ಆ್ಯಪ್ನಗರ

ಅಬಕಾರಿ ಡಿಸಿ ಅಮಾನತಿಗೆ ಆಗ್ರಹ

ಹಾವೇರಿ: ಜಿಲ್ಲೆಯ ಅಬಕಾರಿ ಡಿಸಿ ಕಿರುಕುಳ ಖಂಡಿಸಿ, ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಮುಂಭಾಗದಲ್ಲಿಬೃಹತ್‌ ಪ್ರತಿಭಟನೆ ನಡೆಸಿದರು.

Vijaya Karnataka 29 Jan 2020, 5:00 am
ಹಾವೇರಿ: ಜಿಲ್ಲೆಯ ಅಬಕಾರಿ ಡಿಸಿ ಕಿರುಕುಳ ಖಂಡಿಸಿ, ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾಮದ್ಯ ಮಾರಾಟಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಡಳಿತ ಮುಂಭಾಗದಲ್ಲಿಬೃಹತ್‌ ಪ್ರತಿಭಟನೆ ನಡೆಸಿದರು.
Vijaya Karnataka Web demand for excise dc suspension
ಅಬಕಾರಿ ಡಿಸಿ ಅಮಾನತಿಗೆ ಆಗ್ರಹ


ಮಂಗಳವಾರ ಜಿಲ್ಲಾದ್ಯಂತ ವೈನ್‌ಶಾಪ್‌ ಮತ್ತು ಬಾರ್‌ ಅಂಗಡಿಗಳನ್ನು ಬಂದ್‌ ಮಾಡಿ ಹಾವೇರಿ ಜಿಲ್ಲಾಡಳಿತ ಮುಂಭಾಗದಲ್ಲಿಮದ್ಯದ ಅಂಗಡಿ ಮಾಲೀಕರು ಸುಮಾರು ಒತ್ತು ಪ್ರತಿಭಟನೆ ನಡೆಸಿ ಅಬಕಾರಿ ಆಯುಕ್ತರ ವಿರುದ್ಧ ಧಿಕ್ಕಾರ ಕೂಗಿ ಅಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಸಂಘದ ಮುಖಂಡರು ಮಾತನಾಡಿ, ಜಿಲ್ಲೆಯ ಅಬಕಾರಿ ಇಲಾಖೆಯ ಆಯುಕ್ತರು ಮತ್ತು ಅಧಿಕಾರಿಗಳು ಮದ್ಯ ವ್ಯಾಪಾರಿಗಳಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಈಗಿರುವ ಡಿಸಿ ಅವರು ಹಾವೇರಿ ಬಂದು 9 ತಿಂಗಳಲ್ಲಿ3ರಿಂದ 4 ಕೋಟಿ ರೂ. ಅಕ್ರಮವಾಗಿ ವಸೂಲಿ ಮಾಡಿದ್ದಾರೆ. ಜೊತೆಗೆ ಸನ್ನದಾರರನ್ನು ಸಂಜೆ ಕಚೇರಿಗೆ ಕರೆಸಿಕೊಂಡು ಯಾರಿಗೂ ತಿಳಿಯದಂತೆ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಿದರು.

ಅಬಕಾರಿ ಡಿಸಿ ನಾಗಶೈನ ಅವರು ದುರುದ್ದೇಶದಿಂದ ಪ್ರಕರಣ ದಾಖಲಿಸಿ ಲಂಚ ಬೇಡಿಕೆ ಒಡ್ಡುತ್ತಾ ಸನ್ನದುದಾರರಿಗೆ ತೊಂದರೆ ನೀಡುತ್ತಿದ್ದಾರೆ. ಪ್ರತಿ ವರ್ಷ 6 ಲಕ್ಷ ರೂ.ಗಳನ್ನು ಸರಕಾರಕ್ಕೆ ಕಟ್ಟಿ ಲೈಸನ್ಸ್‌ ನವೀಕರಣ ಮಾಡಿಸುತ್ತೇವೆ. ನವೀಕರಣ ವೇಳೆ ಬ್ಲೂಪ್ರಿಂಟ್‌ ಸರಿಯಿಲ್ಲಎನ್ನುವ ಕಾರಣ ನೀಡಿ ಲಂಚದ ಬೇಡಿಕೆ ಒಡ್ಡುತ್ತಾರೆ ಎಂದು ದೂರಿದರು.

ಪ್ರತಿ ತಿಂಗಳು ನಾವು ಇಂಡೆಂಟ್‌ ಕೊಟ್ಟು ಮಾರಾಟ ಮಾಡುತ್ತಿದ್ದೇವೆ. ಆದರೆ ಇವರು ತಾವು ಹೇಳಿದ ಇಂಡೆಂಟ್‌ ಕೊಡಲೇಬೇಕೆಂದು ಒತ್ತಡ ಹಾಕುತ್ತಿದ್ದಾರೆ. ನಾವು ಅವರು ಹೇಳಿದ ಹಾಗೆ ಕೇಳದೇ ಇದ್ದರೇ ಬೇರೆ ಕಾಯ್ದೆ ಪ್ರಯೋಗಿಸಿ ನೋಟಿಸ್‌ ಕೊಡ್ತಾರೆ. ಜಿಲ್ಲೆಯಲ್ಲಿಕಳ್ಳಬಟ್ಟಿ, ಮಿಲ್ಟಿ್ರ ಮದ್ಯವೂ ಯಥೇಚ್ಛವಾಗಿ ಪೂರೈಕೆಯಾಗುತ್ತಿದೆ. ಅದನ್ನು ನಿಯಂತ್ರಿಸದೇ ನಮ್ಮ ಮೇಲೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಅಬಕಾರಿ ಡಿಸಿಗೆ ಪರಮಾಧಿಕಾರ ಇದೇ ಎಂದುಕೊಂಡಿದ್ದಾನೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿಎಲ್ಲರಿಗೂ ನ್ಯಾಯ ಕೇಳುವ ಹಕ್ಕಿದೆ. ನಮಗೆ ಕಿರುಕುಳ ನೀಡುತ್ತಿರುವ ಅಧಿಕಾರಿ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು ಆಗ್ರಹಿಸಿದರು.

ಜಿಲ್ಲಾಧಿಕಾರಿಗಳು ಕೂಡಲೇ ಅಬಕಾರಿ ಡಿಸಿಗೆ ಕಾನೂನು ಕ್ರಮಕೈಗೊಳ್ಳಬೇಕು. ಮದ್ಯ ಮಾರಾಟಗಾರರಿಗೆ ನಮ್ಮದಿ ಜೀವನ ನಡೆಸಲು ಅವಕಾಶ ಮಾಡಿಕೊಡಬೇಕು ಇಲ್ಲವಾದರೆ ನಮ್ಮ ಎಲ್ಲಾವೈನ್‌ಶಾಪ್‌ ಮತ್ತು ಬಾರ್‌ ಅಂಗಡಿಗಳನ್ನು ಅನಿರ್ದಿಷ್ಟಾವಧಿವರೆಗೆ ಬಂದ್‌ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಕೃಷ್ಣಬಾಜಪೇಯಿ ಮನವಿ ಸ್ವೀಕರಿಸಿ ಮಾತನಾಡಿ, ಅಬಕಾರಿ ಡಿಸಿ ಲಂಚ ಬೇಡಿಕೆ ಮತ್ತು ಕಿರುಕುಳ ತನಿಖೆಗೆ ಒಬ್ಬ ಮೇಲಾಧಿಕಾರಿ ನೇಮಕ ಮಾಡಿ ಸೂಕ್ತ ಪರಿಶೀಲನೆ ಮಾಡಿಸಿ ಬಂದ ಮಾಹಿತಿಯನ್ನು ಸರಕಾರಕ್ಕೆ ಕಳಿಸುತ್ತೇನೆ. ಪ್ರತಿಭಟನೆ ಇಲ್ಲಿಗೆ ಕೈಬಿಟ್ಟು ಮದ್ಯದ ಅಂಗಡಿಗಳನ್ನು ಪುನಃ ಪ್ರಾರಂಭಿಸಿ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿರಾಜ್ಯ ಮದ್ಯ ಮರಾಟಗಾರರ ಸಂಘದ ಅಧ್ಯಕ್ಷ ಗುರುಸ್ವಾಮಿ, ಪ್ರಧಾನ ಕಾರ್ಯದರ್ಶಿ ಗೋವಿಂದ ರಾಜ, ಜಿಲ್ಲಾಧ್ಯಕ್ಷ ಬಸವರಾಜ ಬೆಳವಡಿ, ಉಪಾಧ್ಯಕ್ಷ ಆರ್‌.ಪ್ರತಾಪ, ಎಸ್‌.ಎಸ್‌. ಶೀಲವಂತ, ಎಂ.ಡಿ.ಈಳಗೇರ, ಆರ್‌.ನಾಗರಾಜ, ನಾಗರಾಜ ಕುಲಕರ್ಣಿ, ಎಸ್‌.ಅಮರೇಂದ್ರ, ಉಮೇಶ ಗೌಳಿ, ಮಲ್ಲುಮಿರಜಕರ, ಬಸವರಾಜ ಬಳ್ಳಾರಿ ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ