ಆ್ಯಪ್ನಗರ

ಜಿಲ್ಲಾಡಳಿತ, ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ

ಹಾವೇರಿ: ಜಿಲ್ಲೆಯ ವೀರ ಯೋಧ ಶಿವಲಿಂಗೇಶ್ವರ ಪಾಟೀಲ ಅವರ ಪಾರ್ಥಿವ ಶರೀರ ಹಾವೇರಿ ನಗರಕ್ಕೆ ಆಗಮಿಸಿದರೂ ಸ್ವಾಗತಿಸಿ ಗೌರವ ಸಲ್ಲಿಸಲು ಬಾರದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮತ್ತು ಜಿಲ್ಲಾಡಳಿತ ವಿರುದ್ಧ ಶಾಸಕ ಸಿ.ಎಂ.ಉದಾಸಿ ಕಿಡಿಕಾರಿದರು.

Vijaya Karnataka 28 May 2019, 5:00 am
ಹಾವೇರಿ: ಜಿಲ್ಲೆಯ ವೀರ ಯೋಧ ಶಿವಲಿಂಗೇಶ್ವರ ಪಾಟೀಲ ಅವರ ಪಾರ್ಥಿವ ಶರೀರ ಹಾವೇರಿ ನಗರಕ್ಕೆ ಆಗಮಿಸಿದರೂ ಸ್ವಾಗತಿಸಿ ಗೌರವ ಸಲ್ಲಿಸಲು ಬಾರದ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಮತ್ತು ಜಿಲ್ಲಾಡಳಿತ ವಿರುದ್ಧ ಶಾಸಕ ಸಿ.ಎಂ.ಉದಾಸಿ ಕಿಡಿಕಾರಿದರು.
Vijaya Karnataka Web distraught against the deputy minister and deputy minister
ಜಿಲ್ಲಾಡಳಿತ, ಉಸ್ತುವಾರಿ ಸಚಿವರ ವಿರುದ್ಧ ಅಸಮಾಧಾನ


ನಗರದ ಹೊಸಮನಿ ಸಿದ್ಧಪ್ಪ ವೃತ್ತದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಮ್ಮು ಕಾಶ್ಮೀರದಲ್ಲಿ ಹುತಾತ್ಮನಾದ ಶಿವಲಿಂಗೇಶ್ವರ ಪಾಟೀಲ ಅವರ ಪಾರ್ಥಿವ ಶರೀರ ಸೋಮವಾರ ಹಾವೇರಿ ನಗರಕ್ಕೆ ಬರುತ್ತಿದೆ ಎಂದು ಗೊತ್ತಿದ್ದರೂ ಜಿಲ್ಲಾಡಳಿತವಾಗಲಿ, ಜಿಲ್ಲಾ ಮಟ್ಟದ ಅಧಿಕಾರಿಗಳಾಗಲಿ ಸ್ವಾಗತಕ್ಕೆ ಬಾರದೆ ಇರುವುದು ಖೇದಕರ ಸಂಗತಿಯಾಗಿದೆ ಎಂದರು.

ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುವ ವೀರ ಯೋಧನಿಗೆ ಗೌರವ ಸಲ್ಲಿಸದೆ ಜಿಲ್ಲಾಡಳಿತ ನಿಷ್ಕ್ರಿಯವಾಗಿ ಉಳಿದಿರುವುದು ಬೇಸರ ತರಿಸಿದೆ. ಇಷ್ಟು ದಿನ ಚುನಾವಣೆ ನೆಪ ಹೇಳುತ್ತಾ ಬಂದಿದ್ದ ಅಧಿಕಾರಿಗಳು ಚುನಾವಣೆ ಮುಗಿದರೂ ಇನ್ನೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ. ಜಿಲ್ಲಾಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು ವೀರಯೋಧನಿಗೆ ಗೌರವ ಸಲ್ಲಿಸುವಷ್ಟು ಸಮಯವಿಲ್ಲವಾಗಿದೆಯೇ ಎಂದು ಕಿಡಿಕಾರಿದರು.

ಹಾಗೆಯೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬೇರೆ ಬೇರೆ ಕೆಲಸಕ್ಕೆ ಬರುತ್ತಾರೆ. ಆದರೆ, ಒಬ್ಬ ಸೈನಿಕ ಮೃತಪಟ್ಟಿದ್ದಾನೆ ಎಂದರೆ ಅವರು ಬಾರದೆ ಇರುವುದು ವಿಷಾದಕರ ಸಂಗತಿಯಾಗಿದೆ. ವೀರಯೋಧನ ಮೃತ ದೇಹಕ್ಕೆ ಗೌರವ ಸಲ್ಲಿಸುವಷ್ಟು ಸಮಯವಿಲ್ಲವೆ ಎಂದು ಹರಿಹಾಯ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ