ಆ್ಯಪ್ನಗರ

ಧರ್ಮ ಜನ ಜಾಗೃತಿ ಕಾರ್ಯಕ್ರಮ ಇಂದಿನಿಂದ

ಬಂಕಾಪುರ: ಪಟ್ಟಣದ ಶ್ರೀಹುಚ್ಚೇಶ್ವರ ಮಹಾ ಮಠದ ಆವರಣದಲ್ಲಿಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜೆ, ರುದ್ರಪಠಣ, ಶ್ರೀಸಿದ್ದಾಂತ ಶಿಖಾಮಣಿ ಪಾರಾಯಣ ಮತ್ತು ಧರ್ಮ ಜನ ಜಾಗೃತಿ ಕಾರ್ಯಕ್ರಮ ಡಿ.22 ರಿಂದ 24ರ ವರೆಗೆ ನಡೆಯಲಿದೆ.

Vijaya Karnataka 22 Dec 2019, 5:00 am
ಬಂಕಾಪುರ: ಪಟ್ಟಣದ ಶ್ರೀಹುಚ್ಚೇಶ್ವರ ಮಹಾ ಮಠದ ಆವರಣದಲ್ಲಿಲೋಕ ಕಲ್ಯಾಣಾರ್ಥವಾಗಿ ಇಷ್ಟಲಿಂಗ ಮಹಾಪೂಜೆ, ರುದ್ರಪಠಣ, ಶ್ರೀಸಿದ್ದಾಂತ ಶಿಖಾಮಣಿ ಪಾರಾಯಣ ಮತ್ತು ಧರ್ಮ ಜನ ಜಾಗೃತಿ ಕಾರ್ಯಕ್ರಮ ಡಿ.22 ರಿಂದ 24ರ ವರೆಗೆ ನಡೆಯಲಿದೆ.
Vijaya Karnataka Web dharma jana awareness program from today
ಧರ್ಮ ಜನ ಜಾಗೃತಿ ಕಾರ್ಯಕ್ರಮ ಇಂದಿನಿಂದ


ಡಿ.22 ರಂದು ಬೆಳಗ್ಗೆ 8ಕ್ಕೆ ಇಷ್ಟಲಿಂಗ ಮಹಾಪೂಜೆ, ರುದ್ರಾಣಿ ಬಳಗದ ತಾಯಂದಿರಿಂದ ರುದ್ರಪಠಣ, ಶ್ರೀಸಿದ್ದಾಂತ ಶಿಖಾಮಣಿ ಪಾರಾಯಣ ನಡೆಯಲಿದೆ. ಸಂಜೆ 7ಕ್ಕೆ ನಡೆಯಲಿರುವ ಧರ್ಮ ಜನಜಾಗೃತಿ ಸಮಾರಂಭದ ದಿವ್ಯ ಸಾನ್ನಿಧ್ಯ ಗುಡ್ಡದ ಅನ್ವೇರಿ ವಿರಕ್ತಮಠದ ಶಿವಯೋಗಿ ಶ್ರೀಗಳು ವಹಿಸುವರು.

ಬಂಕಾಪುರ ಅರಳೆಲೆಮಠದ ರೇವಣಸಿದ್ದೇಶ್ವರ ಶ್ರೀಗಳು ನೇತೃತ್ವ ವಹಿಸುವರು. ಮಣಕವಾಡದ ಅಭಿನವ ಮೃಂತ್ಯುಂಜಯ ಶ್ರೀಗಳು, ಕುಂದಗೋಳ ಕಲ್ಯಾಣಪುರ ಮಠದ ಬಸವಣ್ಣಜ್ಜನವರು ಉಪಸ್ಥಿತರಿರುವರು. ಕೇಂದ್ರ ಗಣಿಗಾರಿಕೆ ಸಚಿವರಾದ ಪ್ರಲ್ಹಾದ ಜೋಶಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅತಿಥಿಗಳಾಗಿ ಆಗಮಿಸುವರು. ಲಕ್ಷೆತ್ರ್ಮೕಶ್ವರ ಕ.ಸಾ.ಪ.ಅಧ್ಯಕ್ಷೆ, ಸಾಹಿತಿ ಜಯಶ್ರೀ ಹೊಸಮನಿ ಉಪನ್ಯಾಸ ನೀಡುವರು.

ಡಿ.23 ರಂದು ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಸಂಜೆ 7ಕ್ಕೆ ನಡೆಯಲಿರುವ ಧರ್ಮ ಜನ ಜಾಗೃತಿ ಕಾರ್ಯಕ್ರಮದ ಸಾನ್ನಿಧ್ಯ ಲಿಂಗನಾಯಕನಹಳ್ಳಿ ಚನ್ನವೀರ ಶಿವಯೋಗಿ ಶ್ರೀಗಳು, ಕೂಡಲ ಗುರುನಂಜೇಶ್ವರಮಠದ ಗುರುಮಹೇಶ್ವರ ಶಿವಾಚಾರ್ಯರು ಉಪಸ್ಥಿತರಿರುವರು. ಮಾಜಿ ಸಂಸದ ಮಂಜುನಾಥ ಕುನ್ನೂರ, ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ಸಾಗರದ ನಿವೃತ್ತ ಪ್ರಾಚಾರ್ಯ ಪ್ರೊ. ಎಚ್‌.ಬಿ.ಷಡಕ್ಷರಯ್ಯ ಆಗಮಿಸುವರು.

ಡಿ.24 ಬೆಳಗ್ಗೆ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ. ಸಂಜೆ ನಡೆಯವ ಧರ್ಮ ಜನಜಾಗೃತಿ ಸಮಾರೋಪ ಸಮಾರಂಭದ ಸಾನ್ನಿಧ್ಯ ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ವಹಿಸುವರು. ಸವಣೂರ ಕಲ್ಮಠದ ಮಹಾಂತಸ್ವಾಮಿಜಿ, ಮಾಜಿ ವಿಧಾನ ಪರಿಸತ್‌ ಸದಸ್ಯ ಸೋಮಣ್ಣ ಬೇವಿನಮರದ, ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ, ಪಿಎಸ್‌ಐ ಸಂತೋಷಗೌಡ ಪಾಟೀಲ, ಶಿಗ್ಗಾವಿ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರೊ.ಸುಜಾತಾ ದೇವರಮನಿ ಸೇರಿದಂತೆ ಬಂಕಾಪುರ ಪುರಸಭೆ ಮಾಜಿ ಅಧ್ಯಕ್ಷರು, ಉಪಧ್ಯಕ್ಷರು, ಸದಸ್ಯರು ಮತ್ತಿತರರು ಆಗಮಿಸುವರು. ಹೆಚ್ಚಿನ ಸಂಖ್ಯೆಯಲ್ಲಿಭಕ್ತರು ಆಗಮಿಸಬೇಕು ಎಂದು ಪ್ರಕಟಣೆಯಲ್ಲಿಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ