡಿದರು.

ಪರೀಕ್ಷೆ ಹತ್ತಿರ ಬರುತ್ತಿವೆ. ವಿದ್ಯಾರ್ಥಿಗಳು ಮೊಬೈಲ್‌, ಟಿವಿ ನೋಡುವುದನ್ನು ಬಿಟ್ಟು ಅಭ್ಯಾಸಕ್ಕೆ ಸಂಬಂಧಪಟ್ಟ ವಿಷಯಗಳನ್ನು ಓದಿದರೆ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದರು.

ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾದರೆ ಛಲಬೇಕು. ತಂದೆ, ತಾಯಿಗಳು ಮಕ್ಕಳ ಬಗ್ಗೆ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಕಷ್ಟಪಟ್ಟು ದುಡಿದು ನಿಮಗೆ ಶಿಕ್ಷ ಣ ನೀಡುತ್ತಿದ್ದಾರೆ. ಅವರ ಕನಸನ್ನು ನನಸು ಮಾಡುವುದರ ಜತೆಗೆ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿಯೇ ಇದೆ ಎಂದು ಹೇಳಿದರು. ಪ್ರಾಸ್ತಾವಿಕ ರಾಘವೇಂದ್ರ ನಾಯಕ ಮಾತನಾಡಿದರು.

ಎಂ.ಬಿ.ಪಾಟೀಲ ಅಧ್ಯಕ್ಷ ತೆ ವಹಿಸಿದ್ದರು. ಬಿ.ಬಿ.ಹಿತ್ತಾಳೆ, ಮಂಜಪ್ಪ ರಟ್ಟೀಹಳ್ಳಿ, ಬಿ.ಎಸ್‌.ಗೌಡರ, ಕಾಲೇಜ್‌ ಉಪನ್ಯಾಸಕರು, ಸಂಸ್ಥೆಯ ಸದಸ್ಯರು, ಪ್ರೌಢ ಶಾಲೆ ಶಿಕ್ಷ ಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಅಕ್ಷ ತಾ ಬಳ್ಳಾರಿ ಸ್ವಾಗತಿಸಿದರು. ಉಪನ್ಯಾಸಕ ರವಿಕುಮಾರ ಹೆಚ್‌.ಇ. ನಿರೂಪಿಸಿದರು. ಅನುಷಾ ಬಣಕಾರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ