ಆ್ಯಪ್ನಗರ

ಸಂಗೀತದಿಂದ ಮನಸ್ಸಿಗೆ ನೆಮ್ಮದಿ

ಹಾವೇರಿ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಮುದ ನೀಡುತ್ತದೆ. ಸಂಗೀತಕ್ಕೆ ಯಾವುದೇ ಭಾಷೆ, ಗಡಿ, ಜಾತಿ ಇಲ್ಲ ಎಂದು ಶಿಶುನಾಳ ಶರೀಫಜ್ಜನವರ ಮೊಮ್ಮಗ ಹುಸೇನ್‌ಸಾಬ ಶರೀಫನವರ ಹೇಳಿದರು.

Vijaya Karnataka 14 Aug 2019, 5:00 am
ಹಾವೇರಿ: ಸಂಗೀತ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಮುದ ನೀಡುತ್ತದೆ. ಸಂಗೀತಕ್ಕೆ ಯಾವುದೇ ಭಾಷೆ, ಗಡಿ, ಜಾತಿ ಇಲ್ಲ ಎಂದು ಶಿಶುನಾಳ ಶರೀಫಜ್ಜನವರ ಮೊಮ್ಮಗ ಹುಸೇನ್‌ಸಾಬ ಶರೀಫನವರ ಹೇಳಿದರು.
Vijaya Karnataka Web HVR-12 HAVERI 8


ನಗರದಲ್ಲಿ ಸೋಮವಾರ ನಡೆದ ಕರೋಕೆ, ಆ್ಯಕ್ಟಿಂಗ್‌ ತರಬೇತಿ ಮತ್ತು ರಿಕಾರ್ಡಿಂಗ್‌ ಸೆಂಟರ್‌ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಹಾಡು ಹಾಡುವ ಮೂಲಕ ಉದ್ಘಾಟಿಸಿದರು.

ಸಂಗೀತಕ್ಕೆ ಯಾವ ವಯಸ್ಸಿನ ಮಿತಿ ಇಲ್ಲ. ಸಂಗೀತ ಕೇಳುವುದರಿಂದ ಮನುಷ್ಯನಲ್ಲಿರುವ ಕಾಯಿಲೆಗಳು ದೂರವಾಗುತ್ತವೆ. ಸಂಗೀತವನ್ನು ಹಾಡುವುದು ಅಷ್ಠೇ ಅಲ್ಲ. ಅದನ್ನು ಕೇಳುವುದು ಸಹ ಒಳ್ಳೆಯದು. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಶರೀಫರು ರಚಿಸಿದ ಎಂತ ಭಕ್ತಿ ಹೋಂಟಾಳಿಕಿ ಕುಂಬಾರಕಿ.. ಕೋಡಗನ ಕೋಳಿ ನುಂಗಿತ್ತಾ ತಂಗಿ.. ಗೀತೆಗಳನ್ನು ಹಾಡಿ ರಂಜಿಸಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಕಬಾಡಿ, ಶಿವಬಸವ ಬಣಕಾರ, ವೀರಣ್ಣ ಬೈರಾಪುರ, ಸತೀಶ ಚವ್ಹಾಣ, ಮಾರುತಿ ಜಂಗಣ್ಣನವರ, ಕೆ. ಪರಶೆಟ್ಟಿ, ಕರೇಗೌಡ ಪಾಟೀಲ, ವೀಣಾ, ಕಾವ್ಯಾ, ಶಿಲ್ಪಾ ಕಬಾಡಿ, ಶಶಿಕಲಾ ಪಾಟೀಲ, ಶ್ರೇಯಾ ಬಣಕಾರ ಸುಚಿತಾ ಕಬಾಡಿ, ಸೇರಿದಂತೆ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ