ಆ್ಯಪ್ನಗರ

ರಸ್ತೆ ಕಾಮಗಾರಿಗೆ ಚಾಲನೆ

ಹಾನಗಲ್ಲ: ತಾಲೂಕಿನ ಹಿರೇಕಾಂಶಿ ಗ್ರಾಮದಲ್ಲಿ46 ಲಕ್ಷ ರೂ.ಗಳಲ್ಲಿನಿರ್ಮಿಸುವ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಮತ್ತು 12 ಲಕ್ಷ ರೂ.ಗಳಲ್ಲಿಸ್ಥಾಪನೆಗೊಂಡ ಶುದ್ಧ ಕುಡಿವ ನೀರಿನ ಘಟಕಕ್ಕೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.

Vijaya Karnataka 7 Nov 2019, 5:00 am
ಹಾನಗಲ್ಲ: ತಾಲೂಕಿನ ಹಿರೇಕಾಂಶಿ ಗ್ರಾಮದಲ್ಲಿ46 ಲಕ್ಷ ರೂ.ಗಳಲ್ಲಿನಿರ್ಮಿಸುವ ಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಮತ್ತು 12 ಲಕ್ಷ ರೂ.ಗಳಲ್ಲಿಸ್ಥಾಪನೆಗೊಂಡ ಶುದ್ಧ ಕುಡಿವ ನೀರಿನ ಘಟಕಕ್ಕೆ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.
Vijaya Karnataka Web drive to road work
ರಸ್ತೆ ಕಾಮಗಾರಿಗೆ ಚಾಲನೆ


ಈ ಸಂದರ್ಭದಲ್ಲಿಮಾತನಾಡಿದ ಅವರು, ಈ ಭಾಗದ ರೈತರ ಬಹು ಬೇಡಿಕೆಯ ಹಿರೇಕಾಂಶಿ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಬರುವ ಹಂತ ತಲುಪಿದ್ದು, ಯೋಜನೆಗಾಗಿ ರಾಜ್ಯ ಸರಕಾರ ಅನುದಾನ ಮೀಸಲಿಟ್ಟಿದೆ. ವರದಾ ನದಿ ನೀರು ಸದ್ಭಳಕೆ ಮೂಲಕ ಈ ವ್ಯಾಪ್ತಿಯ ಸಾಕಷ್ಟು ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸಲು, ಅಂತರ್ಜಲಮಟ್ಟ ಹೆಚ್ಚಿಸಲು ಸಾಧ್ಯವಾಗಲಿದೆ ಎಂದರು.

ಬಳಿಕ ಹೊಂಕಣ ಗ್ರಾಮದಲ್ಲಿ14 ಲಕ್ಷ ರೂ. ವೆಚ್ಚದಲ್ಲಿಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಗೊಂದಿ ಗ್ರಾಮದಲ್ಲಿ14 ಲಕ್ಷ ರೂ. ಮೊತ್ತದಲ್ಲಿಕಾಂಕ್ರಿಟ್‌ ರಸ್ತೆ ಕಾಮಗಾರಿಗೆ ಚಾಲನೆ ನೀಡಿ, 5 ಲಕ್ಷದಲ್ಲಿನಿರ್ಮಾಣಗೊಂಡ ರೈತ ತರಬೇತಿ ಕೇಂದ್ರ ಉದ್ಘಾಟಿಸಿದರು.

ಜಿ.ಪಂ ಸದಸ್ಯ ಮಾಲತೇಶ ಸೊಪ್ಪಿನ, ಶಿವಲಿಂಗಪ್ಪ ತಲ್ಲೂರ, ಕಲ್ಯಾಣಕುಮಾರ ಶೆಟ್ಟರ, ನಿಂಗಪ್ಪ ಗೊಬ್ಬೇರ, ಜಿ.ಎಸ್‌.ದೇಶಪಾಂಡೆ, ಚಂದ್ರಪ್ಪ ಹರಿಜನ, ರಮೇಶ ತಳವಾರ, ಪಿಡಬ್ಲುಡಿ ಎಂಜನಿಯರ್‌ ನಾಗರಾಜ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ