ಆ್ಯಪ್ನಗರ

ವೈದ್ಯರ ಖಾಸಗಿ ಸೇವೆಗೆ ಶಿಸ್ತು ಕ್ರಮ

ಹಾವೇರಿ : ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಮತ್ತು ನರ್ಸಿಂಗ್‌ ಹೋಂ ಆರಂಭಿಸಿರುವ ಕುರಿತು ನಿಯಮ ಉಲ್ಲಂಘಿಸುತ್ತಿರುವ ವೈದ್ಯರಿಗೆ ಶೋಕಾಸ್‌ ನೋಟಿಸ್‌, ಕುಡಿದು ಬೈದಾಡುವ ಆಯುಷ್ಯ ವೈದ್ಯನ ಮೇಲೆ ಅಮಾನತು ಕ್ರಮ, 108 ದುರುಪಯೋಗ ತಡೆಗೆ ಲಾಗ್‌ಬುಕ್‌ ಸಿಸ್ಟಮ್‌ ಹಾಗೂ ಆಯುಷ್ಮಾನ ಕರ್ನಾಟಕ ಆರೋಗ್ಯ ಕಾರ್ಡ್‌ ಸೌಲಭ್ಯಕ್ಕೆ ಸಮರೋಪಾದಿ ಕ್ರಮ ವಿಜಯ ಕರ್ನಾಟಕ ಪತ್ರಿಕೆ

Vijaya Karnataka 19 Jan 2019, 5:00 am
ಹಾವೇರಿ :ಸರಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಮತ್ತು ನರ್ಸಿಂಗ್‌ ಹೋಂ ಆರಂಭಿಸಿರುವ ಕುರಿತು ನಿಯಮ ಉಲ್ಲಂಘಿಸುತ್ತಿರುವ ವೈದ್ಯರಿಗೆ ಶೋಕಾಸ್‌ ನೋಟಿಸ್‌, ಅಸಭ್ಯವಾಗಿ ವರ್ತಿಸುವ ಆಯುಷ್ಯ ವೈದ್ಯನ ಮೇಲೆ ಅಮಾನತು ಕ್ರಮ, 108 ದುರುಪಯೋಗ ತಡೆಗೆ ಲಾಗ್‌ಬುಕ್‌ ಸಿಸ್ಟಮ್‌ ಹಾಗೂ ಆಯುಷ್ಮಾನ ಕರ್ನಾಟಕ ಆರೋಗ್ಯ ಕಾರ್ಡ್‌ ಸೌಲಭ್ಯಕ್ಕೆ ಸಮರೋಪಾದಿ ಕ್ರಮ...
Vijaya Karnataka Web HVR-18 HAVERI 4 DR RAGHAVENDRASWAMI


'ವಿಜಯ ಕರ್ನಾಟಕ' ಶುಕ್ರವಾರ ಆಯೋಜಿಸಿದ್ದ ಫೋನ ಇನ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಾವೇರಿ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ.ನಾಗರಾಜ ನಾಯಕ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಡಾ.ಎಚ್‌.ಎಸ್‌.ರಾಘವೇಂದ್ರಸ್ವಾಮಿ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ನೀಡಿದ ಭರವಸೆಗಳಿವು.

ಆಯುಷ್ಮಾನ ಆರೋಗ್ಯ ಕರ್ನಾಟಕ

ಒಂದು ಕುಟುಂಬದಲ್ಲಿ ಸದಸ್ಯರ ಮಿತಿ ಇಲ್ಲದೇ 5 ಲಕ್ಷ ರೂ.ವರೆಗೆ ಚಿಕಿತ್ಸೆ ಪಡೆದುಕೊಳ್ಳುವ ಅವಕಾಶ ಇದೆ. ಬಿಪಿಎಲ್‌/ಎಪಿಎಲ್‌ ಕಾರ್ಡುದಾರರು ಆಧಾರ್‌ ಕಾರ್ಡ್‌ ಸಮೇತ ಜಿಲ್ಲಾ ಆಸ್ಪತ್ರೆ, ತಾಲೂಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಕಾಡ್‌Üರ್‍ ಪಡೆದುಕೊಳ್ಳಲು ಕೌಂಟರ್‌ ಆರಂಭಿಸಲಾಗಿದೆ. ಬಿಪಿಎಲ್‌ನವರಿಗೆ ಸಂಪೂರ್ಣ ಉಚಿತ/ಎಪಿಎಲ್‌.ನವರಿಗೆ ಶೇ.30 ರಷ್ಟು ಮಾತ್ರ ಸೌಲಭ್ಯವಿದೆ ಎಂದು ವೈದ್ಯರು ವಿವರಿಸಿದರು.

ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ಪಡೆದುಕೊಳ್ಳಬಹುದು. ಆದರೆ ಈ ಆಸ್ಪತ್ರೆಗಳು ಸುವರ್ಣ ಆರೋಗ್ಯ ಟ್ರಸ್ಟ್‌ನಲ್ಲಿ ನೋಂದಾಯಿಸಿಕೊಂಡಿರಬೇಕು. ಸರಕಾರಿ ಆಸ್ಪತ್ರೆಗಳಲ್ಲಿ ಸೌಕರ್ಯ ಇಲ್ಲದ ಸಂದರ್ಭದಲ್ಲಿ ವೈದ್ಯರಿಂದ ರೆಫರನ್ಸ್‌ ಕಾರ್ಡ್‌ ಪಡೆದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು. ಅನಿರೀಕ್ಷಿತ, ತುರ್ತು ಅಥವಾ ಅಪಘಾತ ಸಂದರ್ಭಗಳಲ್ಲಿ ರೆಫರನ್ಸ್‌ ಕಾರ್ಡ್‌ ಅಗತ್ಯವಿಲ್ಲ. ಎಚ್‌ಐವಿ ಬಾಧಿತರಿಗೆ ಅಂಗಾಂಗ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆಗೆ ಅವಕಾಶ ಇದೆ ಎಂದು ತಿಳಿಸಿದರು.

ಆಸ್ಪತ್ರೆ ಸ್ಥಿತಿ-ಗತಿ

ಕುಡಪಲಿ, ಕುಪ್ಪೇಲೂರ ಹಾಗೂ ಗುಡಿ ಹೊನ್ನತ್ತಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಬೆಂಗಳೂರ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಅತಿ ಶೀಘ್ರದಲ್ಲೇ ಕೆಲಸ ಆರಂಭಗೊಳ್ಳಲಿದೆ. ಕುಡಿದು ಆಸ್ಪತ್ರೆಗೆ ಬರುವ/ಸತತ ಗೈರು ಆಗುವ/ಜಿಲ್ಲಾ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ/ಹೆರಿಗೆ ಮತ್ತು ವಿಶೇಷಚೇತನ ಪ್ರಮಾಣ ಪತ್ರಕ್ಕೆ ಲಂಚದ ದೂರು ಬಂದಿವೆ. ಈಗಾಗಲೇ ಶೋಕಾಸ್‌ ನೋಟಿಸ್‌ ನೀಡಲಾಗಿದೆ ಎಂದು ಅವರು ತಿಳಿಸಿದರು.

ನೇಮಕಾತಿ ವಿಳಂಬ

ಸಂದರ್ಶನಕ್ಕೆ ಬಂದು ಆಯ್ಕೆಯಾಗದವರು ನ್ಯಾಯಾಲಯದಲ್ಲಿ ದೂರು ಸಲ್ಲಿಸಿದಲ್ಲಿ ನೇಮಕಾತಿ ಪತ್ರ ನೀಡುವುದಕ್ಕೆ ವಿಳಂಬವಾಗುತ್ತದೆ. ಸಂದರ್ಶನ ಮುಗಿದು 9 ತಿಂಗಳಾಗಿರುವ ಪ್ರಕರಣದಲ್ಲೂ ಇದೆ ಆಗಿದೆ. 6 ತಿಂಗಳು ಗತಿಸಿದಲ್ಲಿ ಹೊಸದಾಗಿ ಅರ್ಜಿ ಕರೆಯಬೇಕೆನ್ನುವುದು ನಿಯಮ. ಈ ಬಗ್ಗೆ ಮಾಧ್ಯಮಗಳ ಮೂಲಕ ಎಲ್ಲರಿಗೂ ಮಾಹಿತಿ ತಲುಪಿಸಲಾಗುವುದು ಎಂದು ಡಿಎಚ್‌ಒ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮೂಲ ಸೌಕರ್ಯ ಕೊರತೆ

ವೈದ್ಯರ ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ನಿರ್ದೇಶಕರ ಕಚೇರಿಗೆ ಪತ್ರ ಬರೆಯಲಾಗಿದೆ. ಆಸನ, ಕುಡಿಯುವ ನೀರು, ಬಾಗಿಲು ಇಲ್ಲದ ಶೌಚಾಲಯ, ಯಾವುದೇ ರೋಗಕ್ಕೂ ಒಂದೇ ಗುಳಿಗೆ ನೀಡುವುದು/ ಆಸ್ಪತ್ರೆಯ ಹೊಟೆಲ್‌ಗಳಲ್ಲಿ ಪೂರಿ-ದೋಸೆ ವಿತರಣೆ ಬಗ್ಗೆ ಜಿಲ್ಲಾ ಆಸ್ಪತ್ರೆ/ ಸವಣೂರ ಆಸ್ಪತ್ರೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವೈದ್ಯರ ಶಾಮೀಲು

ಸರಕಾರಿ ವೈದ್ಯರು ಜನೌಷಧ ಬದಲು ಖಾಸಗಿ ಮೆಡಿಕಲ್‌ ಶಾಪ್‌ಗೆ ಚೀಟಿ ಬರೆÜದುಕೊಡುವ ಪದ್ಧತಿ, ದಾಳಿ ಮಾಡುವ ಬದಲು ನಕಲಿ ವೈದ್ಯರ ಜತೆ ಶಾಮೀಲು, ಆಯುಷ್ಯ ವೈದ್ಯರಿಂದ ಇಂಗ್ಲಿಷ್‌ ಮೆಡಿಸಿನ್‌, ಆಂಬ್ಯುಲೆನ್ಸ್‌ ಇಲ್ಲದ ಆಸ್ಪತ್ರೆ ವಾಹನ ಚಾಲಕರ ಮೋಸದ ವ್ಯವಹಾರ ದೂರು ಪ್ರಕರಣದಲ್ಲಿ ಸಂಬಂಧಿಸಿದ ವೈದ್ಯರು, ಸಿಬ್ಬಂದಿ ಹಾಗೂ ಚಾಲಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದರು.

ಅಭಿನಂದನೆ

ಜಿಲ್ಲಾ ಆಸ್ಪತ್ರೆ ಕುಷ್ಟರೋಗ ವಿಭಾಗ ಸೇರಿದಂತೆ ಲಭ್ಯವಾಗುವ ಸೌಲಭ್ಯಗಳ ಕುರಿತು ಧಾರವಾಡದಿಂದ ಮಹಾದೇವಿ ಬೆಳ್ಳೂರ ಅವರು ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದು, ಫೊನ್‌ ಇನ್‌ ಕಾರ್ಯಕ್ರಮದ ವಿಶೇಷ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ