ಆ್ಯಪ್ನಗರ

ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಿ

ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹೊಸಳ್ಳಿ ಗ್ರಾಮದ ಸರಕಾರಿ ಪೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಮಂಗಳವಾರ ಜಾನಪದ ಸಂಗೀತ ಕಾರ್ಯಕ್ರಮ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ (ವಿದ್ಯಾರ್ಥಿ ಮಿತ್ರ) ಮಿನಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.

Vijaya Karnataka 22 Aug 2019, 5:00 am
Vijaya Karnataka Web HVR-21 HAVERI 7
ಹಾವೇರಿ: ಜಿಲ್ಲೆಯ ಸವಣೂರ ತಾಲೂಕಿನ ಹೊಸಳ್ಳಿ ಗ್ರಾಮದ ಸರಕಾರಿ ಪೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಅಂಗವಾಗಿ ಮಂಗಳವಾರ ಜಾನಪದ ಸಂಗೀತ ಕಾರ್ಯಕ್ರಮ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ (ವಿದ್ಯಾರ್ಥಿ ಮಿತ್ರ) ಮಿನಿ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.

ಈ ವೇಳೆ ತಾ.ಪಂ. ಸದಸ್ಯೆ ಸವಿತಾ ಬಿಜ್ಜೂರು ಅವರು ಮಿನಿ ಸಂಚಿಕೆ (ವಿದ್ಯಾರ್ಥಿ ಮಿತ್ರ)ಯನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವ ಮೂಲಕ ಉತ್ತಮ ಅಂಕ ಗಳಿಸಿ ತಂದೆ-ತಾಯಿಗಳಿಗೆ ಮತ್ತು ಊರಿಗೆ ಕೀರ್ತಿ ತರಬೇಕು ಎಂದರು.

ಪುಸ್ತಕದ ಜೊತೆಗೆ ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಮಕ್ಕಳು ರೂಡಿಸಿಕೊಳ್ಳಬೇಕು. ವಿಜಯ ಕರ್ನಾಟಕ ಹೊರ ತರುತ್ತಿರುವ ಮಿನಿ ಸಂಚಿಕೆಯು ಎಸ್ಸೆಸ್ಸೆಲ್ಸಿ ಪೂರಕವಾದ ಮಾಹಿತಿ ಹೊಂದಿದೆ. ಸಂಚಿಕೆಯನ್ನು ಎಲ್ಲರೂ ತಪ್ಪದೇ ಓದಬೇಕು ಎಂದು ಹೇಳಿದರು.

ಶ್ರೀಧರ ದೊಡ್ಡಮನಿ 2 ತಿಂಗಳ, ಸವಿತಾ ಬಿಜ್ಜೂರ 1 ತಿಂಗಳು, ಹುರುಳಿಕೊಪ್ಪಿಯ ವೀರಭದ್ರೇಶ್ವರ ಸಂಸ್ಕೃತಿಕ ಕಲಾ ತಂಡದ ವೀರಯ್ಯ ಸಂಕಿನಮಠ 1 ತಿಂಗಳ ಕಾಲ 46 ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಉಚಿತವಾಗಿ ಮಿನಿ ಸಂಚಿಕೆ ನೀಡಿದ್ದಾರೆ.

ಈ ವೇಳೆ ಹುರುಳಿಕೊಪ್ಪಿಯ ವೀರಭದ್ರೇಶ್ವರ ಸಂಸ್ಕೃತಿಕ ಕಲಾ ತಂಡದ ವತಿಯಿಂದ ಜಾನಪದ ಸಂಗೀತ ಕಾರ್ಯಕ್ರಮ ಜರುಗಿತು. ಮುಖ್ಯೋಪಾಧ್ಯಾಯಿನಿ ಕೆ.ವಿ. ಭಟ್‌ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಎಸ್‌.ಕೆ. ಶಶಿಧರ, ಸ್‌.ಎನ್‌. ಹೊಸಮನಿ, ಎನ್‌. ನಾಗರಾಜ, ಎಸ್‌.ಎ. ಹಿರೇಮಠ, ಎಸ್‌.ಆರ್‌. ಚಿಕ್ಕಯ್ಯನಮಠ, ಜಿ.ಎಚ್‌. ದೊಡ್ಡಮನಿ, ಎಚ್‌.ಕೆ. ಅಜ್ಜಣ್ಣನವರ, ಆರ್‌.ವಿ. ಅಂಗಡಿ, ಕಲಾವಿದರಾದ ರೇಣುಕಾ ಚಲವಾದಿ, ಮಹಾಂತೇಶ ಹರಿಜನ, ಈರಣ್ಣ ಎಲಿಗಾರ, ನಾಗರಾಜ ಬೇವಿನಹಳ್ಳಿ, ಹನುಮಂತಪ್ಪ ಕಲಿವಾಳ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ