ಆ್ಯಪ್ನಗರ

ಕಲಾವಿದರ ಮಾಸಾಶನದಲ್ಲಿ ತಾರತಮ್ಯ ಬೇಡ

ಶಿಗ್ಗಾವಿ: ಕಲಾವಿದರಿಗೆ ಸರಕಾರ ನೀಡುವ ಮಾಸಾಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಶೀಲನಾ ಸಮಿತಿಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಅರ್ಹ ಕಲಾವಿದರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನೇಪಥ್ಯ ಕಲಾವಿದ ಶಂಕರ ಅರ್ಕಸಾಲಿ ಮನವಿ ಸಲ್ಲಿಸಿದ್ದಾರೆ.

Vijaya Karnataka 19 Jun 2019, 5:00 am
ಶಿಗ್ಗಾವಿ: ಕಲಾವಿದರಿಗೆ ಸರಕಾರ ನೀಡುವ ಮಾಸಾಶನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪರಿಶೀಲನಾ ಸಮಿತಿಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಅರ್ಹ ಕಲಾವಿದರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ರಾಜ್ಯ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ನೇಪಥ್ಯ ಕಲಾವಿದ ಶಂಕರ ಅರ್ಕಸಾಲಿ ಮನವಿ ಸಲ್ಲಿಸಿದ್ದಾರೆ.
Vijaya Karnataka Web do not discriminate in artistic talents
ಕಲಾವಿದರ ಮಾಸಾಶನದಲ್ಲಿ ತಾರತಮ್ಯ ಬೇಡ


ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಾವಿದರ ಮಾಸಾಶನವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನೀಡುತ್ತಿದ್ದು, ಕಲಾವಿದರ ಪ್ರಾತ್ಯಕ್ಷಿಕೆ, ಸಂದರ್ಶನ ಮಾಡುವ ಮೂಲಕ ಅವರ ಅರ್ಹ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಅಲ್ಲದೆ ಅಕಾಡೆಮಿಯಿಂದ ಶಿಫಾರಸುಗೊಂಡ ಅರ್ಜಿಗಳನ್ನು ನಿರ್ದೇಶಕರ ಮುಖಾಂತರ ಸರಕಾರಕ್ಕೆ ಸಲ್ಲಿಕೆಯಾಗುತ್ತಿವೆ. ಆದರೆ ಮಾಸಾಶನ ಅರ್ಜಿ ಪರಿಶೀಲನಾ ಸಮಿತಿ ಅಕಾಡೆಮಿ ಶಿಫಾರಸನ್ನು ಧಿಕ್ಕರಿಸುತ್ತಿದೆ ಎಂದು ದೂರಿದರು.

ನಾಡಿನ ಹೆಸರಾಂತ ಕಲಾವಿದರು ಈ ಸಮಿತಿಯಲ್ಲಿದ್ದು, ಕಲಾವಿದ ಸಮಸ್ಯೆ, ಸಂಕಷ್ಟಗಳನ್ನು ಹತ್ತಿರದಿಂದ ಕಂಡಿದ್ದಾರೆ. ಅಕಾಡೆಮಿ ಹಾಗೂ ನಿರ್ದೇಶಕರ ಶಿಫಾರಸ್ಸಿಗೆ ಬೆಲೆಕೊಡದೆ ಅರ್ಜಿಗಳನ್ನು ತಿರಸ್ಕರಿಸುವುದು ಸರಿಯಲ್ಲ. ಇದರಿಂದ ಅರ್ಹ ಕಲಾವಿದರಿಗೆ ಅನ್ಯಾಯವಾಗುತ್ತಿದೆ.

ಕಳೆದ ವರ್ಷದಲ್ಲಿ ನಾಟಕ, ಜಾನಪದ ಸಂಗೀತ, ಸಾಹಿತ್ಯ, ಯಕ್ಷ ಗಾನ, ಬಯಲಾಟ, ಶಿಲ್ಪಕಲೆಯ ಅಕಾಡೆಮಿಗೆ ಸಂಬಂಧಿಸಿದ ಸುಮಾರು 550 ಸಂದರ್ಶನದಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಸಮಿತಿ 400 ಅರ್ಜಿಗಳನ್ನು ತಿರಸ್ಕಾರ ಮಾಡಿದೆ. ಕಲಾವಿದರಿಂದ ಕಲಾವಿದರಿಗೆ ಅನ್ಯಾಯವಾಗುತ್ತಿದ್ದು. ಕಲೆಯನ್ನೇ ನಂಬಿ ಬದುಕುವ ಕಲಾವಿದರ ಬದುಕು ಬೀದಿಗೆ ಬರುವಂತಾಗಿದೆ. ಸಮಿತಿ ಮಾಡುವ ತಪ್ಪುಗಳನ್ನು ಸರಿಪಡಿಸಿ ಅರ್ಹ ಕಲಾವಿದರಿಗೆ ಮಾಶಾಸನ ನೀಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ