ಆ್ಯಪ್ನಗರ

ಕೇಂದ್ರ-ರಾಜ್ಯದಲ್ಲಿ ಅಭಿವೃದ್ಧಿ ಪರ್ವ

ಹಿರೇಕೆರೂರ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಮುಂದುವರೆಯಲು ಉಪ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರಿಗೆ ಮತ ನೀಡಿ ಗೆಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮನವಿ ಮಾಡಿದರು.

Vijaya Karnataka 28 Nov 2019, 5:00 am
ಹಿರೇಕೆರೂರ: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರಕಾರ ಮುಂದುವರೆಯಲು ಉಪ ಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರಿಗೆ ಮತ ನೀಡಿ ಗೆಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮನವಿ ಮಾಡಿದರು.
Vijaya Karnataka Web development center in central state
ಕೇಂದ್ರ-ರಾಜ್ಯದಲ್ಲಿ ಅಭಿವೃದ್ಧಿ ಪರ್ವ


ಅವರು ತಾಲೂಕಿನ ಅರಳೀಕಟ್ಟಿ ಗ್ರಾಮದಲ್ಲಿಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಪರವಾಗಿ ಬುಧವಾರ ಮತಯಾಚನೆ ಮಾಡಿ ನಂತರ ನಡೆದ ಸಭೆಯಲ್ಲಿಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿಬಿಜೆಪಿ ಸರಕಾರಗಳು ಇರುವುದರಿಂದ ಕ್ಷೇತ್ರದಲ್ಲಿಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ನೀವು ಸಾಕ್ಷಿಯಾಗುತ್ತೀರಿ. ಈಗಾಗಲೇ ಯು.ಬಿ.ಬಣಕಾರ ಹಾಗೂ ಬಿ.ಸಿ.ಪಾಟೀಲ್‌ ಅವರ ತ್ಯಾಗದಿಂದ ರಾಜ್ಯದಲ್ಲಿಜನಪರ ಹಾಗೂ ಕಲ್ಯಾಣ ಸರಕಾರ ಇದೆ. ಹಿರೇಕೆರೂರು ಕ್ಷೇತ್ರವನ್ನು ಮಾದರಿ ತಾಲೂಕನ್ನಾಗಿ ಮಾಡಲು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್‌, ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ತಾಲೂಕ ಬಿಜೆಪಿ ಘಟಕದ ಅಧ್ಯಕ್ಷ ಎಸ್‌.ಆರ್‌.ಅಂಗಡಿ, ಜಿ.ಪಂ. ಸದಸ್ಯ ಎನ್‌.ಎಂ. ಈಟೇರ್‌, ಹುಚ್ಚಪ್ಪ ಜಡಿಯಣ್ಣನವರ್‌, ಬೊಜರಾಜ್‌ ಕರೂದಿ, ಲಿಂಗರಾಜ್‌ ಚಪ್ಪರದಳ್ಳಿ, ಪಾಲಾಕ್ಷಗೌಡ ಪಾಟೀಲ್‌, ಆರ್‌.ಎನ್‌.ಗಂಗೋಳ್‌, ದಿಳ್ಳಪ್ಪ ಹಳ್ಳಳ್ಳಿ, ಪುಟ್ಟೇಶಿ ಗೊರವರ್‌, ಕುಮಾರ್‌ ಪಂಗರ್‌, ಶಿವಾನಂದಪ್ಪ ಲಿಂಗದೇವರಕೊಪ್ಪ, ನಾಗಪ್ಪ ಮುಳಗುಂದ, ಶಾಂತಪ್ಪ ಗೊರವರ್‌, ಬಿದ್ಯಡಪ್ಪ ವಡೇರಹಳ್ಳಿ, ತಿಪ್ಪಣ್ಣ ಹುಚ್ಚಣ್ಣನವರ್‌, ನಾಗರಾಜ್‌ ತಿಪ್ಪಣ್ಣನವರ್‌, ಕರೇಗೌಡ ಬಿದರಿ, ಬಿ.ಕೆ.ಕುರಿಯವರ್‌, ಶಿವಪ್ಪ ಗಡಿಯಣ್ಣನವರ್‌, ಆನಂದಪ್ಪ ಹಾದಿಮನಿ, ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ