ಆ್ಯಪ್ನಗರ

ಅಪಾಯಕಾರಿ ರಾಷ್ಟ್ರೀಯ ಹೆದ್ದಾರಿ, ಯಾರಿಗಿದೆ ವರಿ ?

ಹಿರೇಕೆರೂರು :ರಟ್ಟೀಹಳ್ಳಿ ಹಾಗೂ ಹಿರೇಮೊರಬ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ತೀವ್ರ ಇಳಿಜಾರಾಗಿದ್ದು, ಅಪಘಾತ ವಲಯವಾಗಿ ಪರಿಣಮಿಸಿದೆ. ಚಿಕ್ಕದಾದ ಹಳ್ಳಕ್ಕೆ ಕಟ್ಟಿದ ಸೇತುವೆ ಹಾಗೂ ಅದರ ಮೇಲಿನ ರಾಷ್ಟ್ರೀಯ ಹೆದ್ದಾರಿಯನ್ನು ಎತ್ತರ ಮಟ್ಟದಲ್ಲಿ ನಿರ್ಮಿಸುವಂತೆ ಈ ಭಾಗದ ಪ್ರಯಾಣಿಕರು ಒತ್ತಾಯಿಸಿದ್ದಾರೆ.

Vijaya Karnataka 16 Jun 2018, 5:00 am
ಹಿರೇಕೆರೂರು :ರಟ್ಟೀಹಳ್ಳಿ ಹಾಗೂ ಹಿರೇಮೊರಬ ಮಧ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ ತೀವ್ರ ಇಳಿಜಾರಾಗಿದ್ದು, ಅಪಘಾತ ವಲಯವಾಗಿ ಪರಿಣಮಿಸಿದೆ. ಚಿಕ್ಕದಾದ ಹಳ್ಳಕ್ಕೆ ಕಟ್ಟಿದ ಸೇತುವೆ ಹಾಗೂ ಅದರ ಮೇಲಿನ ರಾಷ್ಟ್ರೀಯ ಹೆದ್ದಾರಿಯನ್ನು ಎತ್ತರ ಮಟ್ಟದಲ್ಲಿ ನಿರ್ಮಿಸುವಂತೆ ಈ ಭಾಗದ ಪ್ರಯಾಣಿಕರು ಒತ್ತಾಯಿಸಿದ್ದಾರೆ.
Vijaya Karnataka Web dangerous national highway who is the person
ಅಪಾಯಕಾರಿ ರಾಷ್ಟ್ರೀಯ ಹೆದ್ದಾರಿ, ಯಾರಿಗಿದೆ ವರಿ ?


766ಸಿ. ಸಂಖ್ಯೆಯ ರಾಣೇಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ ಇದಾಗಿದೆ. ಈ ಹೆದ್ದಾರಿ ರಾಣೇಬೆನ್ನೂರು-ರಟ್ಟೀಹಳ್ಳಿ, ಹಿರೇಮೊರಬ, ಮಾಸೂರು, ಕೋಡಮಗ್ಗಿ ಗ್ರಾಮಗಳ ಮಾರ್ಗವಾಗಿ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಿಂದ ಬೈಂದೂರು ಸಂಪರ್ಕಿಸುವ 203 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ.

ಈ ಹಿಂದೆ ರಾಜ್ಯ ಹೆದ್ದಾರಿ ಇದ್ದ ಸಂದರ್ಭದಲ್ಲಿ ಈ ರಸ್ತೆಯನ್ನು ದ್ವಿಪಥವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಹಳ್ಳಕ್ಕೆ ಕಟ್ಟಿದ್ದ ಸೇತುವೆಯನ್ನು ಎತ್ತರ ಮಟ್ಟದಲ್ಲಿ ನಿರ್ಮಿಸಿ ರಸ್ತೆ ನಿರ್ಮಿಸುವ ಬದಲು ತೀವ್ರ ಇಳಿಜಾರು ಇರುವ ರಸ್ತೆಯನ್ನು ಯಥಾಸ್ಥಿತಿಯಲ್ಲಿ ಅಭಿವೃದ್ಧಿ ಪಡಿಸಿದ್ದರಿಂದ ಇದೀಗ ಈ ಪ್ರದೇಶ ಅಪಘಾತ ವಲಯವಾಗಿ ಏರ್ಪಟ್ಟಿದೆ. ಈಗಾಗಲೆ ಈ ಭಾಗದಲ್ಲಿ ಹಲವಾರು ವಾಹನಗಳು ಅಪಘಾತಕ್ಕೀಡಾಗಿ ಪ್ರಯಾಣಿಕರ ಸಾವು, ನೋವು ಸಂಭವಿಸಿದೆ.

2016ರಲ್ಲಿ ಮೇಲ್ದರ್ಜೆಗೆ

ಈ ರಾಜ್ಯ ಹೆದ್ದಾರಿ 2016ರಲ್ಲಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿತು. ರಾಣೇಬೆನ್ನೂರು, ಬೈಂದೂರು-766.ಸಿ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಗೊಂಡಿದೆ. 203 ಕಿ.ಮೀ. ಉದ್ದದ ರಸ್ತೆ ಇದಾಗಿದೆ. ರಟ್ಟೀಹಳ್ಳಿ ತಾಲೂಕಿನಲ್ಲಿ 21ಕಿ.ಮೀ. ಉದ್ದದ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಒಳಪಟ್ಟಿದೆ.

ಅಪಾಯಕಾರಿ

ಹಿರೇಮೊರಬ ಗ್ರಾಮದ ಬಳಿ ತೀವ್ರ ಇಳಿಜಾರು ಸ್ಥಿತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಯಾಣಿಕ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಹಾಗೂ ತೊಂದರೆ ಉಂಟಾಗುತ್ತಿದೆ. ಸುಮಾರು 35-40 ಮೀ. ಆಳದಷ್ಟು ಇಳಿಜಾರು ರಸ್ತೆ ಇದಾಗಿದೆ. ಇಂತಹ ಕೆಳಹಂತದ ಸೇತುವೆ ಹಾಗೂ ತೀವ್ರ ಇಳಿಜಾರು ರಸ್ತೆಯನ್ನು ಬಳಸಿಕೊಂಡು ಪ್ರಯಾಣಿಕ ವಾಹನಗಳು ಸೇರಿದಂತೆ ವಿವಿಧ ವಾಹನಗಳು ಸಂಚಾರ ಮಾಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಹಳ್ಳದ ಸೇತುವೆ ಮೇಲಿನ ಇಳಿಜಾರು ರಸ್ತೆ ಅಪಾಯ ವಲಯವಾಗಿ ಪರಿಣಮಿಸಿದೆ. ಹಳ್ಳಕ್ಕೆ ಕಟ್ಟಿರುವ ಸೇತುವೆ ಕಿರಿದಾಗಿದೆ, ಶಿಥಿಲಗೊಂಡಿದೆ. ಸುಮಾರು 60-70 ವರ್ಷಗಳ ಹಿಂದೆ ನಿರ್ಮಿಸಿರುವ ಸೇತುವೆಯನ್ನು ಎತ್ತರಿಸಿ ಅದಕ್ಕೆ ಸಮಾನಾಂತರವಾಗಿ ರಸ್ತೆ ನಿರ್ಮಿಸಲು ಸರಕಾರ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ ್ಯ ತೋರಿದ್ದಾರೆ.

ಇಳಿಜಾರು ರಸ್ತೆ ಮುಳುಗಡೆ

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕುಮದ್ವತಿ ನದಿ ಹರಿಯುತ್ತಿದೆ. ಈ ನದಿಗೆ ಪ್ರವಾಹ ಬಂದಾಗ ನದಿ ಹಿನ್ನೀರಿನ ಒತ್ತಡದಿಂದ ಈ ಕೆಳಹಂತದ ಹಳ್ಳದ ಸೇತುವೆ ಸಂಪೂರ್ಣ ಮುಳುಗಡೆಯಾಗುತ್ತದೆ. 30 ವರ್ಷಗಳಲ್ಲಿ ಏಳೆಂಟು ಬಾರಿ ಈ ಸೇತುವೆ ನದಿಗೆ ಪ್ರವಾಹ ಬಂದಾಗ ಮುಳುಗಡೆಯಾದಉದಾಹರಣೆಗಳು ಇವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ