ಆ್ಯಪ್ನಗರ

ಶಾಸಕರಿಂದ ಸೋಂಕು ನಿರೋಧಕ ಸಿಂಪರಣೆ

ರಾಣೇಬೆನ್ನೂರ : ಕೊರೊನಾ ವೈರಸ್‌ ಹರಡದಂತೆ ತಡೆಗಟ್ಟುವ ಪ್ರಯುಕ್ತ ಶಾಸಕ ಅರುಣಕುಮಾರ ಮುಂದಾಳತ್ವದಲ್ಲಿಅಧಿಕಾರಿಗಳು ಶುಕ್ರವಾರ ನಗರದ ವಿವಿಧ ಭಾಗಗಳಲ್ಲಿಸ್ವಚ್ಛತಾ ಕಾರ್ಯ ಕೈಗೊಂಡರು.

Vijaya Karnataka 28 Mar 2020, 5:00 am
ರಾಣೇಬೆನ್ನೂರ : ಕೊರೊನಾ ವೈರಸ್‌ ಹರಡದಂತೆ ತಡೆಗಟ್ಟುವ ಪ್ರಯುಕ್ತ ಶಾಸಕ ಅರುಣಕುಮಾರ ಮುಂದಾಳತ್ವದಲ್ಲಿಅಧಿಕಾರಿಗಳು ಶುಕ್ರವಾರ ನಗರದ ವಿವಿಧ ಭಾಗಗಳಲ್ಲಿಸ್ವಚ್ಛತಾ ಕಾರ್ಯ ಕೈಗೊಂಡರು.
Vijaya Karnataka Web disinfectant spraying by lawmakers
ಶಾಸಕರಿಂದ ಸೋಂಕು ನಿರೋಧಕ ಸಿಂಪರಣೆ


ಇಲ್ಲಿನ ಬಸ್‌ ನಿಲ್ದಾಣದ ಆವರಣ, ಕೋರ್ಟ್‌ ಮುಂಭಾಗದ ಸರ್ಕಲ್‌ ಸುತ್ತಮುತ್ತ, ಪೊಸ್ಟ್‌ ಸರ್ಕಲ್‌, ನಗರಸಭೆ, ಸಂಗಮ್‌ ಸರ್ಕಲ್‌ ಬಳಿ ಸೋಂಕು ನಿರೋಧಕ ಸಿಂಪರಿಸಲಾಯಿತು. ಬಸ್‌ನಿಲ್ದಾಣದ ಆವರಣದಲ್ಲಿಸ್ವತಃ ಶಾಸಕರೇ ಸೋಂಕು ನಿರೋಧಕ ಸಿಂಪರಿಸಿದರು.

ಈ ಸಮಯದಲ್ಲಿಮಾತನಾಡಿದ ಶಾಸಕರು, ವೈರಸ್‌ ಸಾರ್ವತ್ರಿಕವಾಗಿ ವ್ಯಾಪಿಸದಿರಲಿ ಎಂಬ ಸದುದ್ದೇಶದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶಾದ್ಯಂತ ಲಾಕ್‌ಡೌನ್‌ ಘೋಷಣೆ ಮಾಡಿದ್ದಾರೆ. ಸಾರ್ವಜನಿಕರು ಮನೆಯಲ್ಲಿದ್ದು ತಮ್ಮ ಆರೋಗ್ಯದ ಜತೆಗೆ ದೇಶದ ರಕ್ಷಣೆಗೆ ಕೈ ಜೋಡಿಸಬೇಕು ಎಂದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ತಹಸೀಲ್ದಾರ ಬಸನಗೌಡ ಕೋಟೂರ, ನಗರಸಭೆ ಪೌರಾಯುಕ್ತ ಡಾ.ಮಹಾಂತೇಶ ಎನ್‌., ಸಕಾನಿ ಎಂಜಿನಿಯರ್‌ ಬಿ.ಎಸ್‌.ಪಾಟೀಲ, ಅಗ್ನಿಶಾಮಕ ಸಿಬ್ಬಂದಿ, ಮಂಜುನಾಥ ಓಲೇಕಾರ ಮತ್ತಿತರರು ಇದ್ದರು.

ನಂತರ ಶಾಸಕರು ನಗರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕೊರೊನಾ ಹಿನ್ನೆಲೆಯಲ್ಲಿಕೈಗೊಳ್ಳಲಾಗಿರುವ ಕ್ರಮಗಳ ಪರಿಶೀಲನೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ