ಆ್ಯಪ್ನಗರ

ರೈಲು ಸಂಚಾರ ತಡೆಗೆ ನಿರ್ಣಯ

ರಾಣೇಬೆನ್ನೂರ: ನಗರದ ದೇವರಗುಡ್ಡ, ಗಂಗಾಪುರ ಹಾಗೂ ಮೇಡ್ಲೇರಿ ರಸ್ತೆಗಳಲ್ಲಿರೇಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸಲು ಆಗ್ರಹಿಸಿ ನ.4 ರಂದು ರೈಲು ಸಂಚಾರ ತಡೆದು ಪತ್ರಿಭಟನೆ ನಡೆಸಲು ಸ್ಥಳೀಯ ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯು ನಗರದ ಕಂಚಗಾರ ಗಲ್ಲಿಬಸವೇಶ್ವರ ದೇವಸ್ಥಾನದಲ್ಲಿಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.

Vijaya Karnataka 16 Oct 2019, 5:00 am
ರಾಣೇಬೆನ್ನೂರ: ನಗರದ ದೇವರಗುಡ್ಡ, ಗಂಗಾಪುರ ಹಾಗೂ ಮೇಡ್ಲೇರಿ ರಸ್ತೆಗಳಲ್ಲಿರೇಲ್ವೆ ಹಳಿಗೆ ಅಡ್ಡಲಾಗಿ ಮೇಲ್ಸೇತುವೆ ನಿರ್ಮಿಸಲು ಆಗ್ರಹಿಸಿ ನ.4 ರಂದು ರೈಲು ಸಂಚಾರ ತಡೆದು ಪತ್ರಿಭಟನೆ ನಡೆಸಲು ಸ್ಥಳೀಯ ರೇಲ್ವೆ ಮೇಲ್ಸೇತುವೆ ನಿರ್ಮಾಣ ಹೋರಾಟ ಸಮಿತಿಯು ನಗರದ ಕಂಚಗಾರ ಗಲ್ಲಿಬಸವೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿಸರ್ವಾನುಮತದ ನಿರ್ಣಯ ಕೈಗೊಳ್ಳಲಾಯಿತು.
Vijaya Karnataka Web determination of train traffic interruption
ರೈಲು ಸಂಚಾರ ತಡೆಗೆ ನಿರ್ಣಯ


ಸಭೆಯಲ್ಲಿಮಾತನಾಡಿದ ಹೋರಾಟ ಸಮಿತಿ ಸದಸ್ಯರು, ರೇಲ್ವೆ ಇಲಾಖೆಯು ದೇವರಗುಡ್ಡ ರಸ್ತೆಯಲ್ಲಿನಿರ್ಮಾಣ ಹಂತದಲ್ಲಿರುವ ಕೆಳಸೇತುವೆ ಅವೈಜ್ಞಾನಿಕವಾಗಿದೆ. ಮಳೆ ಸುರಿದರೆ ನೀರು ಸರಾಗವಾಗಿ ಮುಂದಕ್ಕೆ ಸಾಗದೇ ಆಳೇತ್ತರದಲ್ಲಿನೀರು ನಿಲ್ಲುತ್ತದೆ. ಇದರಿಂದ ವಾಹನ ಸಂಚಾರ ಬಂದಾಗುತ್ತದೆ. ಕಾಮಗಾರಿ ನಿಲ್ಲಿಸುವಂತೆ ಅನೇಕ ಬಾರಿ ಹೋರಾಟ ಕೈಗೊಂಡು ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಜನಪತ್ರಿನಿಧಿಗಳು ಹಾಗೂ ರೈಲ್ವೆ ಅಧಿಕಾರಿಗಳು ದಿವ್ಯ ನಿರ್ಲಕ್ಷತ್ರ್ಯ ವಹಿಸಿದ್ದಾರೆ ಎಂದು ದೂರಿದರು.

ನಗರದ ಗಂಗಾಪುರ ಹಾಗೂ ಮೆಡ್ಲೇರಿ ರಸ್ತೆಗಳಲ್ಲಿಕೂಡ ಕೆಳ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರೆತಿದೆ. ಇವುಗಳನ್ನು ಕೂಡ ಮೇಲ್ಸೇತುವೆಯಾಗಿ ಪರಿವರ್ತಿಸುವಂತೆ ಹೋರಾಟ ನಡೆಸಲಾಗುವುದು. 13.05.2019 ರಂದು ಕೆಳಸೇತುವೆ ಕಾಮಗಾರಿ ವಿರೋಧಿಸಿ ಉಪವಾಸ ಕೈಗೊಂಡಾಗ ತಹಶೀಲ್ದಾರ ಕೆಳಸೇತುವೆ ಕಾಮಗಾರಿ ನಿಲ್ಲಿಸಲು ಆದೇಶಿಸಿದ್ದರು.

ನಂತರ ಸಂಸದ ಶಿವಕುಮಾರ ಉದಾಸಿ ಹಾಗೂ ರೈಲ್ವೆ ಇಲಾಖೆ ಚಿಪ್‌ ಇಂಜಿನಿಯರ್‌ ದೇವೆಂದ್ರ ಗುಪ್ತ ಭೇಟಿ ನೀಡಿ ಮೇಲ್ಸೇತುವೆ ನಿರ್ಮಿಸುವ ಭರವಸೆ ನೀಡಿದ್ದರು. ಇದಕ್ಕೆ ಪೂರಕವಾಗಿ ರೈಲ್ವೆ ಇಲಾಖೆ ಮೂಲಕ ಸುಮಾರು 39 ಕೋಟಿ ರೂ. ವೆಚ್ಚದಲ್ಲಿಮೇಲ್ಸೇತುವೆ ನಿರ್ಮಾಣದ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಇದಾಗಿ ಹಲವಾರು ತಿಂಗಳಾದರೂ ಕಾಮಗಾರಿ ಮಾತ್ರ ಪ್ರಾರಂಭವಾಗಿಲ್ಲ. ಪ್ರಸ್ತಾವನೆ ಕೂಡ ಬಂದಿಲ್ಲಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ನಗರಸಭೆ ಮಾಜಿ ಸದಸ್ಯ ಪ್ರಭುಸ್ವಾಮಿ ಕರ್ಜಗಿಮಠ, ರವೀಂದ್ರಗೌಡ ಪಾಟೀಲ, ಉಮೇಶ ಹೊನ್ನಾಳ್ಳಿ, ಬಸಣ್ಣ ನೆಲೋಗಲ್ಲ, ಬಾಬುಗೌಡ ಪಾಟೀಲ, ದಯಾನಂದ ಪಾಟೀಲ, ನಿತ್ಯಾನಂದ ಕುಂದಾಪುರ, ಪರಮೇಶ ಕಾಳಮ್ಮನವರ, ಬಸಣ್ಣ ಸಾವಕ್ಕನವರ, ಜಗದೀಶ ಕೆರೂಡಿ ಮತ್ತಿತರು ಸಭೆಯಲ್ಲಿಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ