ಆ್ಯಪ್ನಗರ

ಕೊಡೆ, ರೇನ್‌ಕೋಟ್‌, ಜರ್ಕಿನ್‌, ಸ್ವೆಟರ್‌ಗೆ ಬೇಡಿಕೆ

ಸಂತೋಷ್‌ ಅಪ್ಪಾಜಿ ಅಕ್ಕಿಆಲೂರು: ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ... ಮಳೆಗಾಲ ಆರಂಭ ಕಂಡಿದೆ. ಈ ಮಧ್ಯೆ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು ಹವಾಮಾನಕ್ಕೆ ಅನುಗುಣವಾಗಿ ಸುರಕ್ಷ ತಾ ಕ್ರಮ ಕೈಗೊಳುವತ್ತ ಜನತೆಯ ಚಿತ್ತ ನೆಟ್ಟಿದೆ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲೀಗ ರೇನ್‌ಕೋಟ್‌, ಜರ್ಕಿನ್‌, ಸ್ವೆಟರ್‌, ಕೊಡೆಗಳ ಮಾರಾಟದ ಅಬ್ಬರ ಕಂಡು ಬರಲಾರಂಭಿಸಿದೆ.

Vijaya Karnataka 15 Jul 2019, 5:00 am
ಸಂತೋಷ್‌ ಅಪ್ಪಾಜಿ ಅಕ್ಕಿಆಲೂರು: ಮುಂಗಾರು ಮಳೆಯೇ.. ಏನು ನಿನ್ನ ಹನಿಗಳ ಲೀಲೆ... ಮಳೆಗಾಲ ಆರಂಭ ಕಂಡಿದೆ. ಈ ಮಧ್ಯೆ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು ಹವಾಮಾನಕ್ಕೆ ಅನುಗುಣವಾಗಿ ಸುರಕ್ಷ ತಾ ಕ್ರಮ ಕೈಗೊಳುವತ್ತ ಜನತೆಯ ಚಿತ್ತ ನೆಟ್ಟಿದೆ. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲೀಗ ರೇನ್‌ಕೋಟ್‌, ಜರ್ಕಿನ್‌, ಸ್ವೆಟರ್‌, ಕೊಡೆಗಳ ಮಾರಾಟದ ಅಬ್ಬರ ಕಂಡು ಬರಲಾರಂಭಿಸಿದೆ.
Vijaya Karnataka Web HVR-13AKR2


ಈ ಭಾಗ ಶಿರಸಿ ಗಡಿಯ ಅಂಚಿಗೆ ಹೊಂದಿಕೊಂಡಿರುವ ಅರೆ ಮಲೆನಾಡು ಪ್ರದೇಶವಾಗಿದ್ದು ತಂಪು ವಲಯವಾಗಿದೆ. ಭೌಗೋಳಿಕವಾಗಿ ತಂಪು ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಮಳೆ-ಚಳಿಯಿಂದ ಪಾರಾಗಲು ರಕ್ಷ ಣೆಗೆ ನಾನಾ ಸಾಧನ ಹೊಂದುವುದು ಇಲ್ಲಿನ ಜನತೆಗೆ ಅನಿವಾರ್ಯವಾಗಿದೆ.

ಮಾರಾಟ ಭರಾಟೆ: ಇಲ್ಲಿನ ಪೇಟೆ ಓಣಿ, ಬಸ್‌ ನಿಲ್ದಾಣ, ಕುಮಾರ ನಗರ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಮಳೆಗಾಲದ ರಕ್ಷ ಣಾ ಸಾಧನಗಳ ಮಾರಾಟ ಭರಾಟೆ ಕಳೆದ ಕೆಲ ದಿನಗಳಿಂದ ಕಂಡು ಬರುತ್ತಿದೆ. ಕಾಲಮಾನ ಬದಲಾದಂತೆ ಮನುಷ್ಯನ ಜೀವನ ಶೈಲಿ ಬದಲಾಗುತ್ತಿದೆ.

ಕಳೆದ ಕೆಲವು ವಾರಗಳ ಹಿಂದಷ್ಟೇ ಬಿಸಿಲಿನ ಧಗೆ ಹಾಗೂ ಸೆಕೆಯಿಂದ ರಕ್ಷಿಸಿಕೊಳ್ಳಲು ಗಿಡಮರಗಳ ನೆರಳು, ತಂಪು ಪಾನೀಯ ಅರಸುತ್ತಿದ್ದ ಜನತೆ ಈಗ ಬೆಚ್ಚಗಿರಲು ಹೆಚ್ಚು ಕಾತರರಾಗಿದ್ದಾರೆ. ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿಕ ರೋಗಗಳು ಉಲ್ಭಣಗೊಳ್ಳುವ ಆತಂಕ ಹೆಚ್ಚಿರುವ ಕಾರಣ ಸುರಕ್ಷ ತಾ ಕ್ರಮ ಹೊಂದುವುದು ತೀರಾ ಅಗತ್ಯ ಮತ್ತು ಅನಿವಾರ್ಯವಾಗಿದೆ.

ಚಹಾ, ಮಿರ್ಚಿ ಸವಿರುಚಿ: ಜಿಟಿಜಿಟಿ ಮಳೆಯಿಂದ ಬಿಸಿಲಿನ ಧಗೆ ತೆರೆಮರಿಗೆ ಸರಿದು ತಾಪಮಾನವೀಗ ತಂಪಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಜನತೆ ಬೆಚ್ಚನೆಯ ಉಡುಪು, ಬಿಸಿಬಿಸಿ ತಿಂಡಿ, ಕಾಫಿ, ಚಹಾ, ಮಿರ್ಚಿ, ಭಜಿ, ವಡಾ, ಚುರುಮುರಿಯ ಮೊರೆ ಹೋಗಿದ್ದಾರೆ. ಕಾಲಮಾನದ ಬದಲಾವಣೆಯಿಂದ ಮಾರುಕಟ್ಟೆಗೂ ಮಳೆಗಾಲದ ಕಳೆ ಬಂದಿದೆ.

ಇಲ್ಲಿನ ಬಸ್‌ ನಿಲ್ದಾಣ, ಸಿಂಧೂರ ಸಿದ್ದಪ್ಪ ವೃತ್ತ, ಕಲ್ಲಾಪುರ ವೃತ್ತ, ಮಾರುತಿ ನಗರ ಸೇರಿದಂತೆ ಇನ್ನಿತರೆಡೆ ರಾತ್ರಿ ಹಾಗೂ ನಸುಕಿನ ಸಮಯದಲ್ಲಿ ರಸ್ತೆ ಬದಿ ಬೆಂಕಿ ಹಾಕಿ ಗುಂಪು ಗುಂಪಾಗಿ ಯುವಕರು ಒಂದೆಡೆ ಸೇರಿ ಮೈಕೈ ಕಾಯಿಸಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಶಿರಸಿ ಗಡಿಯಿಂದ ತಂಪು ಹವೆ ಈ ಭಾಗಕ್ಕೆ ಬೀಸಲಾರಂಭಿಸಿರುವದರಿಂದ ಆದಷ್ಟು ಬೆಚ್ಚಗೆ ಇರಲು ಜನತೆ ಮುಂದಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ