ಕುಮಾರಪಟ್ಟಣ: ಕುಮಾರಪಟ್ಟಣದ ಎಸ್ಬಿಐ ಶಾಖೆಯಲ್ಲಿ ಸಾಲ ಮನ್ನಾ ವಿಷಯಕ್ಕೆ ಸಂಬಂಧಿಸಿದಂತೆ ರೈತರು ಅಗತ್ಯ ದಾಖಲೆಗಳನ್ನು ಬ್ಯಾಂಕಿಗೆ ನೀಡಿಲ್ಲ. ರೈತರ ಗಮನ ಸೆಳೆಯಲು ಹಳ್ಳಿಗಳಲ್ಲಿ ಆಟೊ ಮೈಕ್ ಮೂಲಕ ಪ್ರಚಾರ ಕಾರ್ಯ ಮಾಡಲಾಗಿದ್ದರೂ ಇದುವರೆಗೆ ರೈತರಿಂದ ಪೂರ್ಣ ಅರ್ಜಿಗಳು ಬಂದಿಲ್ಲ.
ಬ್ಯಾಂಕ್ ಸಾಲ ಖಾತೆದಾರರೆ ನೇರವಾಗಿ ಬ್ಯಾಂಕಿಗೆ ಬಂದು ತಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೊತೆಗೆ ಬ್ಯಾಂಕಿನಲ್ಲಿ ದೊರೆಯುವ ಅರ್ಜಿ ನಮೂನೆ ಭರ್ತಿ ಮಾಡಿ ಕೊಟ್ಟರೆ ಆಮೇಲೆ ಈ ಮಾಹಿತಿಯನ್ನು ಸರಕಾರಕ್ಕೆ ಕಳಿಸಬೇಕು. ಮುಂದೆ ಸರಕಾರದ ಆದೇಶ ಬಂದ ಮೇಲೆ ಮುಂದಿನ ದಿನಗಳಲ್ಲಿ ನಿರ್ಣಯ ಹೇಳಬಹುದು ಎಂಬುದು ಸ್ಥಳೀಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜನರಲ್ಲಿ ವೆಬ್ಸೈಟ್ನಲ್ಲಿ ನನ್ನ ಹೆಸರು ಪಟ್ಟಿಯಲ್ಲಿದೆ ಎಂಬುದಾಗಿ ರೈತರು ನಂಬಿದ್ದಾರೆ. ಹೀಗಾಗಿ ರೈತರು ಬ್ಯಾಂಕಿನ ಕಡೆ ಸುಳಿದಾಡುತ್ತಿಲ್ಲ, ಸಾಲಗಾರನ ಹೆಸರು ಮನ್ನಾ ಪಟ್ಟಿಯಲ್ಲಿದ್ದರೂ ಬ್ಯಾಂಕಿನ ಮೂಲಕ ಸಾಲ ಮನ್ನಾ ಪ್ರಮಾಣ ಪತ್ರ ರೈತರ ಕೈಗೆ ದೊರೆಯಬೇಕು.
ಈ ಗುರಿ ತಲುಪಲು ಕುಮಾರಪಟ್ಟಣ ಶಾಖೆಗೆ ಒಳಪಟ್ಟ ಸಾಲಗಾರರು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸಾಲ ಮನ್ನಾ ಯೋಜನೆಗೆ ಸಹಕರಿಸಿ ಎಂಬುದು ಬ್ಯಾಂಕಿನ ಆಶಯವಾಗಿದೆ.
ನಮ್ಮ ಹೆಸರು ನೆಟ್ನಲ್ಲಿ ಬಂದಿದೆ ಎಂದು ತಿಳಿದುಕೊಂಡು ಹಾಗೆ ಕುಳಿತಿದ್ದಾರೆ, ಅರ್ಜಿಗಳನ್ನು ಬ್ಯಾಂಕಿನಿಂದ ಅಪ್ ಲೋಡ್ ಮಾಡಬೇಕು, ಅಂದಿನ ಅರ್ಜಿಗಳನ್ನು ಅಂದೇ ಅಪ್ ಲೋಡ್ ಮಾಡಲಾಗುತ್ತಿದೆ. ನಮ್ಮ ಬ್ಯಾಂಕಿಗೆ 373 ಫಲಾನುಭವಿಗಳ ಪಟ್ಟಿ ಬಂದಿದೆ, ಅದರಲ್ಲಿ 353 ಫಲಾನುಭವಿಗಳು ಬೆಳೆ ಸಾಲ ಪಡೆದವರಿರುತ್ತಾರೆ, ಉಳಿದ 20, ಮಂದಿ ಹಾಲಿನ ಡೈರಿ ತೆರೆಯಲು ಸಾಲ ಪಡೆದಿದ್ದಾರೆ, ಇವರು ಪಟ್ಟಿಯಿಂದ ಹೊರಗುಳಿಯುತ್ತಾರೆ. 353 ರೈತರಲ್ಲಿ ಇದುವರೆಗೂ 283 ರೈತರು ಮಾತ್ರ ಅಗತ್ಯ ದಾಖಲೆ ಮತ್ತು ಅರ್ಜಿಗಳನ್ನು ಸಲ್ಲಿಸಿದ್ದಾರೆ. 70 ರೈತರು ಸೆಲ್ಫ್ ಡಿಕ್ಲರೇಷನ್ ನಮೂನೆಗೆ ಸಹಿ ಹಾಕಿಲ್ಲ ಅಗತ್ಯ ದಾಖಲಾತಿ ಸಲ್ಲಿಸಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಬ್ಯಾಂಕ್ ಸಾಲ ಖಾತೆದಾರರೆ ನೇರವಾಗಿ ಬ್ಯಾಂಕಿಗೆ ಬಂದು ತಮ್ಮ ಆಧಾರ್ ಹಾಗೂ ಪ್ಯಾನ್ ಕಾರ್ಡ್ ಜೊತೆಗೆ ಬ್ಯಾಂಕಿನಲ್ಲಿ ದೊರೆಯುವ ಅರ್ಜಿ ನಮೂನೆ ಭರ್ತಿ ಮಾಡಿ ಕೊಟ್ಟರೆ ಆಮೇಲೆ ಈ ಮಾಹಿತಿಯನ್ನು ಸರಕಾರಕ್ಕೆ ಕಳಿಸಬೇಕು. ಮುಂದೆ ಸರಕಾರದ ಆದೇಶ ಬಂದ ಮೇಲೆ ಮುಂದಿನ ದಿನಗಳಲ್ಲಿ ನಿರ್ಣಯ ಹೇಳಬಹುದು ಎಂಬುದು ಸ್ಥಳೀಯ ಅಧಿಕಾರಿಗಳ ಅಭಿಪ್ರಾಯವಾಗಿದೆ.
ಜನರಲ್ಲಿ ವೆಬ್ಸೈಟ್ನಲ್ಲಿ ನನ್ನ ಹೆಸರು ಪಟ್ಟಿಯಲ್ಲಿದೆ ಎಂಬುದಾಗಿ ರೈತರು ನಂಬಿದ್ದಾರೆ. ಹೀಗಾಗಿ ರೈತರು ಬ್ಯಾಂಕಿನ ಕಡೆ ಸುಳಿದಾಡುತ್ತಿಲ್ಲ, ಸಾಲಗಾರನ ಹೆಸರು ಮನ್ನಾ ಪಟ್ಟಿಯಲ್ಲಿದ್ದರೂ ಬ್ಯಾಂಕಿನ ಮೂಲಕ ಸಾಲ ಮನ್ನಾ ಪ್ರಮಾಣ ಪತ್ರ ರೈತರ ಕೈಗೆ ದೊರೆಯಬೇಕು.
ಈ ಗುರಿ ತಲುಪಲು ಕುಮಾರಪಟ್ಟಣ ಶಾಖೆಗೆ ಒಳಪಟ್ಟ ಸಾಲಗಾರರು ತಮ್ಮ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಸಾಲ ಮನ್ನಾ ಯೋಜನೆಗೆ ಸಹಕರಿಸಿ ಎಂಬುದು ಬ್ಯಾಂಕಿನ ಆಶಯವಾಗಿದೆ.
ನಮ್ಮ ಹೆಸರು ನೆಟ್ನಲ್ಲಿ ಬಂದಿದೆ ಎಂದು ತಿಳಿದುಕೊಂಡು ಹಾಗೆ ಕುಳಿತಿದ್ದಾರೆ, ಅರ್ಜಿಗಳನ್ನು ಬ್ಯಾಂಕಿನಿಂದ ಅಪ್ ಲೋಡ್ ಮಾಡಬೇಕು, ಅಂದಿನ ಅರ್ಜಿಗಳನ್ನು ಅಂದೇ ಅಪ್ ಲೋಡ್ ಮಾಡಲಾಗುತ್ತಿದೆ. ನಮ್ಮ ಬ್ಯಾಂಕಿಗೆ 373 ಫಲಾನುಭವಿಗಳ ಪಟ್ಟಿ ಬಂದಿದೆ, ಅದರಲ್ಲಿ 353 ಫಲಾನುಭವಿಗಳು ಬೆಳೆ ಸಾಲ ಪಡೆದವರಿರುತ್ತಾರೆ, ಉಳಿದ 20, ಮಂದಿ ಹಾಲಿನ ಡೈರಿ ತೆರೆಯಲು ಸಾಲ ಪಡೆದಿದ್ದಾರೆ, ಇವರು ಪಟ್ಟಿಯಿಂದ ಹೊರಗುಳಿಯುತ್ತಾರೆ. 353 ರೈತರಲ್ಲಿ ಇದುವರೆಗೂ 283 ರೈತರು ಮಾತ್ರ ಅಗತ್ಯ ದಾಖಲೆ ಮತ್ತು ಅರ್ಜಿಗಳನ್ನು ಸಲ್ಲಿಸಿದ್ದಾರೆ. 70 ರೈತರು ಸೆಲ್ಫ್ ಡಿಕ್ಲರೇಷನ್ ನಮೂನೆಗೆ ಸಹಿ ಹಾಕಿಲ್ಲ ಅಗತ್ಯ ದಾಖಲಾತಿ ಸಲ್ಲಿಸಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.