ಆ್ಯಪ್ನಗರ

ಜಿಲ್ಲಾಡಳಿತ ಫುಲ್‌ ಆ್ಯಕ್ಟಿವ್‌

​ಹಾವೇರಿ: ಮಹಾ ಮಾರಿ ಕೊರೊನಾ ಜಿಲ್ಲೆಗೆ ಕಾಲಿಡದಂತೆ ಜಿಲ್ಲಾಡಳಿತವನ್ನು ಅಲರ್ಟ್‌ ಮಾಡಲು ಕೃಷಿ ಸಚಿವ ಬಿ.ಸಿ. ಪಾಟೀಲ ಎಂಟ್ರೀ ಕೊಟ್ಟಿದ್ದೇ ತಡ ಜಿಲ್ಲೆಯ ನಗರ, ಪಟ್ಟಣ ಜತೆಗೆ ಗ್ರಾಮಾಂತರ ಪ್ರದೇಶದ ಅಧಿಕಾರಿಗಳು ಫುಲ್‌ ಆ್ಯಕ್ಟಿವ್‌ ಆಗಿದ್ದಾರೆ. ಬೆಳಗ್ಗೆ ಎಲ್ಲಅಧಿಕಾರಿಗಳು ತಾವು ಕ್ರಮ ಕೈಗೊಂಡಿರುವ ಬಗ್ಗೆ ಫೋಟೋ ಸಮೇತ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ.

Vijaya Karnataka 28 Mar 2020, 5:00 am
ಹಾವೇರಿ: ಮಹಾ ಮಾರಿ ಕೊರೊನಾ ಜಿಲ್ಲೆಗೆ ಕಾಲಿಡದಂತೆ ಜಿಲ್ಲಾಡಳಿತವನ್ನು ಅಲರ್ಟ್‌ ಮಾಡಲು ಕೃಷಿ ಸಚಿವ ಬಿ.ಸಿ. ಪಾಟೀಲ ಎಂಟ್ರೀ ಕೊಟ್ಟಿದ್ದೇ ತಡ ಜಿಲ್ಲೆಯ ನಗರ, ಪಟ್ಟಣ ಜತೆಗೆ ಗ್ರಾಮಾಂತರ ಪ್ರದೇಶದ ಅಧಿಕಾರಿಗಳು ಫುಲ್‌ ಆ್ಯಕ್ಟಿವ್‌ ಆಗಿದ್ದಾರೆ. ಬೆಳಗ್ಗೆ ಎಲ್ಲಅಧಿಕಾರಿಗಳು ತಾವು ಕ್ರಮ ಕೈಗೊಂಡಿರುವ ಬಗ್ಗೆ ಫೋಟೋ ಸಮೇತ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ.
Vijaya Karnataka Web district full action
ಜಿಲ್ಲಾಡಳಿತ ಫುಲ್‌ ಆ್ಯಕ್ಟಿವ್‌


ಕೃಷಿ ಸಚಿವ ಬಿ.ಸಿ. ಪಾಟೀಲ ಗುರುವಾರ ಅನಿರೀಕ್ಷಿತವಾಗಿ ಜಿಲ್ಲಾಆಸ್ಪತ್ರೆಗೆ ಭೇಟಿ ನೀಡುವ ಜತೆಗೆ ಜಿಲ್ಲಾಡಳಿತ ಭವನದಲ್ಲಿಅಧಿಕಾರಿಗಳ ಸಭೆ ನಡೆಸಿ ಬೆಂಗಳೂರಿಗೆ ವಾಪಸ್‌ ಆಗಿದ್ದರು. ಸಚಿವರ ಈ ಭೇಟಿ ಜಿಲ್ಲೆಯ ಚಿತ್ರಣವನ್ನೇ ಸಂಪೂರ್ಣ ಬದಲಾಯಿಸಿದೆ. ಅಧಿಕಾರಿಗಳು ತಮ್ಮ ಭಾಗದಲ್ಲಿಚಟುವಟಿಕೆಯಿಂದ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ ಮತ್ತು ಜಾಗೃತಿ ಸಂದೇಶ ಸಹ ರವಾನಿಸಿದ್ದಾರೆ.

ಜಿಪಂ ಸಿಇಒ ರಮೇಶ ದೇಸಾಯಿ ಆರಂಭದಿಂದಲೂ ಗ್ರಾಮೀಣ ಪ್ರದೇಶದಲ್ಲಿಶುದ್ಧ ಕುಡಿಯುವ ನೀರಿನ ಘಟಕ, ಪಂಚಾಯಿತಿ ಕಚೇರಿ ಸೇರಿದಂತೆ ಜನಸಂದಣಿ ಸೇರುವ ಪ್ರದೇಶದಲ್ಲಿಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿಬಾಕ್ಸ್‌ಗಳನ್ನು ಸಹ ನಿರ್ಮಿಸಲು ಕ್ರಮ ಕೈಗೊಂಡಿದ್ದಾರೆ.

ಸಚಿವರ ಭೇಟಿ ನಂತರ ಹಾವೇರಿಯಲ್ಲಿತಹಸೀಲ್ದಾರ ಶಂಕರ ಬಾರ್ಕಿ ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪೌರಾಯುಕ್ತ ಬಸವರಾಜ ಜಿಡ್ಡಿ ಎಪಿಎಂಸಿಯಲ್ಲಿತರಕಾರಿ ವ್ಯಾಪಾರಿಗಳ ಮೂಲಕ ತಳ್ಳುವ ಗಾಡಿಯಲ್ಲಿಯಾವ ಏರಿಯಾಕ್ಕೆ ಯಾರು ಹೋಗ ಬೇಕೆನ್ನುವ ಪಟ್ಟಿ ತಯಾರಿಸಿ ಅವರನ್ನು ತರಕಾರಿ ಸಮೇತ ಕಳಿಸಿಕೊಟ್ಟಿದ್ದಾರೆ. ಹಾವೇರಿ ನಗರಸಭೆ ಪರಿಸರ ನೈರ್ಮಲ್ಯ ವಿಭಾಗದ ಅಧಿಕಾರಿಗಳು ಕ್ರಿಮಿನಾಶಕ ಸಿಂಪಡಿಸಿ ಮುಖ್ಯ ರಸ್ತೆಗಳನ್ನು ಸ್ವಚ್ಚಗೊಳಿಸುವಲ್ಲಿನಿರತರಾಗಿದ್ದಾರೆ.

ಸವಣೂರ ಉಪ ವಿಭಾಗಾಧಿಕಾರಿ ಮಾರ್ಗದರ್ಶನದಂತೆ ಶಿಗ್ಗಾವಿ ತಹಸೀಲ್ದಾರ ಪಟ್ಟಣದ ಅಲೆಮಾರಿ ಏರಿಯಾಕ್ಕೆ ಭೇಟಿ ನೀಡಿ ಮಧ್ಯಾಹ್ನದ ಊಟ ಪೂರೈಸಿದ್ದಾರೆ. ತಡಸ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್‌ನ್ನು ಪರಿಶೀಲಿಸಿದ್ದಾರೆ. ನಗರ ಯೋಜನಾ ನಿರ್ದೇಶಕ ವೀರೇಂದ್ರ, ರಾಣೇಬೆನ್ನೂರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಪೌರಾಯುಕ್ತರ ಜತೆ ಭೇಟಿ ನೀಡಿ ಕ್ರಿಮಿನಾಶಕ ಸಿಂಪಡಿಸಿ ಶುದ್ಧೀಕರಣಕ್ಕೆ ಚಾಲನೆ ಕೊಡಿಸಿದ್ದಾರೆ. ಬಂಕಾಪುರ ಪಪಂ ಮುಖ್ಯಾಧಿಕಾರಿ ಪಟ್ಟಣದಲ್ಲಿಸ್ವಚ್ಚತೆ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಅಧಿಕಾರಿಗಳ ಈ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ