ಆ್ಯಪ್ನಗರ

ಕೊರೊನಾ ಸೋಂಕಿಗೆ ಭಯಬೇಡ

ಶಿಗ್ಗಾವಿ : ಕೊರೊನಾ ಸೋಂಕಿಗೆ ಭಯ ಪಡಬೇಡಿ. ನಮ್ಮೂರಿನ ಜನರನ್ನು ನಾವೇ ರಕ್ಷಿಸಬೇಕಿದೆ. ಸಾರ್ವಜನಿಕರು ಎಲ್ಲರೀತಿಯ ಅಹಕಾರ ನೀಡಬೇಕು ಎಂದು ಖ್ಯಾತ ವೈದ್ಯೆ ಡಾ.ರಾಣಿ ತಿರ್ಲಾಪುರ ಮನವಿ ಮಾಡಿದ್ದಾರೆ.

Vijaya Karnataka 7 Jul 2020, 5:00 am
ಶಿಗ್ಗಾವಿ : ಕೊರೊನಾ ಸೋಂಕಿಗೆ ಭಯ ಪಡಬೇಡಿ. ನಮ್ಮೂರಿನ ಜನರನ್ನು ನಾವೇ ರಕ್ಷಿಸಬೇಕಿದೆ. ಸಾರ್ವಜನಿಕರು ಎಲ್ಲರೀತಿಯ ಅಹಕಾರ ನೀಡಬೇಕು ಎಂದು ಖ್ಯಾತ ವೈದ್ಯೆ ಡಾ.ರಾಣಿ ತಿರ್ಲಾಪುರ ಮನವಿ ಮಾಡಿದ್ದಾರೆ.
Vijaya Karnataka Web 6SGN-1_23
ವೈದ್ಯೆ ಡಾ. ಡಾಣಿ ತಿರ್ಲಾಪೂರ


ಸೋಮವಾರ ಪ್ರಕಟಣೆಯೊಂದರಲ್ಲಿಮನವಿ ಮಾಡಿದ ಅವರು, ನಾವು ವೈದ್ಯರು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಕೊರೊನಾ ಪ್ರಕರಣ ಹೆಚ್ಚಿವೆ. ನಮ್ಮೂರಿನ ಜನರನ್ನು ನಾವೇ ರಕ್ಷಿಸಬೇಕಿದೆ. ಅದಕ್ಕಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ಸಾರ್ವಜನಿಕರ ಸಹಕಾರ ಅವಶ್ಯವಾಗಿದೆ. ಸಹಕಾರ ಕೊಡಿ. ವೈದ್ಯರು ಪ್ರಾಣದ ಹಂಗು ತೊರೆದು ಜನರ ಜೀವ ರಕ್ಷಣೆಗೆ ಪಣ ತೊಟ್ಟು ಕಾರ್ಯನ್ಮುಖರಾಗಿದ್ದಾರೆ.

ಸಾರ್ವಜನಿಕರ ಸಹಕಾರದಿಂದ ವೈದ್ಯರು ಚಿಕಿತ್ಸೆ ನೀಡಲು ಸಾದ್ಯವಿದೆ. ಭಯ ಪಡಬೇಡ. ನಮ್ಮಲ್ಲಿಯ ಜನರಿಗೆ ನಮ್ಮೂರಿನಲ್ಲಿಯೇ ಚಿಕಿತ್ಸೆ ದೊರೆಯವಂತಾದರೆ ರೋಗಿಗಳಿಗೆ ಆತ್ಮಸ್ಥೆತ್ರೖರ್ಯ ಬರುತ್ತದೆ ಎಂಬ ಉದ್ದೇಶದಿಂದ ಸರಕಾರ ಖಾಸಗಿ ಆಸ್ಪತ್ರೆ ತೆರೆಯಲು ಸೂಚಿಸಿದೆ. ಹೀಗಾಗಿ ಕೊರೊನಾ ಸೋಂಕು ತೊಲುಗಿಸಲು ಮೊದಲು ಜನರಲ್ಲಿನ ಭಯ ಹೋಗಲಾಡಿಸಬೇಕಿದೆ. ಈ ಕುರಿತು ಜಾಗೃತಿ ಮೂಲಕ ಚಿಕಿತ್ಸೆ ನೀಡುವ ಉದ್ದೇಶ ವೈದ್ಯರಾಗಿದೆ ಹೊರತು, ಆಸ್ಪತ್ರೆ ತೆರೆದು ಜನರಿಗೆ ತೊಂದರೆಯಂಟು ಮಾಡುವ ಉದ್ದೇಶವಿಲ್ಲ. ಎಲ್ಲಮುನ್ನಚ್ಚರಿಕೆಗಳೊಂದಿಗೆ ಸುರಕ್ಷತೆಯ ಸೌಲಭ್ಯ ಒಳಗೊಂಡ ಆಸ್ಪತ್ರೆ ತೆರೆಯಲಾಗುತ್ತದೆ. ಸಹಕಾರ ಕೊಡಿ. ವಿರೋಧ ವ್ಯಕ್ತಪಡಿಸುವುದರಿಂದ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತದೆ.

ತೆರೆದ ಆಸ್ಪತ್ರೆಯಲ್ಲಿಸಾಮಾನ್ಯ ಚಿಕಿತ್ಸೆ ಮತ್ತು ಅವರಿಗೆ ಆಹಾರ ವ್ಯವಸ್ಥೆ ಮಾಡಲು ಸರಕಾರವೇ ವೈದ್ಯರನ್ನು ನೇಮಿಸಿ ಚಿಕಿತ್ಸೆ ನೀಡಲು ಸೂಚಿಸಿದೆ. ಚಿಕಿತ್ಸೆಗಾಗಿ ವಸತಿ ನಿಲಯ ಸ್ಥಾಪಿಸಲಾಗುತ್ತಿದೆಯೋ ಹೊರತು, ಇಲ್ಲಿಆಸ್ಪತ್ರೆಯನ್ನೇ ತೆರೆಯಲಾಗುತ್ತಿದೆ ಎಂದು ಭಯಪಟ್ಟು ವಿರೋಧಿಸಬಾರದು. ಇದು ಸಾರ್ವಜನಿಕರಿಗಾಗಿಯೇ ತೆರೆಯಲಾಗುತ್ತಿದೆ ಎಂದು ಡಾ.ತಿರ್ಲಾಪುರ ಪ್ರಕಟಣೆಯಲ್ಲಿಸ್ಪಷ್ಟಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ