ಆ್ಯಪ್ನಗರ

ದಶಕದ ದಶಚರಣ ಸ್ಮರಣ ಸಂಚಿಕೆ ಬಿಡುಗಡೆ

ಅಕ್ಕಿಆಲೂರು: ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ವಸತಿ ನಿಲಯದಲ್ಲಿಟ್ಟು ಓದಿಸಲು ಹೆಚ್ಚು ಒತ್ತು ನೀಡುತ್ತಿದ್ದು, ಇದು ಸರಿಯಾದ ಬೆಳವಣಿಗೆಯಲ್ಲ. ವಸತಿ ನಿಲಯದಲ್ಲಿದ್ದುಕೊಂಡೇ ಬೆಳೆದು ದೊಡ್ಡವರಾಗುವ ಮಕ್ಕಳು ಮುಂದೆ ಪೋಷಕರನ್ನು ನಿರ್ಲಕ್ಷಿತ್ರ್ಯಸಿ ಅವರನ್ನು ವೃದ್ಧಾಶ್ರಮದತ್ತ ದೂಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ಬಸವರಾಜ್‌ ಸೂರಗೊಂಡರ ಕಳವಳ ವ್ಯಕ್ತಪಡಿಸಿದರು.

Vijaya Karnataka 12 Jan 2020, 5:00 am
ಅಕ್ಕಿಆಲೂರು: ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ವಸತಿ ನಿಲಯದಲ್ಲಿಟ್ಟು ಓದಿಸಲು ಹೆಚ್ಚು ಒತ್ತು ನೀಡುತ್ತಿದ್ದು, ಇದು ಸರಿಯಾದ ಬೆಳವಣಿಗೆಯಲ್ಲ. ವಸತಿ ನಿಲಯದಲ್ಲಿದ್ದುಕೊಂಡೇ ಬೆಳೆದು ದೊಡ್ಡವರಾಗುವ ಮಕ್ಕಳು ಮುಂದೆ ಪೋಷಕರನ್ನು ನಿರ್ಲಕ್ಷಿತ್ರ್ಯಸಿ ಅವರನ್ನು ವೃದ್ಧಾಶ್ರಮದತ್ತ ದೂಡುತ್ತಿರುವುದು ನೋವಿನ ಸಂಗತಿಯಾಗಿದೆ ಎಂದು ಟಿಎಪಿಸಿಎಂಎಸ್‌ ಅಧ್ಯಕ್ಷ ಬಸವರಾಜ್‌ ಸೂರಗೊಂಡರ ಕಳವಳ ವ್ಯಕ್ತಪಡಿಸಿದರು.
Vijaya Karnataka Web decade of the decade commemorative issue
ದಶಕದ ದಶಚರಣ ಸ್ಮರಣ ಸಂಚಿಕೆ ಬಿಡುಗಡೆ


ಕೂಸನೂರು ಗ್ರಾಮದಲ್ಲಿಶಾರದಾ ಆಂಗ್ಲಮಾಧ್ಯಮ ಶಾಲೆಯಲ್ಲಿನಡೆದ ದಶಮಾನೋತ್ಸವದಲ್ಲಿದಶಕದ ದಶಚರಣ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ಪ್ರಸ್ತುತ ಪಾಶ್ಚಿಮಾತ್ಯ ಸಂಸ್ಕೃತಿಯ ಮೋಡಿಗೆ ಒಳಗಾಗಿ ಯುವ ಸಮೂಹ ಭಾರತೀಯ ನೈಜ ಸಂಸ್ಕೃತಿ ಗಾಳಿಗೆ ತೂರಿದ್ದು, ನೈತಿಕ ಅಧಃಪತನಕ್ಕೀಡಾಗಿದೆ. ಇಂದಿನ ಸಂದಿಗ್ಧ ಸನ್ನಿವೇಶದಲ್ಲಿರಚನಾತ್ಮಕ ಧೋರಣೆ ಮೈಗೂಡಿಸಿಕೊಂಡು ಮುನ್ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

ಸಂಗೂರು ಸಹಕಾರಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಜಿ.ಎಸ್‌.ದೇಶಪಾಂಡೆ ಮಾತನಾಡಿ, ನಮ್ಮ ಮಕ್ಕಳಿಗಿಂದು ಶಿಕ್ಷಣದ ಜತೆ ಮೌಲ್ಯ ಹೇಳಿಕೊಡುವ ಕೆಲಸ ನಡೆಯಬೇಕಿದೆ. ಶಾಲೆಗಳ ಜತೆ ಮನೆಗಳಲ್ಲಿಯೂ ಮಕ್ಕಳಿಗೆ ಸಂಸ್ಕಾರ ಸಿಗಬೇಕಿದೆ ಎಂದರು.

ಗ್ರಾಮೀಣ ವಿದ್ಯಾವರ್ಧಕ ಸಂಸ್ಥೆಯ ಉಪಾಧ್ಯಕ್ಷ ಕೊಟ್ರಬಸಪ್ಪ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ನ್ಯಾಯವಾದಿ ಬಿ.ಎಸ್‌.ಕುಲಕರ್ಣಿ, ತಿಳವಳ್ಳಿಯ ವಿಕಾಸ್‌ ಬ್ಯಾಂಕಿನ ಅಧ್ಯಕ್ಷ ಎಂ.ಅಪ್ಪುಶೆಟ್ಟಿ, ವೀರಪ್ಪ ಹಲಗಜ್ಜನವರ, ಅಬ್ದುಲ್‌ರೆಹೆಮಾನ್‌ ಸವಣೂರ, ನಿಂಗಪ್ಪ ಕೊಪ್ಪದ, ಎಸ್‌.ಆರ್‌.ಪಾಟೀಲ, ರಾಜಣ್ಣ ಬೆಟಗೇರಿ, ಮುಖ್ಯೋಪಾಧ್ಯಾಯ ಬಸವರಾಜ್‌ ಸೂಡಂಬಿ, ನಿಜಲಿಂಗಪ್ಪ ಮುದಿಯಪ್ಪನವರ, ಬಸವರಾಜ್‌ ಹಾದಿಮನಿ ಸೇರಿದಂತೆ ಇನ್ನಿತರರು ಈ ಸಂದರ್ಭದಲ್ಲಿಇದ್ದರು. ಬಳಿಕ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಮನ ಸೆಳೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ