ಅಕ್ಕಿಆಲೂರು: ಕೆರೆ ಸಂಜೀವಿನಿ ಯೋಜನೆಯಡಿ ಹಿರೂರು ಗ್ರಾಮದ ದೊಡ್ಡ ಕೆರೆಯ ಹೂಳೆತ್ತಿ ಅಭಿವೃದ್ಧಿ ಪಡಿಸಲಾಗುವುದು ಎಂದು ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ್ ಹೇಳಿದರು.
ಹಿರೂರು ಗ್ರಾಮದಲ್ಲಿ ಅಲ್ಪಸಂಖ್ಯಾತರ ನಿಗಮದಿಂದ 10 ಲಕ್ಷ ರೂ. ವೆಚ್ಚದಲ್ಲಿ ಉರ್ದು ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ ಮತ್ತು ಜಿಪಂ ಸದಸ್ಯರ ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ನಾಲ್ಕು ವರ್ಷಗಳ ಅವಧಿಯಲ್ಲಿ ಹಾನಗಲ್ಲ ತಾಲೂಕಿನಲ್ಲಿ ಹಲವು ನೀರಾವರಿ ಯೋಜನೆಗಳು ಅನುಷ್ಠಾನಗೊಂಡಿವೆ. ಏತ ನೀರಾವರಿ ಯೋಜನೆ, ಬ್ಯಾರೇಜ್ಗಳ ನಿರ್ಮಾಣದ ಮೂಲಕ ಕೃಷಿ ಭೂಮಿಗೆ ನೀರುಣಿಸಲಾಗುತ್ತಿದೆ. ಹಾನಗಲ್ಲ ತಾಲೂಕಿನಲ್ಲಿ ಹರಿದಿರುವ ವರದಾ ಮತ್ತು ಧರ್ಮಾ ನದಿಗಳ ನೀರು ಸದ್ಭಳಕೆ ಮಾಡಿಕೊಳ್ಳಲಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಸಾಧಿಕ ಶೇಷಗಿರಿ ಅಧ್ಯಕ್ಷ ತೆ ವಹಿಸಿದ್ದರು. ಎಪಿಎಂಸಿ ನಿರ್ದೇಶಕ ಪರಸಪ್ಪ ಮಡಿವಾಳರ, ತಾಪಂ ಕೆಡಿಪಿ ಸದಸ್ಯ ವೀರೇಶ ಬೈಲವಾಳ, ಪ್ರಮುಖರಾದ ಮಿಯ್ಯಾಜಾನ ಶೇಷಗಿರಿ, ನೂರಅಹ್ಮದ ಅಕ್ಕಿ, ಮಕ್ಬೂಲ್ಅಹ್ಮದ ಖಾಜಿ, ಮಹ್ಮದ್ಗೌಸ್ ಭಂಡಾರಿ, ಪರಸಪ್ಪ ಬಾರ್ಕಿ, ನಿರ್ಮಿತಿ ಕೇಂದ್ರದ ಅಭಿಯಂತರ ಜಯಪ್ರಕಾಶ, ಪಿಡಿಒ ಎಫ್.ವಿ.ಸಾತೇನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.