ಆ್ಯಪ್ನಗರ

ಹಿರೇಕೆರೂರಲ್ಲಿ ಕಾನೂನು ಸಾಕ್ಷ ರತಾ ರಥಯಾತ್ರೆಗೆ ಚಾಲನೆ

ಹಿರೇಕೆರೂರು: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಕಾನೂನು ಸಾಕ್ಷ ರತಾ ಕಾರ್ಯಕ್ರಮಗಳ ಅಡಿಯಲ್ಲಿ ನಾಲ್ಕು ದಿನಗಳ ಕಾನೂನು ಸಾಕ್ಷ ರತಾ ರಥಯಾತ್ರೆಗೆ ದಿವಾಣಿ ನ್ಯಾಯಾದೀಶ ಕೆ.ಎಂ.ಪುಟ್ಟಸ್ವಾಮಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.

Vijaya Karnataka 30 May 2019, 5:00 am
ಹಿರೇಕೆರೂರು: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ತಾಲೂಕು ನ್ಯಾಯವಾದಿಗಳ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಕಾನೂನು ಸಾಕ್ಷ ರತಾ ಕಾರ್ಯಕ್ರಮಗಳ ಅಡಿಯಲ್ಲಿ ನಾಲ್ಕು ದಿನಗಳ ಕಾನೂನು ಸಾಕ್ಷ ರತಾ ರಥಯಾತ್ರೆಗೆ ದಿವಾಣಿ ನ್ಯಾಯಾದೀಶ ಕೆ.ಎಂ.ಪುಟ್ಟಸ್ವಾಮಿ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.
Vijaya Karnataka Web HVR-29HKR 1


ಬಳಿಕ ಮಾತನಾಡಿ, ಜನರಲ್ಲಿ ಕಾನೂನು ಸಾಕ್ಷ ರತೆ ಮೂಡಿಸಲು ಈ ರಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕಿನ ಕಮಲಾಪುರ, ಹಳ್ಳೂರು, ಚಿಕ್ಕಕಬ್ಬಾರ, ತಡಕನಹಳ್ಳಿ, ನಾಗವಂದ, ಗುಡ್ಡದಮಾದಾಪುರ, ಜೋಗಿಹಳ್ಳಿ, ಹಿರೇಯಡಚಿ, ಚಿಕ್ಕಯಡಚಿ, ಯೋಗಿಕೊಪ್ಪ, ಚಿನ್ನಮುಳಗುಂದ ಹಾಗೂ ಲಿಂಗಾಪುರ ಗ್ರಾಮಗಳಲ್ಲಿ ರಥಯಾತ್ರೆ ನಡೆಯಲಿದೆ. ಆಯಾ ಗ್ರಾಮಗಳ ಜನರಲ್ಲಿ ಕಾನೂನಿನ ಮೂಲ ಹಾಗೂ ಅರಿವು ಮೂಡಿಸಲಾಗುವುದು. ವಾಹನ ಚಾಲನಾ ಪರವಾನಿಗೆ, ಇನ್ಸುರೆನ್ಸ್‌, ಜೀತ ಪದ್ದತಿ, ಕೌಟುಂಬಿಕ ಕಲಹ, ಬಾಲ್ಯವಿವಾಹ ಸೇರಿದಂತೆ ಮುಂತಾದವುಗಳ ಬಗ್ಗೆ ಜನರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.

ಕಾನೂನಿನ ಜ್ಞಾನ ಹೊಂದಿದರೆ ಸಮಾಜದಲ್ಲಿ ಯಾವುದೆ ಅವಘಡಗಳು ನಡೆಯಲು ಸಾಧ್ಯವಿಲ್ಲ ಎಂಬುದನ್ನು ಜನರಿಗೆ ಕಾನೂನು ಸಾಕ್ಷ ರತಾ ಮೂಲಕ ಮಾಹಿತಿ ನೀಡಲಾಗುವುದು ಎಂದು ಹೇಳಿದರು. ಕಾನೂನು ಸೇವಾ ಸಮಿತಿಯ ಧ್ಯೇಯೋದ್ದೇಶಗಳು, ಕಾನೂನು ಸೇವಾ ಸಮಿತಿಯಿಂದ ಉಚಿತವಾಗಿ ದೊರೆಯುವ ಸೇವೆಗಳ ಬಗ್ಗೆ ಹಾಗೂ ಉಚಿತ ಕಾನೂನು ನೆರವು ಮತ್ತು ಸಲಹೆ ನೀಡಲಾಗುವುದು ಎಂದು ಹೇಳಿದರು. ವರದಕ್ಷಿಣೆ ನಿಷೇಧ ಕಾಯ್ದೆ, ಜೀವನಾಂಶದ ಕಾನೂನು, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ, ಬಾಲಕಾರ್ಮಿಕ ಮತ್ತು ಜೀತಪದ್ದತಿ ನಿರ್ಮೂಲನೆ, ಜನನ ಮತ್ತು ಮರಣ ನೋಂದಣಿ, ಕರ್ನಾಟಕ ಪೊಲೀಸ್‌ ಕಾಯ್ದೆ, ಸಕಾಲ ಯೋಜನೆ, ತಂಬಾಕು ವಿರೋಧಿ ದಿನ, ಮೋಟಾರ್‌ ವಾಹನ ಕಾಯ್ದೆ ಮತ್ತು ಜನರಲ್‌ ಇನ್ಸುರೆನ್ಸ್‌, ಹಿರಿಯ ನಾಗರಿಕರ ಕಾಯ್ದೆ ಮತ್ತು ವೈದ್ಯಕೀಯ ಸಲಹೆಗಳು ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ದತ್ತಕ ಉಯಿಲು ಹಿಂದೂ ವಾರಸಾ ಕಾಯ್ದೆ ಕುರಿತು ಉಪನ್ಯಾಸಕರಿಂದ ಜನರಿಗೆ ಮಾಹಿತಿ ಕೊಡಿಸಲಾಗುವುದು ಎಂದು ಹೇಳಿದರು.

ಹೆಚ್ಚುವರಿ ದಿವಾಣಿ ನ್ಯಾಯಾದೀಶ ಎಸ್‌.ಕೆ.ಜನಾರ್ಧನ, ದಿವಾಣಿ ನ್ಯಾಯಾದೀಶ ಡಿ.ಸಚಿನ್‌, ಸಿಪಿಐ ಮಂಜುನಾಥ ಪಂಡಿತ್‌, ತಾಲೂಕಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಜಯಣ್ಣ ಹೊಳೆಆನ್ವೇರಿ, ಕಾರ್ಯದರ್ಶಿ ಮಾರುತಿ ಜೋಕನಾಳ, ನ್ಯಾಯವಾದಿಗಳಾದ ಎಸ್‌.ಬಿ.ತಿಪ್ಪಣ್ಣನವರ, ಬಿ.ಎನ್‌.ಬಣಕಾರ, ಯು.ಬಿ.ಜೋಗಿಹಳ್ಳಿ, ಹಸೀನಾಬಾನು ಮೂಲಿಮನಿ, ಎಸ್‌.ಪಿ.ಖಂಡೇಬಾಗೂರು, ಎಸ್‌.ಆರ್‌.ಅಂಗಡಿ, ಪಿ.ಎಫ್‌.ಜಾಡರ್‌, ಪಿ.ಹೆಚ್‌.ಪಾಟೀಲ್‌, ಆರ್‌.ಪಿ.ಹೊಸರಾಯಪ್ಪನವರ, ಎಸ್‌.ಎಸ್‌.ಹುಲ್ಲತ್ತಿ, ಎನ್‌.ಎಸ್‌.ಹುಲ್ಲತ್ತಿ, ಎಸ್‌.ಎನ್‌.ಕಡೇಮನಿ, ಎಸ್‌.ಎನ್‌.ಮುಲ್ಲಾ, ಎಂ.ಬಿ.ಪಾಟೀಲ್‌, ಎನ್‌.ವಿ.ಪಾಟೀಲ್‌. ಎ.ಎ.ಎಲಿವಾಳ, ಎಸ್‌.ಹೆಚ್‌.ಪಾಟೀಲ್‌, ಬಿ.ಎನ್‌.ಕುಲಕರ್ಣಿ, ಬಿ.ಜಿ.ಪಾಟೀಲ್‌, ಜಿ.ಎಸ್‌.ಮತ್ತೂರು, ಜಗದೀಶ ಬಳಿಗಾರ, ಗೀತಾ ಬಾಳಿಕಾಯಿ, ವಿ.ಎನ್‌.ಮಡಿವಾಳರ, ವಿ.ವಿ.ಮುಚುಡಿ, ಕೆ.ಬಿ.ಬಾಳಿಕಾಯಿ, ಎಲ್‌.ಹೆಚ್‌.ಕಳ್ಳಿಮನಿ, ಸಂತೋಷ ಪಾಟೀಲ್‌, ಎಂ.ಕೆ.ಮಂಜುನಾಥ, ಐ.ಬಿ.ಗುಬ್ಬೇರ, ಬಿ.ಬಿ.ಅಬಲೂರು, ಸಿ.ಆರ್‌.ಗೌಡರ್‌, ಡಿ.ಎ.ಜವಳಿ, ಪ್ರಕಾಶ ಉಪ್ಪಾರ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾನೂನು ಸಾಕ್ಷ ರತಾ ರಥಯಾತ್ರೆ ನಾಲ್ಕು ದಿನಗಳ ಕಾಲ ತಾಲೂಕಿನ ಕಮಲಾಪುರ, ಹಳ್ಳೂರು, ಚಿಕ್ಕಕಬ್ಬಾರ, ತಡಕನಹಳ್ಳಿ, ನಾಗವಂದ, ಗುಡ್ಡದಮಾದಾಪುರ, ಜೋಗಿಹಳ್ಳಿ, ಹಿರೇಯಡಚಿ, ಚಿಕ್ಕಯಡಚಿ, ಯೋಗಿಕೊಪ್ಪ, ಚಿನ್ನಮುಳಗುಂದ ಹಾಗೂ ಲಿಂಗಾಪುರ ಗ್ರಾಮಗಳಲ್ಲಿ ಸಂಚರಿಸಲಿದೆ. ಹಾಗೂ ಆಯಾ ಗ್ರಾಮಗಳಲ್ಲಿ ಸಾಕ್ಷ ರತಾ ಕಾರ್ಯಕ್ರಮಗಳು ತಾಲೂಕಾ ಕಾನೂನು ಸೇವಾ ಸಮಿತಿ ಅಧ್ಯಕ್ಷ , ಹಿರಿಯ ದಿವಾಣಿ ನ್ಯಾಯಾದೀಶ ಕೆ.ಎಂ.ಪುಟ್ಟಸ್ವಾಮಿ ನೇತೃತ್ವದಲ್ಲಿ ಜರುಗಲಿವೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ