ಆ್ಯಪ್ನಗರ

ಕೆರೆ ಏರಿ ಮೇಲೆ ರಾಶಿ ರಾಶಿ ತರಕಾರಿ ಬೀಜ ಪತ್ತೆ

ಬ್ಯಾಡಗಿ: ತರಕಾರಿ ಬೀಜದ ಪಾಕೆಟ್‌ಗಳು ಪಟ್ಟಣದ ಹೊರವಲಯದಲ್ಲಿ ಶನಿವಾರ ಪತ್ತೆಯಾಗಿದ್ದು, ಸಿಕ್ಕಿರುವ ಬೀಜಗಳು ನಕಲಿ ಎಂದು ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

Vijaya Karnataka 30 Jun 2019, 5:00 am
ಬ್ಯಾಡಗಿ: ತರಕಾರಿ ಬೀಜದ ಪಾಕೆಟ್‌ಗಳು ಪಟ್ಟಣದ ಹೊರವಲಯದಲ್ಲಿ ಶನಿವಾರ ಪತ್ತೆಯಾಗಿದ್ದು, ಸಿಕ್ಕಿರುವ ಬೀಜಗಳು ನಕಲಿ ಎಂದು ಪೊಲೀಸರು ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
Vijaya Karnataka Web detection of heaped vegetable seed on the lake
ಕೆರೆ ಏರಿ ಮೇಲೆ ರಾಶಿ ರಾಶಿ ತರಕಾರಿ ಬೀಜ ಪತ್ತೆ


ಪಟ್ಟಣದಿಂದ ರಾಮಗೊಂಡನಹಳ್ಳಿ ಗ್ರಾಮಕ್ಕೆ ತೆರಳುವ (ಹಳೆ ರಸ್ತೆ) ರಸ್ತೆಯಲ್ಲಿ ಕೆರೆ ಏರಿ ಮೇಲೆ ರಾಶಿ ರಾಶಿ ಬೀಜದ ಪಾಕೆಟ್‌ಗಳು ಚೆಲ್ಲಾಪಿಲ್ಲಿಯಾಗಿ ಎಲ್ಲೆಂದರಲ್ಲಿ ಬಿದ್ದಿವೆ.

ರಾಜ್ಯ ರೈತ ಸಂಘದ ಮುಖಂಡರು, ಸದಸ್ಯರು ಪೊಲೀಸ್‌ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಹಾಗಲಕಾಯಿ, ಮುಳಗಾಯಿ, ಮೆಣಸಿನಕಾಯಿ, ಕುಂಬಳಕಾಯಿ, ಕಲ್ಲಂಗಡಿ ಸೇರಿದಂತೆ ಎಲ್ಲ ರೀತಿಯ ತರಕಾರಿ ಬೀಜದ ಪಾಕೆಟ್‌ಗಳು ಮತ್ತು ಖುಲ್ಲಾ ಬೀಜ ತುಂಬಿದ್ದ ದೊಡ್ಡ ಗೋಣಿ ಚೀಲಗಳು ಸ್ಥಳದಲ್ಲಿ ಲಭ್ಯವಾಗಿವೆ.

ರೈತ ಸಂಘದ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಪಟ್ಟಣದಲ್ಲಿಯೇ ಅಜ್ಞಾತ ಸ್ಥಳವೊಂದರಲ್ಲಿ ಸೀಡ್ಸ್‌ ಪಾಕೆಟ್‌ಗಳು ರೀಫಿಲ್ಲಿಂಗ್‌ ಆಗುತ್ತಿವೆ. ಕೂಡಲೇ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ