ಹಾವೇರಿ: ವಿದ್ಯಾರ್ಥಿಗಳಲ್ಲಿಸಂವಿಧಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಒಂದು ದಿನದ ಅಭಿಯಾನ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕಾಗಿ ಸಿದ್ಧ ಪಡಿಸಿದ ಕೈಪಿಡಿಯಲ್ಲಿಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿಲ್ಲಎಂಬ ವಿವಾದಾತ್ಮಕ ಹೇಳಿಕೆ ಬಳಸಲಾಗಿದೆ. ಇದು ಕೋಮುವಾದಿಗಳ ಕುತಂತ್ರವಾಗಿದ್ದು, ಈ ಕೊಡಲೇ ಶಿಕ್ಷಣ ಸಚಿವ ಸುರೇಶಕುಮಾರ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜಿಲ್ಲಾಘಟಕದ ವತಿಯಿಂದ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ದೇಶದಲ್ಲಿಡಾ.ಬಿ.ಆರ್.ಅಂಬೇಡ್ಕರ್ ಸೇವೆ ಅಪಾರವಾಗಿದೆ. ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಎಲ್ಲವರ್ಗದ ಜನರ ಹಿತಾಸಕ್ತಿ ಕಾಪಾಡಲು ತಮ್ಮ ಜೀವನ ಪೂರ್ತಿ ಶ್ರಮ ವಹಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅಪಮನ ಮಾಡಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಸಚಿವ ಸುರೇಶಕುಮಾರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ದೇಶದ ಸಂವಿಧಾನಕ್ಕೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿಸಮಿತಿಯ ಮುಖಂಡರಾದ ಮಂಜಪ್ಪ ಮರೋಳ, ನಿಂಗಪ್ಪ ಕಡೂರ, ಗುಡ್ಡಪ್ಪ ಚಿಕ್ಕಪ್ಪನವರ, ಮಾರುತಿ ಬಣಕಾರ, ಪ್ರಕಾಶ ನೀರಲಗಿ, ರಮೇಶ ಆನವಟ್ಟಿ, ಸತೀಶ ಕಾಟೇನಹಳ್ಳಿ, ರಾಜಪ್ಪ ಕಲ್ಲೆದೇವರು, ಮೈಲಾರಪ್ಪ ಹಾಲಗಿ, ಸಂಜೀಯಗಾಂಧಿ, ಎಸ್.ಶ್ರೀನಿವಾಸ್ ಮುಗದೂರ, ಶಂಭು ಕಳಸದ, ಅಜ್ಜಪ್ಪ ಮೈಲಮ್ಮನವರ, ಅಡಿವೆಪ್ಪ ಹರಿಜನ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿಪಾಲ್ಗೊಂಡಿದ್ದರು.
ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ಡಿಎಸ್ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ದೇಶದಲ್ಲಿಡಾ.ಬಿ.ಆರ್.ಅಂಬೇಡ್ಕರ್ ಸೇವೆ ಅಪಾರವಾಗಿದೆ. ಸಂವಿಧಾನ ಶಿಲ್ಪಿಯಾಗಿ ಡಾ.ಬಿ.ಆರ್.ಅಂಬೇಡ್ಕರ್ ದೇಶದ ಎಲ್ಲವರ್ಗದ ಜನರ ಹಿತಾಸಕ್ತಿ ಕಾಪಾಡಲು ತಮ್ಮ ಜೀವನ ಪೂರ್ತಿ ಶ್ರಮ ವಹಿಸಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಅಪಮನ ಮಾಡಿದ್ದು, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು. ಸಚಿವ ಸುರೇಶಕುಮಾರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ದೇಶದ ಸಂವಿಧಾನಕ್ಕೆ ಗೌರವ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿಸಮಿತಿಯ ಮುಖಂಡರಾದ ಮಂಜಪ್ಪ ಮರೋಳ, ನಿಂಗಪ್ಪ ಕಡೂರ, ಗುಡ್ಡಪ್ಪ ಚಿಕ್ಕಪ್ಪನವರ, ಮಾರುತಿ ಬಣಕಾರ, ಪ್ರಕಾಶ ನೀರಲಗಿ, ರಮೇಶ ಆನವಟ್ಟಿ, ಸತೀಶ ಕಾಟೇನಹಳ್ಳಿ, ರಾಜಪ್ಪ ಕಲ್ಲೆದೇವರು, ಮೈಲಾರಪ್ಪ ಹಾಲಗಿ, ಸಂಜೀಯಗಾಂಧಿ, ಎಸ್.ಶ್ರೀನಿವಾಸ್ ಮುಗದೂರ, ಶಂಭು ಕಳಸದ, ಅಜ್ಜಪ್ಪ ಮೈಲಮ್ಮನವರ, ಅಡಿವೆಪ್ಪ ಹರಿಜನ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿಪಾಲ್ಗೊಂಡಿದ್ದರು.